ರಷ್ಯಾ ಯುದ್ಧದಿಂದ ಸಿಎನ್‌ಜಿ ದರ ವಿಪರೀತ ಏರಿಕೆ :ಪೆಟ್ರೋಲ್‌ಗೆ ಸಮನಾಗುತ್ತಿರುವ ಸಿಎನ್‌ಜಿ ದರ


Team Udayavani, Aug 6, 2022, 8:53 AM IST

ರಷ್ಯಾ ಯುದ್ಧದಿಂದ ಸಿಎನ್‌ಜಿ ದರ ವಿಪರೀತ ಏರಿಕೆ :ಪೆಟ್ರೋಲ್‌ಗೆ ಸಮನಾಗುತ್ತಿರುವ ಸಿಎನ್‌ಜಿ ದರ

ಮಂಗಳೂರು : ಈಗಾಗಲೇ ಏರಿಕೆಯಲ್ಲಿರುವ ಸಿಎನ್‌ಜಿ (ಇಟಞಟrಛಿssಛಿಛ nಚಠಿurಚl ಜಚs) ದರವು ಸಿಎನ್‌ಜಿ ವಾಹನಗಳ ಚಾಲಕರ ಕಿಸೆಯನ್ನು ಸುಡತೊಡಗಿದೆ. ಈ ನಡುವೆ ರಷ್ಯಾ – ಉಕ್ರೇನ್‌ ಕದನ ಮುಂದುವರಿದಿರುವ ಪರಿಣಾಮ ಭಾರತಕ್ಕೆ ಅಗತ್ಯವಿರುವಷ್ಟು ಸಿಎನ್‌ಜಿ ಲಭಿಸುತ್ತಿಲ್ಲ. ಪೆಟ್ರೋಲ್‌, ಡೀಸೆಲ್‌ ಮಾದರಿಯಲ್ಲೇ ಇದರ ದರವೂ ಏರತೊಡಗಿದ್ದು ಶೀಘ್ರ 100 ರೂ.ಗೇರುವ ಸಾಧ್ಯತೆ ಗೋಚರಿಸಿದೆ.

ಒಂದೆಡೆ ಸಿಎನ್‌ಜಿ ಬಳಕೆ ಮಾಡಬೇಕು, ಇದು ಶುದ್ಧ ಹಾಗೂ ಪರಿಸರ ಸ್ನೇಹೀ ಇಂಧನ, ಪೆಟ್ರೋಲ್‌, ಡೀಸೆಲ್‌ಗಿಂತಲೂ ಉತ್ತಮ ಹಾಗೂ ಅಗ್ಗ ಎಂದು ಸರಕಾರಗಳು ಉತ್ತೇಜನ ನೀಡುತ್ತಿರುವ ನಡುವೆಯೇ ಬಳಕೆದಾರರು ಮಾತ್ರ ಪಶ್ಚಾತ್ತಾಪ ಪಡುವ ಪರಿಸ್ಥಿತಿ ಎದುರಾಗಿದೆ.

ಯುದ್ಧದಿಂದಾಗಿ ಸಮಸ್ಯೆ
ರಷ್ಯಾ-ಉಕ್ರೇನ್‌ ಯುದ್ಧ ನಡೆಯುತ್ತಲೇ ಇದೆ. ಯೂರೋಪ್‌ನ ದೇಶಗಳು ಮುಂಬರುವ ಚಳಿಗಾಲಕ್ಕೆ ಬೇಕಾದ ಅನಿಲವನ್ನೆಲ್ಲ ಸಂಗ್ರಹಿಸಿಟ್ಟುಕೊಳ್ಳಲು ಆರಂಭಿಸಿದ್ದು ಕಳೆದ 6 ತಿಂಗಳಲ್ಲಿ ಶೇ. 50ಕ್ಕೂ ಹೆಚ್ಚು ಪ್ರಮಾಣದಲ್ಲಿ ಸಿಎನ್‌ಜಿ ಆಮದು ಯುರೋಪ್‌ಗೆ ಏರಿಕೆಯಾಗಿದೆ. ಇದರಿಂದಾಗಿ ಭಾರತದ ಸಿಎನ್‌ಜಿ ಬೇಡಿಕೆಯ ಟೆಂಡರ್‌ಗೆ ಸೂಕ್ತವಾದ ಸ್ಪಂದನೆ ದೊರಕುತ್ತಿಲ್ಲ. ಸಿಎನ್‌ಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ. ಈಗಾಗಲೇ ಭಾರತದಲ್ಲಿ ಕೈಗಾರಿಕೆಗಳಿಗೆ ನೀಡುವ ಸಿಎನ್‌ಜಿಯ ಪ್ರಮಾಣವನ್ನು ಇಳಿಸಲು ಗೈಲ್‌ ಕಂಪೆನಿ ಮುಂದಾಗಿರುವುದಾಗಿ ತಿಳಿದುಬಂದಿದೆ.

ಖರೀದಿ ಕೈಬಿಟ್ಟ ಎಂಆರ್‌ಪಿಎಲ್‌
ಮಂಗಳೂರಿನಲ್ಲಿ ಸಿಎನ್‌ಜಿ ಬಳಸುವ ಕೈಗಾರಿಕೆಗಳು ಎರಡೇ. ಎಂಆರ್‌ಪಿಎಲ್‌-ಒಎಂಪಿಎಲ್‌ ಸೇರಿಕೊಂಡು ಒಂದಷ್ಟು ಸಿಎನ್‌ಜಿ ಖರೀದಿಸುತ್ತಿದ್ದರೆ ಮುಖ್ಯವಾಗಿ ಎಂಸಿಎಫ್‌ ತನ್ನ ರಸಗೊಬ್ಬರ ಉತ್ಪಾದನೆಗೆ ಸಿಎನ್‌ಜಿ ಬಳಕೆ ಮಾಡುತ್ತಿದೆ.

ಆದರೆ 6 ತಿಂಗಳಿಂದೀಚೆಗೆ ಎಂಆರ್‌ಪಿಎಲ್‌ ಸಿಎನ್‌ಜಿ ಖರೀದಿಯನ್ನು ನಿಲ್ಲಿಸಿದೆ. ದರ ಏರಿಕೆಯೇ ಇದಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಎಂಸಿಎಫ್‌ ಕಾರ್ಖಾನೆಯನ್ನು ಮೇಲ್ದರ್ಜೆಗೇರಿಸುತ್ತಿರುವುದರಿಂದ 2 ತಿಂಗಳಿನಿಂದ ಅಲ್ಲೂ ಉತ್ಪಾದನೆ ನಡೆಯುತ್ತಿಲ್ಲ. ಹಾಗಾಗಿ ಮಂಗಳೂರಿನಲ್ಲಿ ಸಿಎನ್‌ಜಿ ವ್ಯತ್ಯಯ ಏನೂ ಇಲ್ಲ. ಮಂಗಳೂರಿನ ಬೇಡಿಕೆಯೂ ದೇಶದ ಬೇಡಿಕೆಗೆ ಹೋಲಿಸಿದರೆ ಅತ್ಯಲ್ಪ. ಆದರೂ ಏರಿದ ದರ ಸಾಮಾನ್ಯ ಗ್ರಾಹಕರ ಕಿಸೆ ಸುಡುವುದು ಮಾತ್ರ ನಿಜ.

ಆರೇ ತಿಂಗಳಲ್ಲಿ 25 ರೂ.ಗೂ ಅಧಿಕ ಏರಿಕೆ!
ಮಂಗಳೂರಿನಲ್ಲಿ ಸಿಎನ್‌ಜಿ ದರವು ಡಿಸೆಂಬರ್‌ 2021ರಲ್ಲಿ ಕೆ.ಜಿ.ಗೆ 57 ರೂ. ಇತ್ತು. ಇದನ್ನು ಜನವರಿ 1ಕ್ಕೆ ಅದನ್ನು 18 ರೂ. ಏರಿಸಲಾಗಿತ್ತು. ಆ ಬಳಿಕ ಇದರ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ದರ ಏರಿಳಿತ ಕಾಣುತ್ತ ಪ್ರಸ್ತುತ 88 ರೂ. ತಲಪಿದೆ. ಈಗಿನ ಸ್ಥಿತಿ ನೋಡಿದರೆ ಅದು 100 ರೂ. ತಲಪುವ ದಿನ ದೂರ ಇಲ್ಲ ಎಂದು ಅನ್ನಿಸುತ್ತದೆ ಎನ್ನುತ್ತಾರೆ ಸಿಎನ್‌ಐ ಬಳಕೆದಾರರ ಸಂಘದ ಸಂಚಾಲಕ ಶ್ರೀನಾಥ್‌ ರಾವ್‌.

ಹಲವು ಮಂದಿ ಹೆಚ್ಚು ಬೆಲೆ ಪಾವತಿಸಿ ಸಿಎನ್‌ಜಿ ಕಾರು, ಆಟೊ ಖರೀದಿಸಿದ್ದಾರೆ. ಅನೇಕರು ಸಿಎನ್‌ಜಿ ಕಿಟ್‌ ಹಾಕಿಸಿಕೊಂಡಿದ್ದಾರೆ. ಈ ರೀತಿ ಪೆಟ್ರೋಲ್‌ ರೀತಿಯೇ ದರ
ಏರಿದರೆ ಏನು ಪ್ರಯೋಜನ ಇದರಿಂದ ಎಲ್ಲರೂ ಮತ್ತೆ ಪೆಟ್ರೋಲ್‌ಗೇ ಮರಳಬಹುದು ಎನ್ನುವುದು ಗ್ರಾಹಕರ ಆತಂಕ.

ಜಾಗತಿಕ ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ಸಿಎನ್‌ಜಿ ದರದಲ್ಲೂ ವ್ಯತ್ಯಾಸಗಳಾಗುತ್ತಿವೆ. ನಮ್ಮದು ಸಿಟಿಗ್ಯಾಸ್‌ ವಿತರಣೆ ಸಂಸ್ಥೆ. ಆದರೆ ದರ ನಿಗದಿ ನಮ್ಮ ಕೈಯಲ್ಲಿಲ್ಲ. ಇದನ್ನು ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಲ್ಲಿ ನಿರ್ಧರಿಸಲಾಗುತ್ತದೆ.
– ಯು.ಸಿ. ಸಿಂಗ್‌, ಗೈಲ್‌ಗ್ಯಾಸ್ ಮಹಾಪ್ರಬಂಧಕರು

– ವೇಣುವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.