ಜುಲೈಯಲ್ಲಿ ದಾಖಲೆಯ 113ಕ್ಕೂ ಅಧಿಕ ಕರೆ ಸ್ವೀಕರಿಸಿದ ಚೈಲ್ಡ್‌ಲೈನ್‌


Team Udayavani, Jul 30, 2021, 6:25 AM IST

ಜುಲೈಯಲ್ಲಿ ದಾಖಲೆಯ 113ಕ್ಕೂ ಅಧಿಕ ಕರೆ ಸ್ವೀಕರಿಸಿದ ಚೈಲ್ಡ್‌ಲೈನ್‌

ಮಂಗಳೂರು: ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಯ ಡಿಯಲ್ಲಿ ದಿನದ 24 ಗಂಟೆಗಳ ಮಕ್ಕಳಿಗೆ ತುರ್ತು ಸೇವೆಯನ್ನು ನೀಡುತ್ತಿರುವ  ಚೈಲ್ಡ್‌ ಲೈನ್‌-1098 ದ.ಕ.ಜಿಲ್ಲಾ ಕಚೇರಿಗೆ 80ರಷ್ಟು ಬರುತ್ತಿದ್ದ ಪ್ರಕರಣ ಗಳು ಜುಲೈ ತಿಂಗಳಲ್ಲಿ  ಈ ತನಕ 113ಕ್ಕೆ  ಏರಿವೆ. ಜು. 31 ರ ವೇಳೆಗೆ ಈ ಸಂಖ್ಯೆ ಇನ್ನೂ ಏರಿಕೆ ಆಗಲಿದೆ.

ಈ ಹಿಂದೆ 2019ರಲ್ಲಿ ಅತ್ಯಧಿಕ ಎಂದರೆ 102 ಕರೆಗಳು ಬಂದಿದ್ದು, ಇದೀಗ 2 ವರ್ಷಗಳ ಅಂತರದ ಬಳಿಕ ಇದೇ ಜುಲೈಯಲ್ಲಿ ಅತ್ಯಧಿಕ ಕರೆಗಳು (113) ಬಂದಿವೆ.

ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕು ಗಳಲ್ಲಿನ ಮಕ್ಕಳಿಂದ ಅನೇಕ ರೀತಿಯ ಕರೆಗಳು ಬರುತ್ತಿದ್ದು ಲಾಕ್‌ಡೌನ್‌ ಸಂದರ್ಭದಲ್ಲಿ ನಡೆದಿರುವ ದೌರ್ಜನ್ಯಗಳು ಹಾಗೂ ಇತರ  ಪ್ರಕರಣಗಳು ಅನ್‌ಲಾಕ್‌ ಆಗಿರುವ ಸಂದರ್ಭದಲ್ಲಿ ಹೊರಬರುತ್ತಿವೆ.

ಮಕ್ಕಳ ತುರ್ತು ರಕ್ಷಣೆ ಹಾಗೂ ಪೋಷಣೆ  ಮಾತ್ರವಲ್ಲದೆ ಮಕ್ಕಳ ಎಲ್ಲ ಸಮಸ್ಯೆಗಳಿಗೆ ತುರ್ತು ಪ್ರತಿಸ್ಪಂದನೆ ಯನ್ನು ಚೈಲ್ಡ್‌ಲೈನ್‌ ನೀಡುತ್ತಿದ್ದು ಗ್ರಾಮಾಂತರ ಹಾಗೂ ಒಳನಾಡಿನ ಪ್ರದೇಶದಲ್ಲಿ ವಾಸಿಸುವ ಮಕ್ಕಳಿಗೆ ಹೆಚ್ಚಿನ ರೀತಿಯ ಸಮಸ್ಯೆ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಚೈಲ್ಡ್‌ಲೈನ್‌ ಪ್ರಕಟನೆ ತಿಳಿಸಿದೆ.

ಆಹಾರಕ್ಕಾಗಿ ಹೆಚ್ಚು ಕರೆ:

ರೇಶನ್‌ ಕಿಟ್‌ ಅಪೇಕ್ಷಿಸಿ 43 ಕರೆಗಳು ಬಂದಿದ್ದು, ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಬಹುತೇಕ ಎಲ್ಲರಿಗೂ ಕಿಟ್‌ ಪೂರೈಕೆಗೆ ವ್ಯವಸ್ಥೆ  ಮಾಡಲಾಗಿದೆ. ಮಕ್ಕಳ ಭಿಕ್ಷಾಟನೆ ಕುರಿತಂತೆ 15 ಪ್ರಕರಣಗಳು ವರದಿಯಾಗಿವೆ. ವಸತಿ ವ್ಯವಸ್ಥೆ  ಕೋರಿ 9 ಕರೆ, ಮಾನಸಿಕ ಕಿರುಕುಳದ 6 ಕರೆಗಳು ಸ್ವೀಕೃತವಾಗಿವೆ. ಆನಲೈನ್‌ ತರಗತಿಗಳು ನಡೆಯುತ್ತಿರುವ ಕಾರಣ ಮೊಬೈಲ್‌ ಫೋನ್‌ ಸಂಬಂಧಿತ ದೂರು ಮತ್ತು ನೆಟ್‌ವರ್ಕ್‌ ಸಮಸ್ಯೆಯ ಕರೆಗಳೂ ಬಂದಿವೆ.

ಮನವಿ: ಗ್ರಾಮಾಂತರ ಪ್ರದೇಶಗ ಳಲ್ಲಿ ವಾಸಿಸುತ್ತಿರುವ ಮಕ್ಕಳಿಗೆ ನೆಟ್‌ ವರ್ಕ್‌ ಸಮಸ್ಯೆಯಿದ್ದು ಕೆಲವೊಂದು ಬಾರಿ 1098ಕ್ಕೆ ಕರೆಗಳು ಹೋಗದೆ ಇದ್ದಲ್ಲಿ ಸಾರ್ವಜನಿಕರು ಸ್ಥಳೀಯ ಅಂಗನವಾಡಿ/ ಆಶಾ ಕಾರ್ಯಕರ್ತೆ ಯರ ಗಮನಕ್ಕೆ ತರುವಂತೆ ಚೈಲ್ಡ್‌ ಲೈನ್‌ ವಕ್ತಾರರು ತಿಳಿಸಿದ್ದಾರೆ.

ಕರೆಗಳ ವಿವರ:

ವೈದ್ಯಕೀಯ ನೆರವು 1

ವಸತಿ ವ್ಯವಸ್ಥೆ  9

ಪ್ರಾಯೋಜಕತ್ವ 4

ಸರಕಾರಿ ಯೋಜನೆಗಳ ಕುರಿತು  1

ಸಿಕ್ಕಿರುವ ಮಗು 2

ಕಾಣೆಯಾಗಿರುವ ಮಗು 2

ರೇಶ‌ನ್‌ ಕಿಟ್‌     43

ದೈಹಿಕ ಹಿಂಸೆ   6

ಲೈಂಗಿಕ ದೌರ್ಜನ್ಯ       1

ಮಾನಸಿಕ ಹಿಂಸೆ          6

ಭಿಕ್ಷಾಟನೆ 15

ಆಪ್ತ ಸಮಾಲೋಚನೆ  2

ಕುಟುಂಬ ಕಲಹ          4

ಮಾಹಿತಿಗಾಗಿ ಕರೆ         1

ಇತರ   4

ಸಾಗಾಟಕ್ಕೆ ಪ್ರಯತ್ನ     2

ಬಾಲ್ಯವಿವಾಹ 1

ಇತರ (ಸಂಬಂಧಿಸದೇ ಇರುವ)  1

ಬಾಲಕಾರ್ಮಿಕ 2

ಶಿಕ್ಷಣಕ್ಕೆ ಸಂಬಂಧಿಸಿದಂತೆ        5

ಕಾನೂನಿನ ಸಂಘರ್ಷಕ್ಕೆ ಒಳಗಾದ ಮಗು          1

ಟಾಪ್ ನ್ಯೂಸ್

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

16-

ನಟ, ಕಾಂಗ್ರೆಸ್‌ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.