ನಾಗರ ಪಂಚಮಿ: ಬಾಲಕನಿಂದ ಸ್ವಚ್ಛತೆ ಜಾಗೃತಿ
Team Udayavani, Jul 29, 2017, 11:50 PM IST
ಹಳೆಯಂಗಡಿ: ತುಳುನಾಡಿನ ಪವಿತ್ರ ಆಚರಣೆ ನಾಗರ ಪಂಚಮಿಯಂದು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದ ತೋಕೂರು ತಪೋವನದ ಡಾ| ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಜಯರಾಮ್ ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದಾನೆ.
ಹೆಜಮಾಡಿ ಬಳಿಯ ಕನ್ನಂಗಾರ್ನ ಕಾಡಿನ ನಡುವೆ ಇರುವ ಪ್ರಕೃತಿದತ್ತವಾದ ನಾಗ ಬನದಲ್ಲಿ ಭಕ್ತರು ತಂದ ಸೀಯಾಳ, ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳನ್ನು ತುಂಬಿಸಲೆಂದೇ ಪೇಪರ್ನ ದೊಡ್ಡ ಚೀಲ ಮಾಡಿಕೊಂಡು ಅದಕ್ಕೆ ‘ನನ್ನನ್ನು ಬಳಸಿ’ ಎಂಬ ಘೋಷವಾಕ್ಯವನ್ನು ಬರೆದು ತ್ಯಾಜ್ಯವನ್ನು ಸಂಗ್ರಹಿಸುತ್ತಿದ್ದ. ಇದರಿಂದ ಭಕ್ತರು ಎಲ್ಲೆಂದರಲ್ಲಿ ತ್ಯಾಜ್ಯವನ್ನು ಬಿಸಾಡುವುದು ತಪ್ಪಿದಂತಾಯಿತು.
ಶಾಲೆಯ ಇಂಟ್ಯಾಕ್ಟ್ ಕ್ಲಬ್ನ ಕಾರ್ಯದರ್ಶಿಯಾಗಿರುವ ಜಯರಾಮ್ಗೆ ಪ್ರೇರಣೆ ಆಗಿದ್ದು ಶಾಲಾ ಮುಖ್ಯ ಶಿಕ್ಷಕಿಯವರು ನಾಗರ ಪಂಚಮಿಯ ದಿನದಂದು ನಾವೆಲ್ಲ ಪ್ಲಾಸ್ಟಿಕ್ ಮುಕ್ತ ನಾಗರ ಪಂಚಮಿಯನ್ನು ಆಚರಿಸೋಣ ಎಂದು ಹೇಳಿರುವುದು. ಇದನ್ನೇ ಕಾರ್ಯರೂಪಕ್ಕೆ ತರಬೇಕೆಂದು ಕನ್ನಂಗಾರ್ನ ತನ್ನ ಬಾಳೆರಾಮ ಮನೆಯಲ್ಲಿ ತಂದೆ ದುರ್ಗಾ ಪ್ರಕಾಶ್ ಮತ್ತು ತಾಯಿ ಸುಮನಾರಲ್ಲಿ ಮನವಿ ಮಾಡಿಕೊಂಡು ಈ ಜಾಗೃತಿಯನ್ನು ಮೂಡಿಸಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ