ಶಿಕ್ಷಕರ ಸಮಸ್ಯೆಗೆ ಸಿಎಂ ಸಭೆ: ಭೋಜೇಗೌಡ
Team Udayavani, Jul 23, 2018, 10:40 AM IST
ಮಂಗಳೂರು: ಶಿಕ್ಷಕ ವರ್ಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. 15 ದಿನ ಗಳೊಳಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಶಿಕ್ಷಣ ಮಂತ್ರಿ ಮತ್ತು ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆ ನಡೆಸಿ ಪರಿಹಾರ ಕಂಡು ಕೊಳ್ಳ ಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು.
ಮಂಗಳೂರು ವಿ.ವಿ. ಕಾಲೇಜು ಅಧ್ಯಾಪಕರ ಸಂಘ “ಅಮುಕ್¤’ ನಗರದ ಕೆನರಾ ಪ.ಪೂ. ಕಾಲೇಜಿನಲ್ಲಿ ರವಿವಾರ ಆಯೋಜಿಸಿದ್ದ ವಾರ್ಷಿಕ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯದ ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜುಗಳ ಶಿಕ್ಷಕರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ, ಸರಕಾರದ ನಡೆ ನೋಡಿದರೆ ಬೇಸರವಾಗುತ್ತದೆ ಎಂದರು.
ಹೊಸ ಪಿಂಚಣಿ ಯೋಜನೆಯು ಮರಣ ಶಾಸನ ವಾಗಿದೆ. ಇದನ್ನು ರೂಪಿಸುವ ಮೊದಲು ಚರ್ಚೆ ನಡೆಸಿಲ್ಲ. ನಿವೃತ್ತಿ ಹೊಂದಿದವರು ಸಂತೋಷದಿಂದ ಜೀವನ ಕಳೆಯಬೇಕು. ಆದರೆ ಈ ಹೊಸ ಯೋಜನೆ ಯಿಂದ ಇದು ಸಾಧ್ಯವಾಗುತ್ತಿಲ್ಲ. ಎನ್ಪಿಎಸ್ ಯೋಜನೆಯನ್ನು ಸಾಮಾನ್ಯ ನೌಕರರಿಗೆ ಜಾರಿ ಗೊಳಿಸುವ ಮೊದಲು ಜನಪ್ರತಿನಿಧಿಗಳಿಗೆ ಪ್ರಾಯೋಗಿಕವಾಗಿ ಅಳವಡಿಸಲಿ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಕಾಯಿದೆ ಜಾರಿಗೆ ತರುವ ಮೊದಲು ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಬೇಕು. ಆದರೆ ಇತ್ತೀಚಿನ ದಿನ ಗಳಲ್ಲಿ ಸುತ್ತೋಲೆ ಗಳೇ ಕಾನೂನುಗಳಾಗಿ ಪರಿವರ್ತನೆ ಯಾಗುತ್ತಿವೆ. ಇದರಿಂದ ಶಿಕ್ಷಕರು, ಉಪನ್ಯಾಸಕರು ಗೊಂದಲಕ್ಕೀಡಾಗಿದ್ದಾರೆ ಎಂದರು.
ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ| ಮಹೇಶ್ ರಾವ್ ಮಾತನಾಡಿ, ಅಮುಕ್¤ ಉತ್ತಮ ಸಂಘಟನೆಯಾಗಿದ್ದು, ಅಧ್ಯಾಪಕರಿಗೆ ಸಮಸ್ಯೆ ಎದುರಾದಾಗ ಪರಿಹರಿಸಲು ಶ್ರಮಿಸುತ್ತದೆ ಎಂದರು. ನಿವೃತ್ತಿ ಹೊಂದಿದ, ಪಿಎಚ್ಡಿ ಮತ್ತು ವಿಶೇಷ ಸಾಧನೆ ಗೈದ ಉಪನ್ಯಾಸಕರನ್ನು ಸಮ್ಮಾನಿಸಲಾಯಿತು.
ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಗೌರವ ಕಾರ್ಯ ದರ್ಶಿ ಎಂ. ರಂಗನಾಥ್ ಭಟ್, ಕಾಲೇಜಿನ ಪ್ರಾಂಶುಪಾಲೆ ಡಾ| ಮಾಲಿನಿ ಕೆ.ವಿ., ಅಮುಕ್¤ ಅಧ್ಯಕ್ಷ ಡಾ| ಉಮ್ಮಪ್ಪ ಪೂಜಾರಿ ಪಿ., ಪ್ರಧಾನ ಕಾರ್ಯ ದರ್ಶಿ ಡಾ| ಬಿ.ಎ. ಕುಮಾರ್ ಹೆಗ್ಡೆ, ಖಜಾಂಚಿ ದೇಜಮ್ಮ, ಉಪನ್ಯಾಸಕರು ಉಪಸ್ಥಿತರಿದ್ದರು.
ನಿರ್ಣಯ ಅಂಗೀಕಾರ
ಅಮುಕ್¤ ಸಭೆಯಲ್ಲಿ ನಿರ್ಣಯಗಳನ್ನು ಅಂಗೀ ಕರಿಸಲಾಯಿತು. ಮುಖ್ಯವಾಗಿ, ಅನುದಾನಿತ ಕಾಲೇಜು ನೌಕರರಿಗೆ ವೇತನ ವಿಳಂಬ ಮಾಡ ಬಾರದು, ಅನುದಾನ ರಹಿತ ಶಿಕ್ಷಕರಿಗೆ ಕನಿಷ್ಠ ವೇತನ ನಿಗದಿಪಡಿಸಲು ಯುಜಿಸಿಗೆ ಮತ್ತು ಸರಕಾರವನ್ನು ಆಗ್ರಹಿಸುವುದು, ಶಿಕ್ಷಕರು-ಶಿಕ್ಷಕೇತರ ನೌಕರ ಖಾಲಿ ಹುದ್ದೆಗಳ ಭರ್ತಿ, ಅನುದಾನಿತ ಕಾಲೇಜುಗಳಲ್ಲಿ ಖಾಯಂ ನೇಮಕಾತಿ ವೇಳೆ ಈಗಾಗಲೇ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಪರಿಗಣನೆ, ಅನುದಾನಿತ ಕಾಲೇಜುಗಳಲ್ಲಿ ಖಾಯಂ ಪ್ರಾಂಶುಪಾಲರ ನೇಮಕ, ಅನುದಾನಿತ ಕೋರ್ಸ್ಗಳ ಪ್ರವೇಶ ಸ್ಥಗಿತಕ್ಕೆ ವಿರೋಧ, 2006ರಲ್ಲಿ ಜಾರಿಗೊಳಿಸಿದ 6ನೇ ವೇತನ ಶ್ರೇಣಿಯಲ್ಲಿ ಇರುವ ತಾರತಮ್ಯ ನಿವಾರಣೆ, 7ನೇ ಯುಜಿಸಿ ವೇತನ ಪರಿಶೀಲನ ಸಮಿತಿಯ ವರದಿ ಕೂಡಲೇ ಜಾರಿಗೆ ರಾಜ್ಯ ಸರಕಾರಕ್ಕೆ ಆಗ್ರಹ, ಪರೀಕ್ಷೆಗೆ ಸಂಬಂಧಿಸಿದ ಸಂಭಾವನೆ ಮತ್ತು ತುಟ್ಟಿಭತ್ತೆ ಸಹಿತ ಇತರ ಪಾವತಿಗಳ ಪರಿಷ್ಕರಣೆ.
ಬದುಕು ಬದಲಿಸಿದ್ದು ವಿವೇಕಾನಂದ ವಿದ್ಯಾಸಂಸ್ಥೆ
ಚಿಕ್ಕಮಗಳೂರಿನ ಕಾಲೇಜೊಂದರಲ್ಲಿ ಪಿಯುಸಿ ಕಲಿಯುತ್ತಿದ್ದ ವೇಳೆ ಕೆಲವು ಕಾರಣಕ್ಕಾಗಿ ವರ್ಗಾ ವಣೆ ಪತ್ರ ನೀಡಿದರು. ಇದರಿಂದ ನನ್ನ ಉನ್ನತ ಕಲಿಕೆಗೆ ತೊಡಕಾಯಿತು. ಈ ವೇಳೆಯಲ್ಲಿ ಮಂಗಳೂರಿಗೆ ಬಂದು ಕೆಲವು ಕಾಲೇಜುಗಳಲ್ಲಿ ಪ್ರವೇಶ ಬಯಸಿದರೂ ಯಾರೂ ನೀಡಲಿಲ್ಲ. ಆಗ ಪುತ್ತೂರಿನಲ್ಲಿ ಮಾಜಿ ಶಾಸಕ ರಾಮ ಭಟ್ ಅವರ ಬಳಿ ತೆರಳಿದೆ. ಅವರೇ ಕಾಲೇಜಿನ ಶುಲ್ಕ ಕಟ್ಟಿ, ಕಾಲೇಜಿಗೆ ಸೇರಿಸಿದರು. ಬಳಿಕ ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ಪೂರ್ಣ ಗೊಳಿಸಿದೆ. ಅದು ನನಗೆ ಪುನರ್ಜನ್ಮ ನೀಡಿದ ಕಾಲೇಜು ಎಂದು ಎಸ್.ಎಲ್. ಭೋಜೇ ಗೌಡ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA