ಮೆಸ್ಕಾಂ ಡಿಜಿಟಲ್‌ ಮೀಟರ್‌ ಅಳವಡಿಕೆಗೆ ಗ್ರಾಹಕರು ಹಣ ನೀಡಬೇಕಿಲ್ಲ


Team Udayavani, Mar 19, 2019, 1:00 AM IST

mescom.jpg

ಸುಳ್ಯ: ಮೆಸ್ಕಾಂ ಪ್ರಸ್ತುತ ಉಚಿತವಾಗಿ ಹೊಸ ಡಿಜಿಟಲ್‌ ಮೀಟರ್‌ ಅಳವಡಿಸುತ್ತಿದ್ದು, ಇದನ್ನು ಜೋಡಿಸುವ ಏಜೆನ್ಸಿಗಾಗಲೀ ಅಥವಾ ಅದರ ಸಿಬಂದಿಗಾಗಲೀ ಗ್ರಾಹಕರು ಯಾವುದೇ ಹಣ ತೆರಬೇಕಾಗಿಲ್ಲ.

ಮೆಸ್ಕಾಂ ಅಧಿಕಾರಿಗಳೇ ಇದನ್ನು ಖಚಿತಪಡಿಸಿದ್ದು, ಹೊಸ ಡಿಜಿಟಲ್‌ ಮೀಟರ್‌ ಅಳವಡಿಕೆಯ ಗುತ್ತಿಗೆಯನ್ನು ಖಾಸಗಿ ಏಜೆನ್ಸಿಗೆ ನೀಡಲಾಗಿದೆ. ಈ ಏಜೆನ್ಸಿಯು ಟೆಂಡರ್‌ ಮೂಲಕ ಮೀಟರ್‌ ಜೋಡಣಾ ಕಾಮಗಾರಿ ಗುತ್ತಿಗೆಯನ್ನು ಪಡೆದಿದೆ. ಹಾಗಾಗಿ ಗ್ರಾಹಕರು ಮೀಟರ್‌ ಅಳವಡಿಸಿದ್ದಕ್ಕೆ ಚಿಕ್ಕಾಸನ್ನೂ ನೀಡಬೇಕಿಲ್ಲ.

ಕೆಲವೆಡೆ ಹಣ ವಸೂಲು
ಪ್ರಸ್ತುತ ಸುಳ್ಯ ಮತ್ತು ಪುತ್ತೂರು ತಾಲೂಕಿನ ಹಲವೆಡೆ ಗ್ರಾಹಕರಿಂದ ಹಣ ವಸೂಲು ಮಾಡಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಈಶ್ವರಮಂಗಲ, ಕರ್ನೂರು, ಅಜ್ಜಾವರ ಸಹಿತ ಹಲವೆಡೆ ಮೀಟರ್‌ ಅಳವಡಿಸಿದ ಬಳಿಕ ಸಂಬಂಧಪಟ್ಟ ಏಜೆನ್ಸಿಯ ಸಿಬಂದಿ ತಮ್ಮಿಂದ 100 ರೂ. ಗಳಿಂದ 500 ರೂ. ಗಳವರೆಗೂ ವಸೂಲಿ ಮಾಡಿದ್ದಾರೆ ಎನ್ನುತ್ತಾರೆ ಕೆಲವು ಗ್ರಾಹಕರು. ಇವರಲ್ಲಿ ಹೆಚ್ಚು ಹೊರಜಿಲ್ಲೆಯವರೇ ಇದ್ದು, ಕಡಿಮೆ ಹಣ ಕೊಟ್ಟರೂ ಬಿಡುವುದಿಲ್ಲ. ಮಾಹಿತಿ ಇದ್ದವರು ಪ್ರಶ್ನಿಸಿದರೆ ಮೀಟರ್‌ ಉಚಿತ, ಆದರೆ ಜೋಡಣೆಗೆ ಶುಲ್ಕವಿದೆ ಎಂದು ಸಬೂಬು ಹೇಳುತ್ತಿರುವುದೂ ಬೆಳಕಿಗೆ ಬಂದಿದೆ.

ಕೇಂದ್ರ ಸರಕಾರದ ಯೋಜನೆ ಅನ್ವಯ ಹೊಸ ಮೀಟರ್‌ ಅಳವಡಿಕೆ ಉಚಿತ. ಇದಕ್ಕೆ ತಗಲುವ ವೆಚ್ಚದ ಶೇ. 60ರಷ್ಟನ್ನು ಕೇಂದ್ರ ಹಾಗೂ ಉಳಿದದ್ದನ್ನು ಮೆಸ್ಕಾಂ ಭರಿಸುತ್ತವೆ. ಹೀಗಾಗಿ ಇದು ಗ್ರಾಹಕರಿಗೆ ಉಚಿತವಾಗಿ ಲಭ್ಯ. ಅಳವಡಿಕೆ ಕೆಲಸವನ್ನು ಖಾಸಗಿ ಏಜೆನ್ಸಿಗೆ ಟೆಂಡರ್‌ ಮೂಲಕ ವಹಿಸಲಾಗಿದೆ. ಏಜೆನ್ಸಿಯು ತನ್ನ ಸಿಬಂದಿಗೆ ವೇತನ ನೀಡುವುದರಿಂದ ಗ್ರಾಹಕರು ಹಣ ಪಾವತಿಸಬೇಕಿಲ್ಲ.

“ಸಿಬಂದಿಯ ಪರಿಚಯ ನಮಗಿಲ್ಲ. ಹಾಗಾಗಿ ಯಾರ ಮೇಲೆ ಯಾರಿಗೆ ದೂರು ನೀಡುವುದು ಎಂಬುದೇ ಗೊಂದಲ. ಮೀಟರ್‌ ಅಳವಡಿಸಿದ್ದಕ್ಕೆ ಹಣ ಕೊಡಿ ಎಂದದ್ದಕ್ಕೆ ಕೊಟ್ಟೆವು. ನಾವು ಗುರುತುಪತ್ರ ಕೇಳಿದರೂ ಅವರ ಬಳಿ ಇರಲಿಲ್ಲ’ ಎನ್ನುತ್ತಾರೆ  ಗ್ರಾಹಕ ಶರೀಫ್.

ಏನಿದು ಯೋಜನೆ?
ಕೇಂದ್ರ ಸರಕಾರದ ಐಪಿಡಿಎಸ್‌ (ಇಂಟಿಗ್ರೇಟೆಡ್‌ ಪವರ್‌ ಡೆವಲಪ್‌ಮೆಂಟ್‌ ಸ್ಕೀಮ್‌) ಹಾಗೂ ಡಿಡಿಯುಜಿವೈ (ದೀನ್‌ ದಯಾಳ್‌ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆ) ಆಶ್ರಯದಲ್ಲಿ ಡಿಜಿಟಲ್‌ ರೀಡಿಂಗ್‌ ಹೊಂದಿರುವ “ಸ್ಟಾಟಿಕ್‌ ಮೀಟರ್‌’ ಅಳವಡಿಸಲಾಗುತ್ತದೆ. ಮೆಸ್ಕಾಂ ಅಧೀನದಲ್ಲಿ ಬರುವ ದ.ಕ., ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 24 ಲಕ್ಷ ವಿದ್ಯುತ್‌ ಸಂಪರ್ಕಗಳಿದ್ದು, ಹಂತ ಹಂತವಾಗಿ ಎಲ್ಲೆಡೆ ಅಳವಡಿಸಲಾಗುತ್ತಿದೆ.
ಹೊಸ ಮೀಟರ್‌ನಲ್ಲಿ ಎಲೆಕ್ಟ್ರೋ ಮೆಕ್ಯಾನಿಕಲ್‌ ಮೀಟರ್‌ ರೀತಿಯ ಮೆಕ್ಯಾನಿಕಲ್‌ ಪಾರ್ಟ್‌ ಇರದು.

ಮೀಟರ್‌ನೊಳಗೆ ವೀಲ್‌ ತಿರುಗದು. ಸ್ವಯಂ ಚಾಲಿತ ಡಿಜಿಟಲ್‌ ವ್ಯವಸ್ಥೆ ಇದ್ದು, ಬಳಕೆ ವಿದ್ಯುತ್‌ ಯೂನಿಟ್‌ ದಾಖಲಾಗಿ ಪ್ರದರ್ಶಿತವಾಗುತ್ತದೆ. ಇದರಿಂದ ವಿದ್ಯುತ್‌ ದುರ್ಬಳಕೆ ಸಾಧ್ಯವಿಲ್ಲ. ರೀಡಿಂಗ್‌ ನಕಲಿಗೆ ಅವಕಾಶ ಇಲ್ಲ. ನಗರ ಪ್ರದೇಶ ಮತ್ತು ಗ್ರಾಮೀಣ ಭಾಗಗಳಲ್ಲಿ ತಲಾ 2 ಲಕ್ಷಗಳಂತೆ ಇಂತಹ ಒಟ್ಟು 4 ಲಕ್ಷ ಸ್ಟಾಟಿಕ್‌ ಮೀಟರ್‌ ಅಳವಡಿಸುವ ಕಾರ್ಯವನ್ನು 2019ರ ಮಾರ್ಚ್‌ನೊಳಗೆ ಪೂರೈಸುವ ಗುರಿಯನ್ನು ಮೆಸ್ಕಾಂ ಹೊಂದಿದೆ.

ಮೆಸ್ಕಾಂ ಕಚೇರಿಗೆ ದೂರು ಸಲ್ಲಿಸಿ
ಡಿಜಿಟಲ್‌ ಮೀಟರ್‌ ಅಳವಡಿಸುವ ಸಂಬಂಧ ಶುಲ್ಕ ವಸೂಲು ಮಾಡುತ್ತಿರುವುದು ಬೆಳಕಿಗೆ ಬಂದರೆ ಆಯಾ ವ್ಯಾಪ್ತಿಯ ಮೆಸ್ಕಾಂ ಕಚೇರಿಗೆ ದೂರು ನೀಡಬಹುದು ಎಂದು ಮೆಸ್ಕಾಂ ಮೂಲಗಳು ಹೇಳಿವೆ.

ಹಣ ನೀಡಬೇಡಿ
ಮೆಸ್ಕಾಂ ಡಿಜಿಟಲ್‌ ಮೀಟರ್‌ ಅಳವಡಿಕೆ ಕಾಮಗಾರಿಯನ್ನು ಖಾಸಗಿ ಏಜೆನ್ಸಿಯು ಟೆಂಡರ್‌ ಮೂಲಕ ಪಡೆದಿದೆ. ಆ ಸಂಸ್ಥೆ ತನ್ನ ಸಿಬಂದಿ ಮೂಲಕ ಗ್ರಾಹಕರ ಮನೆಗೆ ಉಚಿತವಾಗಿ ಮೀಟರ್‌ ಅಳವಡಿಸಬೇಕು. ಅಳವಡಿಕೆ ವೇಳೆ ಹಣ ವಸೂಲು ಮಾಡುವ ಬಗ್ಗೆ ಈ ಹಿಂದೆ ದೂರು ಬಂದಾಗ ಎಚ್ಚರಿಸಲಾಗಿತ್ತು. ಯಾವುದೇ ಕಾರಣಕ್ಕೂ ಗ್ರಾಹಕರು ಹಣ ಪಾವತಿಸಬಾರದು.
– ಮಂಜಪ್ಪ, ಅಧೀಕ್ಷಕ ಎಂಜಿನಿಯರ್‌, ಮೆಸ್ಕಾಂ ಮಂಗಳೂರು ವಲಯ

ಟಾಪ್ ನ್ಯೂಸ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.