ಹವಾಮಾನ ವೈಪರೀತ್ಯ: ಕರಾವಳಿ ಪ್ರವೇಶಿಸದ ಚಳಿಗಾಲ
ಕಳೆದ ವರ್ಷಕ್ಕೆ ಹೋಲಿಸಿದರೆ ಕನಿಷ್ಠ ಉಷ್ಣಾಂಶ 2 ಡಿ.ಸೆ. ಏರಿಕೆ
Team Udayavani, Nov 30, 2019, 5:58 AM IST
ಮಂಗಳೂರು: ಕರಾವಳಿಯಲ್ಲಿ ನವೆಂಬರ್ ತಿಂಗಳಾಂತ್ಯಕ್ಕೆ ಚಳಿಗಾಲ ಆರಂಭವಾಗುವುದು ವಾಡಿಕೆ. ಆದರೆ ಈ ಬಾರಿ ಅದರ ಆಗಮನ ವಿಳಂಬವಾಗುವ ಲಕ್ಷಣ ಕಾಣಿಸುತ್ತಿದೆ. ಇತ್ತೀಚೆಗೆ ಅರಬಿ ಸಮುದ್ರ ಮತ್ತು ಬಂಗಾಲಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ಚಂಡಮಾರುತ ಮತ್ತು ವಾತಾವರಣದಲ್ಲಿ ಆಗಿರುವ ಏರುಪೇರು ಇದಕ್ಕೆ ಕಾರಣ. ಮೂರು ಪ್ರಬಲ ಚಂಡಮಾರುತಗಳು ಕರಾವಳಿಯ ಹವಾಗುಣದ ಮೇಲೆ ಪ್ರಭಾವ ಬೀರಿದ್ದು, ಇದರಿಂದಾಗಿ ಮೋಡಗಳ ಚಲನೆ ಇದ್ದ ಕಾರಣ ಆಗ ಸೆಕೆಯಿತ್ತು. ಈಗ ಶಾಂತ ಸಾಗರ ಮತ್ತು ಅರಬಿ ಸಮುದ್ರದಲ್ಲಿ ಮತ್ತೂಮ್ಮೆ ನಿಮ್ನ ಒತ್ತಡ ಉಂಟಾಗಿದೆ. ಇದರ ನೇರ ಪರಿಣಾಮ ಕರಾವಳಿಗೆ ಇಲ್ಲವಾದರೂ ಮತ್ತೆ ಮೋಡ ಸೃಷ್ಟಿಯಾಗುತ್ತಿದೆ. ಇದರಿಂದ ಸಂಜೆ ವೇಳೆ ಮುಗಿಲಿನ ವಾತಾವರಣ ಇರುತ್ತಿದ್ದು, ಕೆಲವು ಕಡೆ ಮಳೆಯೂ ಆಗುತ್ತಿದೆ.
ಕೃಷಿ ವಿವಿಯ ಹವಾಮಾನ ವಿಜ್ಞಾನಿ ಡಾ| ರಾಜೇಗೌಡ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, ಚಳಿಗಾಲ ಆರಂಭಕ್ಕೂ ಮುನ್ನ ಉತ್ತರ ಗೋಳಾರ್ಧದಿಂದ ದಕ್ಷಿಣ ಗೋಳಾರ್ಧದ ಕಡೆಗೆ ಗಾಳಿ ಬೀಸಬೇಕು. ಇದು ಸಾಮಾನ್ಯವಾಗಿ ಅಕ್ಟೋಬರ್ ಮೂರನೇ ವಾರದಿಂದ ಆರಂಭವಾಗುತ್ತದೆ. ಆದರೆ ಈವರೆಗೆ ಅದು ನಡೆದಿಲ್ಲ. ಈ ಗಾಳಿ ಬೀಸಿದರೆ ಮೋಡಗಳು ಆಫ್ರಿಕನ್ ದೇಶಗಳತ್ತ ತೆರಳುತ್ತವೆ. ಆದರೆ ಈ ಬಾರಿ ಮೋಡಗಳು ದಿಕ್ಕು ಬದಲಾಯಿಸಿ ಕರಾವಳಿಯತ್ತ ಬಂದಿವೆ. ಸಾಮಾನ್ಯವಾಗಿ ನವೆಂಬರ್ನಲ್ಲಿ ಚಳಿ ಆರಂಭವಾಗಿ ಜನವರಿ ಮೂರನೇ ವಾರದವರೆಗೆ ಇರಬೇಕು. ಪೂರ್ಣ ಪ್ರಮಾಣದ ಚಳಿ ಶುರುವಾಗುವುದಕ್ಕೆ ಇನ್ನೂ ಒಂದೆರಡು ವಾರಬೇಕು. ಇದರಿಂದ ಚಳಿಗಾಲದ ಅವಧಿಯೂ ಕಡಿಮೆಯಾಗುವ ಮುನ್ಸೂಚನೆಯಿದೆ ಎಂದಿದ್ದಾರೆ.
ಕೆಲವು ದಿನ ಸೆಖೆ, ಮೋಡ
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಮುಂದಿನ ಕೆಲವು ದಿನ ಇದೇ ವಾತಾವರಣ ಇರಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೂ ಈ ಬಾರಿ ಚಳಿ ಕಡಿಮೆ. ಕಳೆದ ವರ್ಷ ನ.26ರಂದು 21 ಡಿಗ್ರಿ ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. ಆದರೆ ಈ ಬಾರಿ ಅದು 23 ಡಿ.ಸೆ. ಇತ್ತು. ಅಲ್ಲದೆ ಮಂಗಳೂರು ಬಳಿಯ ಪಣಂಬೂರಿನಲ್ಲಿ ನ.23ರಿಂದೀಚೆಗೆ ಸತತವಾಗಿ ದೇಶದಲ್ಲಿಯೇ ಅತ್ಯಂತ ಹೆಚ್ಚು ತಾಪಮಾನ ದಾಖಲಾಗಿದೆ. ಸಂಜೆ ಮೋಡದ ವಾತಾವರಣ ಮುಂದುವರಿದಿದ್ದು, ಇದು ಗೇರು ಮತ್ತು ಮಾವು ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಬೆಳೆ ಕಡಿಮೆಯಾಗುವ ಅಪಾಯವಿದೆ.
1947ರಲ್ಲಿ ಅತಿ ಕನಿಷ್ಠ ಉಷ್ಣಾಂಶ
1947ರ ನ.19ರಂದು ಕರಾವಳಿಯಲ್ಲಿ ಅತ್ಯಂತ ಕನಿಷ್ಠವಾದ 16.6 ಡಿ.ಸೆ. ದಾಖಲಾಗಿತ್ತು. 2012ರ ನ.15ರಂದು 19 ಡಿ.ಸೆ., 2013ರಲ್ಲಿ 20.8, 2014ರಲ್ಲಿ 19, 2015ರಲ್ಲಿ 21, 2016ರಲ್ಲಿ 20.5, 2017ರಲ್ಲಿ 19.6 ಮತ್ತು ಕಳೆದ ವರ್ಷ 19.8 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.
ಮೋಡ ಚಲನೆಯಿಂದಾಗಿ ಕರಾವಳಿಯಲ್ಲಿ ಚಳಿ ಕಡಿಮೆಯಾಗಿದೆ. ಅರಬಿ ಸಮುದ್ರದಲ್ಲಿ ನಿಮ್ನ ಒತ್ತಡ ಉಂಟಾಗಿದ್ದು, ಪರಿಣಾಮವಾಗಿ ಮೋಡಗಳು ಉಂಟಾಗುತ್ತಿವೆ. ಇನ್ನೂ ಕೆಲವು ದಿನಗಳ ಕಾಲ ಇದೇ ರೀತಿಯ ವಾತಾವರಣ ಇರುವ ಸಾಧ್ಯತೆ ಇದೆ.
– ಸುನಿಲ್ ಗವಾಸ್ಕರ್, ಕೆಎಸ್ಎನ್ಡಿಎಂಸಿ ವಿಜ್ಞಾನಿ
– ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Private Bus ಯಾನ ದರ 4 ಪಟ್ಟು ಹೆಚ್ಚಳ! ಮತದಾನಕ್ಕೆ ಬರುವವರ ಕಿಸೆಗೆ ಕತ್ತರಿ
Dakshina Kannada ರಾಜಕೀಯ ಮೇಲಾಟದ ಕ್ಷೇತ್ರದಲ್ಲಿ ಮತದಾರರದ್ದೇ ಕುತೂಹಲ!
ಅಧಿಕಾರಕ್ಕಾಗಿ ಪಿಎಫ್ಐಯ ರಾಜಕೀಯ ಮುಖವಾದ ಎಸ್ಡಿಪಿಐ ಜತೆ ಕಾಂಗ್ರೆಸ್ ಹೊಂದಾಣಿಕೆ: ನಳಿನ್
Supreme Court ಆದೇಶದಿಂದ ಮೋದಿ ಸರಕಾರದ ಮುಖಭಂಗ: ಸುರ್ಜೇವಾಲ
Captain Brijesh Chowta ಚುನಾವಣ ವೆಚ್ಚಕ್ಕೆ ಪಿಂಚಣಿ ದುಡ್ಡು ದೇಣಿಗೆ
MUST WATCH
ಹೊಸ ಸೇರ್ಪಡೆ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್ಐಎ ವಶಕ್ಕೆ