ಕೊಕ್ಕಡ: ಸೌತಡ್ಕ ದೇವಸ್ಥಾನ ಪರಿಸರದಲ್ಲಿ ಯುವಕರಿಂದ ಸ್ವಚ್ಛತೆ
Team Udayavani, Jun 4, 2018, 11:55 PM IST
ನೆಲ್ಯಾಡಿ: ಕೊಕ್ಕಡ ನಿವಾಸಿಗಳಾದ ಯುವಕರ ತಂಡವೊಂದು ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರೂ ಪರಿಸರ ಸಂರಕ್ಷಣೆಗಾಗಿ ತಮ್ಮ ಪರಿಸರದ ಉತ್ಸಾಹಿಗಳನ್ನು ಸೇರಿಸಿಕೊಂಡು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಿರ್ವಹಿಸಿದ್ದಾರೆ.
ಕೊಕ್ಕಡ ನಿವಾಸಿಗಳಾದ ಗುರುಕಿರಣ್ ಪಾಂಗಣ್ಣಾಯ, ಸ್ಕಂದಪ್ರಸಾದ್ ಶಬರಾಯ, ಶ್ರೇಯಸ್ ಶಬರಾಯ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಪರಿಸರ ಸ್ವಚ್ಛತೆಯ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಕೊಕ್ಕಡದ ತಮ್ಮ ಸಹಪಾಠಿ ಗೆಳೆಯರನ್ನು ಕೂಡಿಸಿಕೊಂಡು ಸೌತಡ್ಕ ಮಹಾಗಣಪತಿ ಕ್ಷೇತ್ರದ ಪರಿಸರದಲ್ಲಿ ಕಸಕಡ್ಡಿಗಳನ್ನು ತೆಗೆದು ಶುಚಿಗೊಳಿಸಿದರು.
ಕೊಕ್ಕಡ ಪರಿಸರದ ಅಭಿಷೇಕ್ ಸರಳಾಯ, ವಿಘ್ನೇಶ್ ಭಟ್, ನಿತಿನ್ ಭಟ್, ಆದಿತ್ಯ ಹೆಬ್ಟಾರ್, ಅಕ್ಷಯ ಹೆಬ್ಟಾರ್, ಆಕಾಶ್ ಕೃಷ್ಣ, ಶಿವರಾಮ್ ನೆಲ್ಲಿತ್ತಾಯ, ಕಾರ್ತಿಕ್ ಉಪ್ಪಾರ್ಣ, ಅಭಿಲಾಶ್ ಉಪ್ಪಾರ್ಣ, ಅನಂತೇಶ್ ಉಪ್ಪಾರ್ಣ ಮೊದಲಾದವರು ಕೈಜೋಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ