ಅಳವಡಿಸಿದ ಬೆನ್ನಲ್ಲೇ ಕಿತ್ತುಹೋದ ಕಾಂಕ್ರೀಟ್
ನಟ್ಟಿಬೈಲು ಅಂಗನವಾಡಿ ಸಮೀಪ ಹದಗೆಟ್ಟ ರಸ್ತೆ; ಕಳಪೆ ಕಾಮಗಾರಿಗೆ ಗ್ರಾಮಸ್ಥರ ಆಕ್ರೋಶ
Team Udayavani, Nov 4, 2019, 5:58 AM IST
ಉಪ್ಪಿನಂಗಡಿ: ಗ್ರಾಮೀಣ ಭಾಗದ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ಸರಕಾರ ಶಾಶ್ವತ ಪರಿಹಾರ ಕಂಡುಕೊಳ್ಳಲು ಬಯಸಿದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಕಳಪೆಯಾಗಿ, ಅನುದಾನ ಪೋಲಾಗಿರುವ ನಿದರ್ಶನ ಇಲ್ಲಿದೆ.
ಪಂಚಾಯತ್ ವ್ಯಾಪ್ತಿಯ 3ನೇ ವಾರ್ಡ್ನ ನಟ್ಟಿಬೈಲು ಅಂಗನವಾಡಿ ಸಮೀಪ ಒಂದು ವರ್ಷದ ಹಿಂದೆ ನಿರ್ಮಿಸಿದ ಕಾಂಕ್ರೀಟ್ ರಸ್ತೆ ಹದಗೆಟ್ಟು ಹೋಗಿದೆ.
ಪುತ್ತೂರು ಮಾಜಿ ಶಾಸಕರ ನಿಧಿಯಲ್ಲಿ 6 ಲಕ್ಷ ರೂ.ಗಳಿಗೂ ಹೆಚ್ಚು ಅನುದಾನದಲ್ಲಿ ರಚಿಸಲಾದ ಈ ಕಾಂಕ್ರೀಟ್ ರಸ್ತೆ ಐದೇ ತಿಂಗಳಲ್ಲಿ ಸಿಮೆಂಟ್ ಕರಗಿ ಹೊಂಡಮಯವಾಗಿದೆ. ಗುತ್ತಿಗೆದಾರರು ಆಗಲೇ ತೇಪೆ ಹಚ್ಚಿ, ಅನುದಾನಕ್ಕೆ ಎಂಜಿನಿಯರ್ ಕಡೆಯಿಂದ ಮಂಜೂರಾತಿಯನ್ನೂ ಪಡೆದಿದ್ದರು. ಈ ಕುರಿತು ಗ್ರಾಮ ಸಭೆಯಲ್ಲೂ ಟೀಕೆ ವ್ಯಕ್ತವಾಗಿತ್ತು. ಎಂಜಿನಿಯರ್ ಪರಿಶೀಲಿಸುವುದಾಗಿ ನೀಡಿದ್ದ ಭರವಸೆಯೂ ಹುಸಿಯಾಯಿತು.
ಮೂಲಸೌಕರ್ಯಗಳ ಒದಗಣೆ ವಿಚಾರದಲ್ಲಿ ಆನ್ಲೈನ್ ಟೆಂಡರ್ ಕರೆದರೆ ಇಂತಹ ಸಮಸ್ಯೆ ಉದ್ಭವಿಸುವುದು ಸಹಜ. ಅಧಿಕಾರಿಗಳು, ಎಂಜಿನಿಯರ್ಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಕಾಮಗಾರಿ ಪೂರ್ತಿಗೊಳಿಸಿದ ತಿಂಗಳಲ್ಲೇ ಸಿಮೆಂಟ್ ಕರಗಿ ಹೋಗಿದೆ. ತೇಪೆ ಹಚ್ಚಲಾಗಿದ್ದು, ಪುನಃ ಹೊಂಡಗಳು ನಿರ್ಮಾಣವಾಗಿವೆ ಎಂದು ಗ್ರಾಮಸ್ಥ ಚಿದಾನಂದ ಆರೋಪಿಸಿದ್ದಾರೆ.
ಹೋರಾಟಕ್ಕೆ ಸಿದ್ಧ
ವಾರ್ಡ್ ಸದಸ್ಯ ಚಂದ್ರಶೇಖರ ಮಡಿವಾಳ ನಟ್ಟಿಬೈಲು ಪ್ರತಿಕ್ರಿಯಿಸಿ, ಕಾಂಕ್ರೀಟ್ ಕಾಮಗಾರಿ ಕಳಪೆಯಾಗಿದೆ. ಅದನ್ನು ಸರಿಪಡಿಸುವ ಹೊಣೆ ಗುತ್ತಿಗೆದಾರರಿಗಿದೆ. ಮರು ಕಾಂಕ್ರೀಟ್ ಹಾಕದಿದ್ದರೆ ಯಾವ ಹೋರಾಟಕ್ಕೂ ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.
ಇಲಾಖೆಯೇ ಕ್ರಮ ಕೈಗೊಳ್ಳಲಿ
ಅಧ್ಯಕ್ಷ ಅಬ್ದುಲ್ ರಹಿಮಾನ್ ಪ್ರತಿಕ್ರಿಯಿಸಿ, ಮಾಜಿ ಶಾಸಕರು ತಮ್ಮ ನಿಧಿಯಿಂದ ಅನುದಾನ ನೀಡಿದ್ದಾರೆ. ಗುತ್ತಿಗೆದಾರರೇ ಕಳಪೆ ಕಾಮಗಾರಿಗೆ ಹೊಣೆ. ಕಾಮಗಾರಿ ಮುಗಿದ ಬಳಿಕ ಪಂಚಾಯತ್ಗೂ ಮಾಹಿತಿ ನೀಡಿಲ್ಲ. ಸಂಬಂಧಪಟ್ಟ ಇಲಾಖೆಯೇ ಅವರ ಮೇಲೆ ಕ್ರಮ ಜರಗಿಸಲಿ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
Dharmasthala; ಕೆಎಸ್ಸಾರ್ಟಿಸಿ ಬಸ್ನಡಿ ಸಿಲುಕಿ ಮಹಿಳೆ ಸಾವು
ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ