ಬೆಳಗ್ಗೆ ಚಳಿ, ಸಂಜೆ ಮೋಡ, ರಾತ್ರಿ ಸೆಕೆ!

ಕರಾವಳಿಗೂ ತಟ್ಟಿದ ಜಾಗತಿಕ ಹವಾಗುಣ ಬದಲಾವಣೆ ಪರಿಣಾಮ

Team Udayavani, Dec 18, 2019, 4:54 AM IST

cv-27

ಮಹಾನಗರ: ಡಿಸೆಂಬರ್‌ ತಿಂಗಳ ಅರ್ಧಭಾಗ ಪೂರ್ಣಗೊಂಡಿದ್ದರೂ ಕರಾವಳಿ ಭಾಗದಲ್ಲಿ ಇನ್ನು ಕೂಡ ಪೂರ್ಣ ಪ್ರಮಾಣದ ಚಳಿಗಾಲದ ಅನುಭವಕ್ಕೆ ಬಂದಿಲ್ಲ ಎನ್ನುವುದು ವಾಸ್ತವ. ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ದ.ಕ., ಉಡುಪಿ ಜಿಲ್ಲೆ ಸಹಿತ ಕರಾವಳಿ ಭಾಗದಲ್ಲಿ ಮೈ ಕೊರೆಯುವ ಚಳಿಯ ಅನುಭವಾಗುವುದು ವಾಡಿಕೆ. ಆದರೆ ಜಾಗತಿಕ ಮಟ್ಟದ ಹವಾಮಾನ ಬದಲಾವಣೆಯ ಪರಿಣಾಮ ಗಮನಾರ್ಹವಾಗಿದ್ದು, ಕರಾವಳಿ ಭಾಗಕ್ಕೂ ವ್ಯಾಪಿಸುತ್ತಿದ್ದು, ಹೀಗಾಗಿ, ಚಳಿಗಾಲದಲ್ಲಿ ಅದರಲ್ಲಿಯೂ ರಾತ್ರಿವೇಳೆ ಚಳಿಗಿಂತ ಸೆಕೆಯ ಪ್ರಮಾಣ ಹೆಚ್ಚಾಗುತ್ತಿದೆ.

ಅಂತರ್ಜಲ ಮಟ್ಟ ಕುಸಿತ
ಹೆಚ್ಚುತ್ತಿರುವ ಕಟ್ಟಡಗಳು, ಜನಸಂಖ್ಯೆ, ಕಾಡು ನಾಶ ಮುಂತಾದ ಕಾರಣದಿಂದಾಗಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿತ ಕಾಣುತ್ತಿದೆ. ಅಕ್ಟೋಬರ್‌, ನವೆಂಬರ್‌ ತಿಂಗಳ ಅಂಕಿ ಅಂಶದ ಪ್ರಕಾರ ಮಂಗಳೂರು ನಗರದಲ್ಲಿ 1.57 ಮೀ.ನಷ್ಟು ಕುಸಿತ ಕಂಡಿದ್ದು, ಉಳಿದ ತಾಲೂಕುಗಳಲ್ಲೂ ಇಳಿಕೆಯಾಗಿದೆ. ನೀರಿನ ಮಟ್ಟ 400ರಿಂದ 500 ಅಡಿಗೆ ಇಳಿದಿದೆ. ಕಳೆದ ವರ್ಷ ಪಶ್ಚಿಮಘಟ್ಟ ತಪ್ಪಲಿನಲ್ಲಿ ಉಂಟಾಗಿದ್ದ ಭೂಕುಸಿತದಿಂದಾಗಿ ಸುಮಾರು 2,500 ಹೆಕ್ಟೆರ್‌ ಅರಣ್ಯ ನಾಶ ಹೊಂದಿತ್ತು.

ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಅರಣ್ಯ ಪ್ರದೇಶ ದಿನದಿಂದ ದಿನಕ್ಕೆ ನಾಶ ವಾಗುತ್ತಿರುವುದೇ ಹವಾಮಾನ ವೈಪರಿತ್ಯದ ಪರಿಣಾಮ ಎಂದು ಪರಿಸರವಾದಿ ಗಳು ಹೇಳುತ್ತಿದ್ದಾರೆ. ಈ ಹಿಂದೆ ಭೂಕುಸಿತ ಉಂಟಾಗಿದ್ದ ಚಾರ್ಮಾಡಿ, ಮಡಿಕೇರಿ ಭಾಗಗಳಲ್ಲಿ ಸೆಕೆ ಪ್ರಮಾಣ ಹೆಚ್ಚಾಗುತ್ತಿದೆ. ಭೂಕುಸಿತ ಉಂಟಾದ ಪ್ರದೇಶಗಳಲ್ಲೀಗ ಕಲ್ಲು, ಮಣ್ಣು ಮಾತ್ರ ಕಾಣುತ್ತಿದ್ದು, ಸೂರ್ಯನ ಕಿರಣಗಳು ಕಲ್ಲಿಗೆ ನೇರವಾಗಿ ಬೀಳುತ್ತಿದೆ. ಇದೇ ಕಾರಣಕ್ಕೆ ತಂಪಾಗಿರಬೇಕಾದ ಅರಣ್ಯ ಪ್ರದೇಶಗಳಲ್ಲಿಯೂ ಉಷ್ಣಾಂಶ ಹೆಚ್ಚಾ ಗುತ್ತಿದೆ. ಇದರಿಂದ ಕಾಡಿ ನಲ್ಲಿ ರಬೇಕಾದ ಪ್ರಾಣಿಗಳು ಸೆಕೆ ಹೆಚ್ಚಾಗಿ ನಾಡಿಗೆ ಬರಲಾರಂಭಿಸಿವೆ.

ಕರಾವಳಿ ಭಾಗದಲ್ಲಿ ಹತ್ತು ವರ್ಷಗಳಲ್ಲಿ ಈ ರೀತಿಯ ಹವಾಮಾನ ವೈಪರೀತ್ಯ ಉಂಟಾಗಿರಲಿಲ್ಲ. ಇದೇ ಮೊದಲ ಬಾರಿಗೆ ಗರಿಷ್ಠ ಉಷ್ಣಾಂಶವು 38 ಡಿ.ಸೆ. ದಾಟುತ್ತಿದ್ದು, ಚಳಿಗಾಲದಲ್ಲೂ ಸೆಕೆಯ ಅನುಭವವಾಗುತ್ತಿದೆ. ಡಿಸೆಂಬರ್‌ನಲ್ಲಿ ವಾತಾವರಣ ತಂಪಾಗಿ ಬೆಳಗ್ಗೆ ಕೊರೆವ ಚಳಿ ಇರುತ್ತದೆ. ಅದೇ ರೀತಿ, ರಾತ್ರಿ ಆಗುತ್ತಿದ್ದಂತೆ ಮತ್ತೆ ಚಳಿ ಆರಂಭವಾಗುತ್ತದೆ.

ಕೆಲವೇ ದಿನಕ್ಕೆ ಸೀಮಿತವಾಗಿದೆ ಚಳಿಗಾಲ
ಭೂಗರ್ಭಶಾಸ್ತ್ರಜ್ಞ ಅನಂತರಾಮನ್‌ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, ಈ ರೀತಿಯ ಹವಾಮಾನ ವೈಪರಿತ್ಯಕ್ಕೆ ಪಶ್ಚಿಮಘಟ್ಟದಲ್ಲಿ ಕಾಡುನಾಶ, ಭೂಕುಸಿತದ ಜತೆಗೆ ಜಾಗತಿಕ ಹವಾಗುಣ ಬದಲಾವಣೆಯೂ ಕಾರಣ. ಇದೊಂದು ದೀರ್ಘ‌ಕಾಲದಲ್ಲಾಗುವ ಪ್ರಕ್ರಿಯೆಯಾಗಿದ್ದು, ಈಗ ಪರಿಣಾಮ ಬೀರುತ್ತಿದೆ. ವಾತಾವರಣದಲ್ಲಿ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗಿ ಚಳಿ ಕೆಲವೇ ದಿನಕ್ಕೆ ಸೀಮಿತವಾಗುತ್ತಿದೆ. ವಾಯುಗೋಳ ಇಡೀ ಜಗತ್ತಿಗೆ ಒಂದೇ ಆಗಿದ್ದರಿಂದ ಇದೊಂದು ಜಾಗತಿಕ ಸಮಸ್ಯೆ. 37 ಬಿಲಿಯನ್‌ ಟನ್‌ ಕಾರ್ಬನ್‌ ಗಾಳಿ ಸೇರುತ್ತಿದೆ. ಜಾಗತಿಕವಾಗಿಯೂ ಯುರೋಪ್‌, ಫ್ರಾನ್ಸ್‌ಗಳಲ್ಲೂ ದಾಖಲೆ ಪ್ರಮಾಣದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿದೆ ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಡಿಸೆಂಬರ್‌ ಸಮಯದಲ್ಲಿ ಶುಭ್ರ ಆಕಾಶ ಇರುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಬದಲಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಶುಭ್ರ ಆಕಾಶವಿದ್ದರೂ ಮಧ್ಯಾಹ್ನ ಬಳಿಕ ಚದುರಿದ ಮೋಡ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಸೆಕೆಯ ಅನುಭವವಾಗುತ್ತಿದೆ. ಬೆಳಗ್ಗಿನ ವೇಳೆ ತುಸು ಚಳಿ ಆರಂಭವಾಗಿದೆ ಬಿಟ್ಟರೆ ಉಳಿದಂತೆ ಸೆಕೆ ಹೆಚ್ಚಾಗುತ್ತಿದೆ.

ಮೋಡಗಳ ಚಲನೆ
ದಾಖಲೆ ಎಂಬಂತೆ ಕರ್ನಾಟಕ ಕರಾವಳಿ ಭಾಗಕ್ಕೆ ಈ ವರ್ಷ ಬಂಗಾಳಕೊಲ್ಲಿಯಲ್ಲಿ “ಫೋನಿ’ ಎಂಬ ಚಂಡಮಾರುತ, ಇದಾದ ಬಳಿಕ ಜೂನ್‌ ತಿಂಗಳಲ್ಲಿ “ವಾಯು’, ಕೆಲವು ದಿನಗಳ ಹಿಂದೆ “ಕ್ಯಾರ್‌’, “ಮಹಾ’, “ಬುಲ್‌ ಬುಲ್‌’ ಚಂಡಮಾರುತ ಉಂಟಾಗಿತ್ತು. ಇದೀಗ ಕೇರಳ, ಲಕ್ಷದ್ವೀಪದಲ್ಲಿ ಟ್ರಫ್‌ ಉಂಟಾಗಿದ್ದು, ಇದರ ಪರಿಣಾಮವಾಗಿ ಆಕಾಶದಲ್ಲಿ ಮೋಡಗಳ ಚಲನೆ ಇರುವುದು ಕೂಡ ಚಳಿಗಾಲ ದೂರ ಹೋಗಲು ಕಾರಣ ಎನ್ನುತ್ತಾರೆ ಹವಾಮಾನ ತಜ್ಞರು.

ಅರಣ್ಯ ನಾಶ
ಪಶ್ಚಿಮಘಟ್ಟ ತಪ್ಪಲಿನ ಅರಣ್ಯ ಪ್ರದೇಶ ದಿನದಿಂದ ದಿನಕ್ಕೆ ನಾಶ ಹೊಂದುತ್ತಿದೆ. ಸಸ್ಯ ಸಂಕುಲ, ಜೀವ ಸಂಕುಲಗಳು ನಶಿಸುತ್ತಿದೆ. ಕಳೆದ ಬಾರಿ ಸುಮಾರು 173 ಕಡೆಗಳಲ್ಲಿ ಭೂಕುಸಿತ ಉಂಟಾಗಿ, ಸುಮಾರು 2,500 ಹೆಕ್ಟೆರ್‌ ಅರಣ್ಯ ನಾಶ ಹೊಂದಿತ್ತು. ಮತ್ತೂಂದೆಡೆ, ಅರಣ್ಯ ಪ್ರದೇಶದಲ್ಲಿ ಹೋಂ ಸ್ಟೇ ನಿರ್ಮಾಣದಿಂದ ಕಾಡುಗಳು ಕ್ರಮೇಣ ಕಡಿಮೆಯಾಗುತ್ತಿದೆ. ಇದು ಕೂಡ ಹವಾಮಾನ ವೈಪರಿತ್ಯಕ್ಕೆ ಕಾರಣ ಎನ್ನಬಹುದು.
– ದಿನೇಶ್‌ ಹೊಳ್ಳ, ಪರಿಸರವಾದಿ

ಮೋಡಗಳ ಚಲನೆ
ಕರಾವಳಿ ಭಾಗದಲ್ಲಿ ಡಿಸೆಂಬರ್‌ ವೇಳೆ ಚಳಿ ಇರಬೇಕಿತ್ತು. ಆಕಾಶದಲ್ಲಿ ಮೋಡಗಳ ಚಲನೆ ಇರುವುದಿಂದ ಗರಿಷ್ಠ ಉಷ್ಣಾಂಶ ಏರಿಕೆಯಾಗಿ ಸೆಕೆ ಹೆಚ್ಚುತ್ತಿದೆ. ಹಿಂಗಾರು ಮಾರುತ ಕ್ಷೀಣಿಸುತ್ತಿದ್ದು, ಮುಂದಿನ ದಿನಗಳಲ್ಲಿ ಶುಭ್ರ ಆಕಾಶ ಉಂಟಾಗಿ, ಚಳಿ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇದೆ.
 - ಸುನಿಲ್‌ ಗವಾಸ್ಕರ್‌, ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ

– ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.