ಸ್ವಚ್ಛ ಚಿಲಿಂಬಿ ಜನಜಾಗೃತಿ
Team Udayavani, Oct 30, 2017, 12:28 PM IST
ಮಹಾನಗರ: ಮಹಾನಗರ ಪಾಲಿಕೆ ಹಾಗೂ ಕ್ಲೀನ್ ಮತ್ತು ಗ್ರೀನ್ ವಾರ್ಡ್ 24 ಅಭಿಯಾನದ ಸಹಯೋಗದಲ್ಲಿ ‘ಸ್ವಚ್ಛ ಚಿಲಿಂಬಿಗೆ ಒಂದಾಗೋಣ ಸ್ವಚ್ಛ ಮನಸ್ಸುಗಳು’ ಎಂಬ ಜನಜಾಗೃತಿ ಕಾರ್ಯಕ್ರಮ ರವಿವಾರ ಚಿಲಿಂಬಿಯ ಶಾರದಾ ನಿಕೇತನದಲ್ಲಿ ಜರಗಿತು.
ಉಪಮೇಯರ್ ರಜನೀಶ್ ಕಾಪಿಕಾಡ್ ನೇತೃತ್ವದಲ್ಲಿ ಕ್ಲೀನ್ ಮತ್ತು ಗ್ರೀನ್ ವಾರ್ಡ್ ಅಭಿಯಾನದ ಅಂಗವಾಗಿ ಚಿಲಿಂಬಿ ಪರಿಸರದಲ್ಲಿ ಸ್ವಚ್ಛತೆಯನ್ನು ಜನಜಾಗೃತಿ ಮೂಲಕ ಸ್ವ ಪ್ರೇರಣೆಯ ಕಾರ್ಯಕ್ರಮಗಳೊಂದಿಗೆ ಪರಿಣಾಮಕಾರಿಯಾಗಿ ಅನುಷ್ಠಾನಿಸಲು ಚಿತ್ರ ಕಲಾವಿದರು ಭಿತ್ತಿ ಚಿತ್ರದ ಮೂಲಕ ಅಭಿವ್ಯಕ್ತಗೊಳಿಸುವ ವಿನೂತನ ಕಾರ್ಯಕ್ರಮ ಇದಾಗಿದೆ.
ಚಿಲಿಂಬಿ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತೆಯ ಕುರಿತಾದ ಸುಂದರ ಚಿತ್ರಗಳನ್ನು ದಿನೇಶ್ ಹೊಳ್ಳ ಹಾಗೂ ಇತರ ಕಲಾವಿದರ ನೇತೃತ್ವದಲ್ಲಿ ಬಿಡಿಸಲಾಯಿತು. ಇನ್ನೂ ಒಂದು ವಾರ ಕಾಲ ಈ ಕಾರ್ಯಕ್ರಮ ಮುಂದುವರಿಯಲಿದೆ.
ಪಾಲಿಕೆಯ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ನಾಗವೇಣಿ, ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ನಾಗರಿಕರು ಜತೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ