ನಗರಕ್ಕೂ ಬಂತು ಡಬಲ್‌ ಕೋನಿಕಲ್‌ ಪೋಲ್‌


Team Udayavani, Aug 6, 2018, 10:00 AM IST

6-agust-1.jpg

ಮಹಾನಗರ: ನಗರದ ಕಂಕನಾಡಿ-ನಂದಿಗುಡ್ಡ ನಡುವಿನ ಹೊಸ ಕಾಂಕ್ರಿಟ್‌ ರಸ್ತೆಗೆ ಡಬಲ್‌ ಕೋನಿಕಲ್‌ ಪೋಲ್‌ ಎಂಬ ವಿನೂತನ ಮಾದರಿಯ ಬೀದಿದೀಪವನ್ನು ಅಳವಡಿಸಲಾಗಿದೆ.ವಿಶೇಷ ಅಂದರೆ, ಬೆಳಗಾವಿ ಹೊರತು ಪಡಿಸಿದರೆ, ಈ ರೀತಿಯ ಹೈಟೆಕ್‌ ಬೀದಿ ದೀಪವನ್ನು ಪರಿಚಯಿಸಿರುವ 2ನೇ ಮಹಾನಗರ ಎಂಬ ಹೆಗ್ಗಳಿಕೆಗೂ ಮಂಗಳೂರು ಪಾಲಿಕೆ ಈಗ ಪಾತ್ರವಾಗಿದೆ.

ಕಂಕನಾಡಿ ಫಾದರ್‌ ಮುಲ್ಲರ್‌ ವೃತ್ತದಿಂದ ವೆಲೆನ್ಸಿಯಾ ಜೆಪ್ಪು ಸೆಮಿನರಿ ಮೂಲಕ ನಂದಿಗುಡ್ಡದ ಕೋಟಿ ಚೆನ್ನಯ ವೃತ್ತದ ವರೆಗಿನ 1.3 ಕಿ.ಮೀ. ವ್ಯಾಪ್ತಿಯಲ್ಲಿ 48 ಕಂಬ ಹಾಕಲಾಗಿದ್ದು, ಇದರಲ್ಲಿ ಡಬಲ್‌ ಕೋನಿಕಲ್‌ ಪೋಲ್‌ ದೀಪ ಉರಿಯುತ್ತಿದೆ. ಈ ಬೀದಿ ದೀಪಗಳು ಇತರ ದೀಪಗಳಿಂದ ವಿಭಿನ್ನವಾಗಿದ್ದು, ಹಲವು ಬಣ್ಣಗಳಲ್ಲಿ ಕಂಗೊಳಿಸುತ್ತಿದೆ. ಇದಕ್ಕಾಗಿ ಪಾಲಿಕೆ 80 ಲಕ್ಷ ರೂ. ವ್ಯಯಿಸಿದೆ.

ಡಬಲ್‌ ಕೋನಿಕಲ್‌ ಪೋಲ್‌
ಡಬಲ್‌ ಕೋನಿಕಲ್‌ ಪೋಲ್‌ ಅಂದರೆ ರಸ್ತೆ ವಿಭಾಜಕದಲ್ಲಿ ಅಳವಡಿಸಿದ ವಿದ್ಯುತ್‌ ಕಂಬ. ಒಂದೇ ತಳದಲ್ಲಿ ಎರಡು ಕಂಬಗಳನ್ನು ಅಳವಡಿಸಲಾಗಿದೆ. ಅದು ಉಭಯ ಕಡೆಯ ರಸ್ತೆಗಳಿಗೆ ವಾಲಿಕೊಂಡಿದ್ದು, ಅದರಲ್ಲಿ ಎಲ್‌ ಇಡಿ ಲೈಟ್‌ಗಳನ್ನು ಅಳವಡಿಸಲಾಗಿದೆ. ಇದು ಉರಿಯುವಾಗ ಆಕರ್ಷಕವಾಗಿ ಕಾಣುತ್ತದೆ.

ಬಣ್ಣ ಬಣ್ಣದ ದೀಪ
ಡಬಲ್‌ ಕೋನಿಕಲ್‌ ಪೋಲ್‌ ಮಧ್ಯೆ ಮಲ್ಟಿ ಕಲರ್‌ ಪೋಲ್‌ ಇದೆ. ಪ್ರತಿ ಎರಡು ನಿಮಿಷಕ್ಕೊಮ್ಮೆ 8 ಬಣ್ಣಗಳಲ್ಲಿ ಈ ದೀಪಗಳು ಬದಲಾಗುತ್ತವೆ. ಈ ಕಂಬವು ಹಲವು ಬಣ್ಣಗಳಿಂದ ಮಿನುಗುತ್ತಿರುತ್ತವೆ. ಮಧ್ಯ ರಾತ್ರಿ ಪ್ರಮುಖ ಕಂಬದ ಎಲ್‌ಇಡಿ ದೀಪಗಳು ಆಫ್‌ ಆದರೂ, ಮಧ್ಯದ ಮಲ್ಟಿ ಕಲರ್‌ ಕಂಬ ಮಾತ್ರ ಮಿನುಗುತ್ತಿರುತ್ತದೆ. ಇದು ಮಧ್ಯರಾತ್ರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ರಸ್ತೆಯ ಸೂಚನೆ ನೀಡುತ್ತದೆ.

ರಸ್ತೆ ಅಭಿವೃದ್ಧಿಗಾಗಿ ಎದುರಾಗಿತ್ತು ಕಂಟಕ
ಹಲವು ವರ್ಷಗಳ ಹಿಂದೆ ಈ ರಸ್ತೆ ಎರಡೂ ಬದಿ ಗ ಳಲ್ಲಿ ಮರಗಳ ನೆರಳಿತ್ತು. ಬಳಿಕ ರಸ್ತೆಯ ಕಾಂಕ್ರೀಟ್‌ ಕಾಮಗಾರಿಗಾಗಿ ಬಹುತೇಕ ಮರಗಳನ್ನು ಕಡಿದು ಹಾಕಲಾಗಿತ್ತು. ಆ ಸಂದರ್ಭ ಪ್ರತಿಭಟನೆಯೂ ನಡೆದಿತ್ತು. ಅನಂತರ ಬಹಳಷ್ಟು ಮಾತುಕತೆ ಬಳಿಕ ಪಕ್ಕದ ಮನೆ, ಅಂಗಡಿ, ಚರ್ಚ್‌ನವರೆಲ್ಲ ಜಾಗ ಬಿಟ್ಟುಕೊಟ್ಟಿದ್ದು, ಉಳಿದ ಮರಗಳನ್ನೂ ತೆರವುಗೊಳಿಸಿ ನಾಲ್ಕು ವರ್ಷಗಳಿಂದ ಚರಂಡಿ, ಫುಟ್‌ಪಾತ್‌, ಬಸ್‌ ಬೇ ಸಹಿತ ಕಾಂಕ್ರಿಟ್‌ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ವಿದ್ಯುತ್‌ ಉಳಿತಾಯ
ಡಬಲ್‌ ಕೋನಿಕಲ್‌ ಪೋಲ್‌ ಬೀದಿ ದೀಪಗಳಲ್ಲಿ ಎಲ್‌ ಇಡಿ ಅಳವಡಿಸುವ ಮೂಲಕ ವಿದ್ಯುತ್‌ ಉಳಿತಾಯದವಾಗಲಿದೆ. ನಗರದಲ್ಲಿ ಪ್ರಾಯೋಗಿಕವಾಗಿ ಒಂದು ರಸ್ತೆಗೆ ಅಳವಡಿಸಲಾಗಿದೆ. ಇದರ ನಿರ್ವಹಣೆ ಹಾಗೂ ಜನರ ಸ್ಪಂದನೆಯ ಬಳಿಕ ನಗರದ ಬೇರೆ ಭಾಗಗಳಲ್ಲೂ ಈ ದೀಪಗಳನ್ನು ಅಳವಡಿಸುವ ಬಗ್ಗೆ ಚಿಂತಿಸಲಾಗುತ್ತದೆ

ಮಾದರಿ ರಸ್ತೆಗೆ ಕ್ರಮ
ಈಗಾಗಲೇ ಈ ರಸ್ತೆ ವಿಸ್ತರಿಸಿಲು ಜೆಪ್ಪು ಸೆಮಿನ ಸಹಿತ ಹೆಚ್ಚಿನವರು ಜಾಗ ಬಿಟ್ಟುಕೊಟ್ಟಿದ್ದು, ಅಭಿವೃದ್ಧಿ ಕೆಲಸಗಳಾಗುತ್ತಿವೆ. 80 ಲಕ್ಷ ರೂ. ವೆಚ್ಚದಲ್ಲಿ ಡಬಲ್‌ ಕೋನಿಕಲ್‌ ಪೋಲ್‌ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದೆ. ಮುಂದಿನ ಹಂತದಲ್ಲಿ ಬೇರೆ ರಸ್ತೆಗಳಿಗೂ ಇಂತಹ ದೀಪಗಳನ್ನು ಅಳವಡಿಸುವ ಬಗ್ಗೆ ಚರ್ಚೆ ನಡೆಸಲಾಗುವುದು.
– ಪ್ರವೀಣ್‌ ಚಂದ್ರ ಆಳ್ವ,
ಕಾರ್ಪೋರೇಟರ್‌

‡ ಪ್ರಜ್ಞಾ ಶೆಟ್ಟಿ 

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.