ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಕಂದಮ್ಮಗಳು: ಸಹಾಯಕ್ಕೆ ಮನವಿ


Team Udayavani, Aug 31, 2019, 5:28 AM IST

2908RJH11

ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳು.

ನಗರ: ದೇಹಕ್ಕಿಂತ ಹೆಚ್ಚು ತೂಕದಲ್ಲಿರುವ ತಲೆ, ಹೊರಲಾಡಲೂ ಆಗದೆ ನರಕಯಾತನೆ ಅನುಭವಿಸುತ್ತಿರುವ ಪುಟ್ಟ ಕಂದಮ್ಮಗಳು, ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲದೆ ಕಣ್ಣೀರಿಡುತ್ತಿರುವ ತಾಯಿ.

ಕುಂಬ್ರ ಸಮೀಪದ ಕೆದಂಬಾಡಿ ಗ್ರಾಮದ ಸಾರೆಪುಣಿಯಲ್ಲಿರುವ ಕುಟುಂಬವೊಂದರ ದಯನೀಯ ಸ್ಥಿತಿ ಇದು. ಮೂಲತಃ ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ಜುಬೈದಾ ಅವರ ಕಂದಮ್ಮಗಳ ಸ್ಥಿತಿ ಕಂಡು ಯಾರೂ ಮರುಕಪಡದೆ ಇರಲಾರರು.

ಜುಬೈದಾ ಅವರನ್ನು ಮಂಗಳೂರಿನ ಇಸ್ಮಾಯಿಲ್‌ ಅವರಿಗೆ ವಿವಾಹ ಮಾಡಿಕೊಡಲಾಗಿದೆ. ದಂಪತಿಗೆ ಎರಡೂವರೆ ವರ್ಷದ ಹಿಂದೆ ಮೊದಲ ಗಂಡು ಮಗುವಿನ ಜನನವಾಗಿದೆ. ಮಗು ಹುಟ್ಟುವಾಗಲೇ ತಲೆ ಸ್ವಲ್ಪ ದೊಡ್ಡದಾಗಿತ್ತು. ಸರಿ ಹೋಗಬಹುದು ಎಂದು ಆರಂಭದಲ್ಲಿ ವೈದ್ಯರು ಹೇಳಿದ್ದರು. ಆದರೆ ಮಗು ದೊಡ್ಡದಾಗಿ ಈಗ 2 ವರ್ಷ 8 ತಿಂಗಳ ಕಾಲ ಮಲಗಿದಲ್ಲೇ ಇದೆ. ತನ್ನ ತಲೆಯನ್ನು ಅತ್ತಿಂದಿತ್ತ ತಿರುಗಾಡಿಸಲೂ ಮಗುವಿಗೆ ಸಾಧ್ಯವಾಗುತ್ತಿಲ್ಲ. ದೇಹದ ಉಳಿದ ಅವಯವ ಎಲ್ಲವೂ ಸರಿಯಾಗೇ ಇದೆ. ಮೊದಲ ಗಂಡು ಮಗು ಮೊಹಮ್ಮದ್‌ ಸಲೀತ್‌ ತಲೆಯ ಭಾಗದಲ್ಲಿ ಕೆಲವೊಮ್ಮೆ ನೋವು ಕಾಣಿಸಿಕೊಂಡಾಗ ಕಣ್ಣೀರು ಹಾಕುತ್ತಾನೆ. ಆ ಮಗುವಿಗೆ ಅಳುವ ಶಕ್ತಿಯೂ ಇಲ್ಲವಾಗಿದೆ.

ಎರಡನೇ ಮಗುವಿನ ಅವಸ್ಥೆಯೂ ಇದೆ ರೀತಿಯಾಗಿದೆ. ಎರಡನೇ ಮಗು ಮೊಹಮ್ಮದ್‌ ಸಲೀಂಗೆ ಕೇವಲ 8 ತಿಂಗಳು. ಎಂಟು ತಿಂಗಳ ಮಗುವಿನ ತಲೆಯೂ ಅದರ ತೂಕಕ್ಕಿಂತ ಹೆಚ್ಚಾಗಿದೆ. ಮಗುವನ್ನು ತಾಯಿಗೆ ಎತ್ತಿಕೊಳ್ಳಲು ಸಾಧ್ಯವಾಗದಷ್ಟು ಭಾರವಾಗಿದೆ. ಇಬ್ಬರು ಮಕ್ಕಳಿಗೂ ಒಂದೇ ಖಾಯಿಲೆ. ಎರಡು ಮಕ್ಕಳ ಅವಸ್ಥೆಯನ್ನು ಕಂಡು ತಾಯಿ ನಿತ್ಯವೂ ಕಣ್ಣೀರು ಹಾಕುವ ಪರಿಸ್ಥಿತಿ ಇದೆ. ತಲೆಯ ಭಾರ ತಾಳಲಾರದೆ ಇಬ್ಬರು ಪುಟ್ಟ ಮಕ್ಕಳು ಕಣ್ಣೀರು ಹಾಕುತ್ತಿದ್ದರೆ ಅದನ್ನು ಕಂಡು ತಾಯಿಯೂ ಕಣ್ಣೀರು ಹಾಕುತ್ತಿದ್ದಾರೆ.

ಸಹಾಯಕ್ಕೆ ಮನವಿ
ಜುಬೈದಾ ಅವರು ಸಹೃದಯಿಗಳ ನೆರವು ಕೋರಿದ್ದಾರೆ. ನೆರವು ನೀಡ ಬಯಸುವವರು ಜುಬೈದಾ ಎಂ., ಕೆನರಾ ಬ್ಯಾಂಕ್‌, ತಿಂಗಳಾಡಿ ಶಾಖೆ, ಖಾತೆ ಸಂಖ್ಯೆ: 6252108000918, ಐಎಫ್‌ಎಸ್‌ಸಿ ಕೋಡ್‌: ಸಿಎನ್‌ಆರ್‌ಬಿ 0006252 ಇದಕ್ಕೆ ನೆರವು ನೀಡಬಹುದು. ಸಂಪರ್ಕ ಮೊಬೈಲ್‌ ಸಂಖ್ಯೆ: 8197495135.

 ಚಿಕಿತ್ಸೆಗೂ ಕಷ್ಟ
ಮಗುವಿಗೆ ಚಿಕಿತ್ಸೆ ಕೊಡಿಸಲು ಪತಿಯ ಬಳಿಯೂ ಹಣವಿಲ್ಲ. ನಾನು ಬೀಡಿ ಕಟ್ಟಿ ದಿನದೂಡುತ್ತಿದ್ದೇನೆ. ಮಕ್ಕಳ ಚಿಕಿತ್ಸೆಗೆ ಲಕ್ಷಾಂತರ ರೂ. ಖರ್ಚು ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಕಳೆದ 2 ವರ್ಷ 8 ತಿಂಗಳಿನಿಂದ ನಾನು ನನ್ನಿಂದಾಗುವ ಚಿಕಿತ್ಸೆಯನ್ನು ಮಾಡಿಸಿದ್ದೇನೆ. ಸಹೃದಯಿ ದಾನಿಗಳು ನೆರವು ನೀಡಿದಲ್ಲಿ ನನ್ನ ಇಬ್ಬರು ಪುಟ್ಟ ಮಕ್ಕಳ ಕಣ್ಣೀರೊರೆಸಬಹುದು.
– ಜುಬೈದಾ, ಮಕ್ಕಳ ತಾಯಿ

 ಸರ್ಜರಿ ಮೂಲಕ ಗುಣ
ಇದು ಗಂಭೀರ ಕಾಯಿಲೆ. ಮಗು ಹೆರಿಗೆಯಾಗುವ ವೇಳೆ ಅದರ ಮಿದುಳಿನಲ್ಲಿರುವ ನೀರು ತಾನೇ ತನ್ನಿಂತಾನೆ ಹೊರ ಬರುತ್ತದೆ. ನೀರು ಹೊರ ಬರುವ ನಾಳ ಬ್ಲಾಕ್‌ ಆದಲ್ಲಿ ಮಕ್ಕಳ ತಲೆ ಭಾರೀ ಗಾತ್ರದಲ್ಲಿ ಬೆಳೆಯುತ್ತದೆ. ಮಗು ದೊಡ್ಡದಾಗುತ್ತಲೇ ತಲೆಯೂ ದೊಡ್ಡದಾಗುತ್ತಾ ಹೋಗುತ್ತದೆ. ಸರ್ಜರಿ ಮೂಲಕ ಅದನ್ನು ಸರಿಪಡಿಸಬಹುದಾಗಿದೆ.
– ಡಾ| ಶ್ರೀಕಾಂತ್‌,
ಮಕ್ಕಳ ತಜ್ಞರು, ಪುತ್ತೂರು

ಟಾಪ್ ನ್ಯೂಸ್

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

CAR-D

Sullia: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್‌ ಢಿಕ್ಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.