ಸಹಕಾರಿ ಸಂಸ್ಥೆಗಳ ಬೆಳೆ ಸಾಲ ಮನ್ನಾ: ಗೊಂದಲದಲ್ಲಿ ರೈತರು


Team Udayavani, May 26, 2018, 5:05 AM IST

2000-note-bundle-600.jpg

ಬಂಟ್ವಾಳ : ಸಹಕಾರಿ ಸಂಸ್ಥೆಗಳಿಂದ ರೈತರು ಬೆಳೆ ಉದ್ದೇಶಕ್ಕೆ ಪಡೆದ ಸಾಲವನ್ನು ಮರುಪಾವತಿಸುವಂತೆ ಸಹಕಾರಿ ಸಂಸ್ಥೆಗಳಿಂದ ರೈತರಿಗೆ ಸೂಚನ ಪತ್ರಗಳು ಬಂದಿವೆ. ಅದರಲ್ಲಿ 50 ಸಾವಿರ ರೂ. ಮನ್ನಾ ಆಗಿದೆ ಎಂದು ತಿಳಿಸಿದ್ದು, ಉಳಿದ ಸಾಲದ ಮೊತ್ತವನ್ನು ಪಾವಸಿತುವಂತೆ ಸೂಚಿಸಿದ್ದಾರೆ. ಹೊಸ ಸರಕಾರ ಆಡಳಿತಕ್ಕೆ ಬಂದಿರುವ ಈ ಸಂದರ್ಭದಲ್ಲಿ ಪೂರ್ಣ ಸಾಲ ಮನ್ನಾ ಘೋಷಣೆಯ ಹೊಸ್ತಿಲಲ್ಲಿ ಇಂತಹ ಪತ್ರಗಳಿಂದ ರೈತರು ಸಾಲ ಪಾವತಿ ಮಾಡಿ ಇರುವ ಸೌಲಭ್ಯ ಪಡೆಯುವುದೇ ಅಥವಾ ಮರುಪಾವತಿ ಮಾಡದೆ ಮುಂದಿನ ಬೆಳವಣಿಗೆಯನ್ನು ಕಾಯುವುದೇ ಎಂಬ ಗೊಂದಲ ವ್ಯಕ್ತವಾಗಿದೆ. ನೂತನ ಸರಕಾರ ಅಸ್ತಿತ್ವಕ್ಕೆ ಬರುತ್ತಿರುವ ಈ ಸಂದರ್ಭದಲ್ಲಿ ಪ್ರಸ್ತುತ ಇರುವ ಮನ್ನಾ ಅವಕಾಶ ಮುಂದಿನ ಘೋಷಿತ ಬೆಳೆ ಸಾಲ ಮನ್ನಾಗೂ ಅನ್ವಯಿಸುವುದೇ ಎಂಬುದಾಗಿ ಅನೇಕ ರೈತರು ಪ್ರಶ್ನಿಸಿದ್ದು, ಸಾಲ ಪಾವತಿ ಮಾಡಬೇಕೆ ಬೇಡವೆ ಎಂಬ ಗೊಂದಲ ಪರಿಹಾರ ಆದಂತೆ ಕಾಣುತ್ತಿಲ್ಲ.

ಸಹಕಾರಿ ಸಂಸ್ಥೆಗಳಲ್ಲಿ ಈ ಬಗ್ಗೆ ಪ್ರಶ್ನಿಸಿದರೆ, ನಮಗೂ ಹೆಚ್ಚಿನ ವಿಚಾರ ಗೊತ್ತಿಲ್ಲ ಎನ್ನುತ್ತಾರೆ. 2017 ಜೂನ್‌ 19ಕ್ಕೆ ಒಬ್ಬರು ರೈತ ಒಂದು ಲಕ್ಷ ಸಾಲ ಹೊಂದಿದ್ದರೆ. ಪ್ರಸ್ತುತ ಅವಧಿಯಲ್ಲಿ 50 ಸಾವಿರ ರೂ.ಗಳನ್ನು ಸಂಸ್ಥೆಗೆ ಪಾವತಿಸಿದರೆ, ಅವರಿಗೆ 50 ಸಾವಿರ ರೂ. ಮನ್ನಾ ಆಗುವುದು. ಜೊತೆಗೆ ಶೂನ್ಯ ಬಡ್ಡಿ ಸೌಲಭ್ಯವೂ ದೊರೆಯುವುದು ಎಂಬುದಾಗಿ ಇಲ್ಲಿ ವಿಷಯ ಪ್ರಸ್ತಾವ ಆಗಿದೆ.

ಸರಕಾರ ಹೊಸದಾಗಿ ಮನ್ನಾ ಘೋಷಿಸಿದರೆ ಪೂರ್ಣ ಮನ್ನಾ ಆಗುವುದೇ? ಸಾಲ ಮರುಪಾವತಿ ಮಾಡಿದ ರೈತನಿಗೆ ಉಳಿಕೆ 50 ಸಾವಿರ ರೂ. ಮನ್ನಾ ಸೌಲಭ್ಯವು ಪುನಃ ದೊರೆಯುವುದೇ ಎಂಬಿತ್ಯಾದಿ ಪ್ರಶ್ನೆಗಳು ರೈತರಲ್ಲಿವೆ. ಅನೇಕ ರೈತರು ಸಾಲ ಪಾವತಿ ಬಗ್ಗೆ ತಮ್ಮ ಗೊಂದಲಗಳನ್ನು ಹೇಳಿಕೊಂಡಿದ್ದು, ರಾಜಕೀಯ ಮುಖಂಡರ ಹೇಳಿಕೆಯಂತೆ ಸಾಲ ನವೀಕರಿಸಿದರೆ ಮನ್ನಾಕ್ಕೆ ಅರ್ಹರಾಗುವುದಿಲ್ಲ ಎಂಬ ಭಯ ಮೂಡಿದೆ. ಈ ಬಗ್ಗೆ ಸರಕಾರದಿಂದ ಸ್ಪಷ್ಟ ಮಾಹಿತಿ ಪ್ರಕಟಿಸಿದ್ದಲ್ಲಿ ರೈತರ ಸಂಕಷ್ಟಕ್ಕೆ ಪರಿಹಾರ ಸಿಗಬಹುದು.

ಹೊಸ ಪ್ರಸ್ತಾಪವಲ್ಲ
ಪ್ರಸ್ತುತ ಸಹಕಾರ ಸಂಸ್ಥೆಗಳು ನೀಡುವ 50 ಸಾವಿರ ರೂ. ಸಾಲಮನ್ನಾ ಹೊಸ ಸರಕಾರದ ಮನ್ನಾ ವಿಚಾರಕ್ಕೆ ಸಂಬಂಧಿಸಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ರೈತರ ಸಹಕಾರಿ ಬ್ಯಾಂಕ್‌ಗಳ 50 ಸಾವಿರ ರೂ. ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಅಧಿಕೃತ ಆದೇಶವನ್ನು ಅವರು ಅಧಿಕಾರದಲ್ಲಿ ಇರುವಾಗಲೇ ಹೊರಡಿಸಿದ್ದರು. ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಒಟ್ಟು 14 ಷರತ್ತುಗಳನ್ನು ವಿಧಿಸಿದ್ದರು. ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ, ಪಶು ಭಾಗ್ಯ ಸಾಲ, ಕೃಷಿಯೇತರ ಸಾಲಗಳು, ಮಧ್ಯಮಾವಧಿ, ದೀರ್ಘಾವಧಿ ಸಾಲಗಳು ಮನ್ನಾ ಇಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು. ಸುತ್ತೋಲೆಯ ಪ್ರಮುಖ ಷರತ್ತುಗಳಂತೆ 50 ಸಾವಿರ ರೂ.ಗಳಿಗಿಂತ ಹೆಚ್ಚು ಅಲ್ಪಾವಧಿ ಸಾಲ ಪಡೆದವರು 2018 ಜೂನ್‌ ಒಳಗೆ ಅಸಲು ಪಾವತಿಸಿದರೆ ಮಾತ್ರ 50 ಸಾವಿರ ರೂ. ಸಾಲ ಮನ್ನಾ ದೊರೆಯುವುದು.

ಅಲ್ಪಾವಧಿಯ ಸಾಲದಲ್ಲಿ ಸುಸ್ತಿ ಬಾಕಿ ಹೊಂದಿರುವ ರೈತರು 2017 ಡಿ. 31ರೊಳಗಾಗಿ ಮರುಪಾವತಿ ಮಾಡಿದರೆ ಮಾತ್ರ 50 ಸಾವಿರ ರೂ. ಸಾಲ ಮನ್ನಾ, ಅಸಲು ಮತ್ತು ಬಡ್ಡಿ ಸಹಿತ ಸಾಲ ಮನ್ನಾ, ಗಡುವಿನ ಬಳಿಕವಷ್ಟೇ ಸಾಲ ಮನ್ನಾ ಸೌಲಭ್ಯ ಪಡೆದವರಿಗೆ ಮತ್ತೆ ಸಾಲ ಕೊಡುವುದು ಎಂಬುದಾಗಿ ಸ್ಪಷ್ಟಪಡಿಸಿದೆ. ಒಂದಕ್ಕಿಂತ ಹೆಚ್ಚು ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದರೂ ಒಂದು ಕಡೆ ಮಾತ್ರ ಸಾಲ ಮನ್ನಾ ಸೌಲಭ್ಯ ಪಡೆಯಬಹುದು. ಸಾಲ ಪಡೆದ ರೈತ ಮೃತಪಟ್ಟಿದ್ದಲ್ಲಿ ವಾರಸುದಾರರು ಸಾಲ ಕಟ್ಟಿದರೆ ಮಾತ್ರ ಮನ್ನಾ ಎಂಬುದಾಗಿ ಸ್ಪಷ್ಟಪಡಿಸಿದೆ.

ಶೇ. 14 ಬಡ್ಡಿ
ಈ 50 ಸಾವಿರ ರೂ. ಮನ್ನಾ ಯಾವ ಸರಕಾರ ಮಾಡಿದ್ದು ಎಂಬುದು ಅನೇಕ ರೈತರಿಗೆ ಸ್ಪಷ್ಟವಿಲ್ಲ. ನಿರ್ದಿಷ್ಟ ಅವಧಿಯಲ್ಲಿ ಉಳಿಕೆ ಪಾವತಿ ಮಾಡದೆ ಅವಧಿ ಮೀರಿದ ಸಂದರ್ಭದಲ್ಲಿ ಸರಕಾರದಿಂದ ಸಿಗಬೇಕಾದ ಶೂನ್ಯ ಬಡ್ಡಿ ಸೌಲಭ್ಯವು ರೈತರಿಗೆ ಸಿಗುವುದಿಲ್ಲ. ಪ್ರತೀ ಸಾಲಕ್ಕೆ ಶೇ. 14ರಂತೆ ಬಡ್ಡಿ ಪಾವತಿಸಬೇಕಾಗುವುದು ಎಂಬ ಒಕ್ಕಣೆಯೂ ರೈತರಿಗೆ ಬಂದಿರುವ ಪತ್ರದಲ್ಲಿದೆ.

ಮರುಪಾವತಿ ವೇಳೆ ಸೌಲಭ್ಯ
ಕಳೆದ ವರ್ಷ 2017 ಜೂನ್‌ 19ರ ವರೆಗೆ ಯಾರೆಲ್ಲ ರೈತರು ಕೃಷಿ ಉದ್ದೇಶದ ಬೆಳೆ ಸಾಲವನ್ನು ಹೊಂದಿದ್ದರೋ ಅವರಿಗೆ ಪ್ರಸ್ತುತ ಅವಧಿಯಲ್ಲಿ ಸಾಲ ಮರುಪಾವತಿ ಸಂದಾಯದ ಸಂದರ್ಭ 50 ಸಾವಿರ ರೂ. ಮನ್ನಾ ಅವಕಾಶವಿದೆ. ರೈತರು ಪ್ರಸ್ತುತ ಅವಧಿಯಲ್ಲಿ 3 ಲಕ್ಷರೂ. ತನಕ ಬೆಳೆ ಸಾಲದ ಶೂನ್ಯಬಡ್ಡಿ ಸೌಕರ್ಯವನ್ನು ಪಡೆಯಲು ಅರ್ಹರಾಗುತ್ತಾರೆ.
– ಎ. ಜಯಶಂಕರ ಬಾಸ್ರಿತ್ತಾಯ, ಅಧ್ಯಕ್ಷರು, ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘ

— ರಾಜಾ ಬಂಟ್ವಾಳ

ಟಾಪ್ ನ್ಯೂಸ್

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Venur: ನಾಯಿಯನ್ನು ಹೊತ್ತೊಯ್ದ ಚಿರತೆ! ವೈರಲ್ ಆಯ್ತು ಸಿಸಿಟಿವಿ ದೃಶ್ಯ

Venur: ನಾಯಿಯನ್ನು ಹೊತ್ತೊಯ್ದ ಚಿರತೆ! ವೈರಲ್ ಆಯ್ತು ಸಿಸಿಟಿವಿ ದೃಶ್ಯ

Uppinangady ಬೆಲೆಬಾಳುವ ಮರ ಕಡಿದು ಸಾಗಾಟ

Uppinangady ಬೆಲೆಬಾಳುವ ಮರ ಕಡಿದು ಸಾಗಾಟ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.