ವರ್ಷದಿಂದ ಮುಚ್ಚಿರುವ ಪಾಪೆಮಜಲು ಬಿಎಸ್ಸೆನ್ನೆಲ್‌ ಕೇಂದ್ರ

ಸಿಬಂದಿಯೂ ಇಲ್ಲಿಲ್ಲ, ಯಂತ್ರಗಳೂ ಸ್ಥಗಿತ; ಕಚೇರಿಯಲ್ಲಿ ಶ್ಮಶಾನ ಮೌನ

Team Udayavani, Dec 16, 2019, 5:51 AM IST

32521312BDR22

ವಿಶೇಷ ವರದಿಬಡಗನ್ನೂರು: ಅರಿಯಡ್ಕ ಗ್ರಾಮದ ಪಾಪೆಮಜಲು ಬಿಎಸ್ಸೆನ್ನೆಲ್‌ ದೂರವಾಣಿ ವಿನಿಮಯ ಕೇಂದ್ರ ಒಂದೊಮ್ಮೆ ಅತ್ಯಂತ ಹೆಚ್ಚು ಚಟುವಟಿಕೆಯ ಕೇಂದ್ರವಾಗಿತ್ತು. ಈ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ನಿವೃತ್ತರಾದ ಬಳಿಕ ಒಂದು ವರ್ಷದಿಂದ ಕಚೇರಿ ಬಾಗಿಲು ತೆರೆದಿಲ್ಲ. ಅಲ್ಲಿ ಸಿಬಂದಿಯೂ ಇಲ್ಲ. ಇರುವ ಯಂತ್ರಗಳು ಕೆಲಸ ಮಾಡುತ್ತಿಲ್ಲ. ಭೂತ ಬಂಗಲೆಯಂತೆ ಗೋಚರಿಸುವ ಈ ದೂರವಾಣಿ ಕೇಂದ್ರದಲ್ಲಿ ಶ್ಮಶಾನ ಮೌನ ಆವರಿಸಿದೆ.

ಮೊಬೈಲ್‌ ಬಂದ ಬಳಿಕ ಸ್ಥಿರ ದೂರವಾಣಿ ಸ್ತಬ್ಧಗೊಂಡಿದೆ. ಆದರೆ ಸರಕಾರಿ ಕಚೇರಿಗಳಲ್ಲಿ ಇಂದಿಗೂ ಸ್ಥಿರ ದೂರವಾಣಿಯ ಅಗತ್ಯ ಇದೆ. ಗ್ರಾ.ಪಂ. ಕಚೇರಿ, ಗ್ರಾಮಕರಣಿಕರ ಕಚೇರಿ, ಆರೋಗ್ಯ ಕೇಂದ್ರ, ಸರಕಾರಿ ಶಾಲೆ, ಕಾಲೇಜುಗಳಲ್ಲಿ ಚಾಲ್ತಿಯಲ್ಲಿದೆ. ಆದರೆ, ಸ್ಥಿರ ದೂರವಾಣಿಗಿಂತ ಅಗ್ಗದಲ್ಲಿ ಮೊಬೈಲ್‌ ದೊರೆಯುತ್ತದೆ. ಇತರ ಹಲವು ಅನುಕೂಲಗಳೂ ಇವೆ. ಈ ಕಾರಣಕ್ಕಾಗಿ ಸ್ಥಿರ ದೂರವಾಣಿ ಸಂಪರ್ಕಕ್ಕೆ ಜನರು ಇತಿಶ್ರೀ ಹಾಡಿದ್ದಾರೆ. ಬಡಗನ್ನೂರು ಮತ್ತು ಸಂಟ್ಯಾರ್‌ ವಿನಿಯಮ ಕೇಂದ್ರದಲ್ಲಿ ಒಟ್ಟು 1,500ಕ್ಕೂ ಮಿಕ್ಕಿ ಸ್ಥಿರ ದೂರವಾಣಿ ಸಂಪರ್ಕಗಳು ಇದ್ದವು. ಈಗ 100ರಷ್ಟು ಮಾತ್ರ ಉಳಿದುಕೊಂಡಿವೆ. ಆದರೆ ಇಲಾಖೆ ವಿನಿಮಯ ಕಚೇರಿಯನ್ನು ಸಾರ್ವಜನಿಕರ ಉಪಯೋಗಕ್ಕೆ ಉಳಿಸಿಕೊಂಡಿತ್ತು.

ಸೆಕ್ಯೂರಿಟಿಯೂ ಇಲ್ಲಿಲ್ಲ
ಬಿಎಸ್ಸೆನ್ನೆಲ್‌ನಲ್ಲಿ ಹೊಸ ಸಿಬಂದಿ ನೇಮಕಾತಿ ನಡೆಯದ ಕಾರಣ ಬಹುತೇಕ ವಿನಿಮಯ ಕೇಂದ್ರಗಳು ಬಾಗಿಲು ಮುಚ್ಚಿವೆ. ಪಟ್ಟಣದಲ್ಲಿರುವ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಆದರೆ ಗ್ರಾಮೀಣ ಭಾಗದಲ್ಲಿ ಇದರ ಅಗತ್ಯ ಇಂದಿಗೂ ಇದ್ದರೂ ಕಚೇರಿ ಮುಚ್ಚಿದೆ. ಪಾಪೆಮಜಲು ವಿನಿಮಯ ಕೇಂದ್ರದ ಸಿಬಂದಿಗೆ ನಿವೃತ್ತಿಯಾಗಿದೆ. ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್‌ ಗುತ್ತಿಗೆದಾರರಿಂದ ವೇತನ ಸಿಗದ ಕಾರಣ ಕೆಲಸ ಬಿಟ್ಟು ತೆರಳಿದ್ದಾರೆ. ಒಂದು ವರ್ಷದಿಂದ ಕಚೇರಿ ಬಾಗಿಲು ತೆರೆದಿಲ್ಲ.

ಸಾರ್ವಜನಿಕರ ಆಕ್ರೋಶ
ಸ್ಥಿರ ದೂರವಾಣಿಯಲ್ಲಿ ಸಮಸ್ಯೆ ಕಂಡುಬಂದರೆ ಯಾರಿಗೆ ತಿಳಿಸಬೇಕು ಎಂಬ ಮಾಹಿತಿ ಬಳಕೆದಾರರಿಗೆ ಇಲ್ಲ. ಇರುವ 100ಕ್ಕೂ ಮಿಕ್ಕಿ ಸಂಪರ್ಕದಲ್ಲಿ ವ್ಯತ್ಯಯ ಉಂಟಾದರೆ ಅದನ್ನು ದುರಸ್ತಿ ಮಾಡಿಸಲು ಹರಸಾಹಸ ಪಡಬೇಕಾಗಿದೆ. ಈ ಮೊದಲು ವಿನಿಮಯ ಕೇಂದ್ರಕ್ಕೆ ಬಂದು ದೂರು ನೀಡುತ್ತಿದ್ದರು. ಆದರೆ ಒಂದು ವರ್ಷದಿಂದ ಈ ಭಾಗದಲ್ಲಿ ತೀವ್ರ ಸಮಸ್ಯೆಯಾಗಿದೆ. ಇಲಾಖೆ ಬದಲಿ ವ್ಯವಸ್ಥೆ ಮಾಡದೆ ಏಕಾಏಕಿ ಕಚೇರಿಗೆ ಬೀಗ ಹಾಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

 ಸರಕಾರಿ ಮಟ್ಟದಲ್ಲಿ ಕೆಲಸವಾಗಬೇಕು
ಸಿಬಂದಿ ಇಲ್ಲದ ಕಾರಣ ಕೇಂದ್ರಕ್ಕೆ ಬೀಗ ಹಾಕಲಾಗಿದೆ. ಸಂಟ್ಯಾರ್‌ ಮತ್ತು ಬಡಗನ್ನೂರು ವಿನಿಮಯ ಕೇಂದ್ರಕ್ಕೆ ಓರ್ವ ಸಿಬಂದಿ ಇದ್ದಾರೆ. ಅವರು ಕಚೇರಿಗೆ ಬರುವುದಿಲ್ಲ. ದುರಸ್ತಿ ಕಾರ್ಯ ಇದ್ದಲ್ಲಿ ಅವರಿಗೆ ಕರೆ ಮಾಡಬಹುದಾಗಿದೆ. ಸರಕಾರ ವಿನಿಮಯ ಕೇಂದ್ರಕ್ಕೆ ಸಿಬಂದಿ ನೇಮಕ ಮಾಡಿದರೆ ಕಚೇರಿ ಬಾಗಿಲು ತೆರೆಯಬಹುದು. ಅದೇನಿದ್ದರೂ ಸರಕಾರಿ ಮಟ್ಟದಲ್ಲಿ ಆಗುವ ಕೆಲಸ
– ವಿನೋದ್‌, ಜೆ.ಇ. ಬಿಎಸ್ಸೆನ್ನೆಲ್‌, ಪುತ್ತೂರು

 ಸರಕಾರವೇ ನೇರ ಕಾರಣ
ಬಿಎಸ್ಸೆನ್ನೆಲ್‌ ದೂರವಾಣಿ ವಿನಿಮಯ ಕೇಂದ್ರ ಬಾಗಿಲು ಮುಚ್ಚಿರುವುದು ಅತ್ಯಂತ ದುಃಖದ ವಿಚಾರ. ಕೇಂದ್ರದ ವ್ಯವಸ್ಥೆ ಈ ಮಟ್ಟದಲ್ಲಿ ಅಧಃಪತನಕ್ಕೆ ತಲುಪಲು ಸರಕಾರವೇ ನೇರ ಕಾರಣವಾಗಿದೆ. ಖಾಸಗಿ ಮೊಬೈಲ್‌ಗ‌ಳಿಗೆ ಸ್ಪರ್ಧೆ ನೀಡಲು ಆಗದೆ ಬಿಎಸ್ಸೆನ್ನೆಲ್‌ ಈ ಮಟ್ಟಕ್ಕೆ ತಲುಪಿದೆ. ಸರಕಾರ ಮತ್ತೆ ಅದಕ್ಕೆ ಚಾಲನೆ ಕೊಡುವ ಕೆಲಸ ಮಾಡಬೇಕು.
– ಶಿವರಾಮ ಮಣಿಯಾಣಿ,
ಮಾಜಿ ಸದಸ್ಯರು,ಅರಿಯಡ್ಕಗ್ರಾ.ಪಂ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.