ಕ್ರಿಸ್ಮಸ್ ಸಂಭ್ರಮಕ್ಕೆ ಅಡ್ಡಿಯಾದ ಕೋವಿಡ್


Team Udayavani, Dec 24, 2020, 11:52 AM IST

ಕ್ರಿಸ್ಮಸ್ ಸಂಭ್ರಮಕ್ಕೆ ಅಡ್ಡಿಯಾದ ಕೋವಿಡ್

ಮಹಾನಗರ, ಡಿ. 23: ಹಬ್ಬಗಳ ಸಂಭ್ರಮ ಆಚರಣೆಗೆ ಈ ವರ್ಷ ಕೋವಿಡ್ ಅಡ್ಡಿಯಾಗಿದ್ದು, ಕ್ರಿಸ್ಮಸ್‌ ಹಬ್ಬ ಕೂಡ ಇದಕ್ಕೆ ಹೊರತಾಗಿಲ್ಲ.

ನಾಡಿನಲ್ಲಿ ಕ್ರಿಸ್ಮಸ್‌ ಆಚರಿಸುವವರ ಮೇಲೆ ಮಾತ್ರವಲ್ಲ ವಿದೇಶದಿಂದ ಕ್ರಿಸ್ಮಸ್‌, ಹೊಸ ವರ್ಷದ ರಜೆಯಲ್ಲಿ ಊರಿಗೆ ಬಂದು ಹಬ್ಬ ಆಚರಿಸುವವರ ಮೇಲೂ ಕೋವಿಡ್ ಪರಿಣಾಮ ಬೀರಿದೆ.

ಸರಳವಾಗಿ ಆಚರಣೆ :

ಮಂಗಳೂರು ಸಹಿತ ಕರಾವಳಿಯಲ್ಲಿ ಯೇಸು ಕ್ರಿಸ್ತರ ಜನನದ ಹಬ್ಬ ಕ್ರಿಸ್ಮಸ್‌ ಆಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಡಿ. 24ರಂದು ಸಂಜೆ, ಡಿ. 25ರಂದು ಹಗಲು ವೇಳೆ ಚರ್ಚ್‌ಗಳಲ್ಲಿ ಮತ್ತು ಕ್ರೈಸ್ತರ ಮನೆಗಳಲ್ಲಿ ಸಂಭ್ರಮಗಳು ಸರಳವಾಗಿ ನಡೆಯಲಿವೆ.

ಇಂದು ಬಲಿಪೂಜೆಗಳು :

ಡಿ. 24ರಂದು ಸಂಜೆ ಮತ್ತು ಡಿ. 25ರಂದು ಬೆಳಗ್ಗೆ ಚರ್ಚ್‌ಗಳಲ್ಲಿ ಕ್ರಿಸ್ಮಸ್‌ ಹಬ್ಬದ ಬಲಿಪೂಜೆಗಳು ನೆರವೇರಲಿವೆ. ಕ್ರಿಸ್ಮಸ್‌ ಸಂಬಂಧಿತ ಗೋದಲಿ (ಕ್ರಿಬ್‌)ಗಳು ಕ್ರೈಸ್ತರ ಮನೆಗಳಲ್ಲಿ ಮತ್ತು ಚರ್ಚ್‌ಗಳಲ್ಲಿ ನಿರ್ಮಾಣವಾಗಿದ್ದು, ಅವುಗಳಿಗೆ ಫೈನಲ್‌ ಟಚ್‌ ನೀಡಲಾಗಿದೆ.

ಕ್ರಿಸ್ಮಸ್‌ ಗೀತೆಗಳ (ಕ್ಯಾರಲ್‌) ಗಾಯನ ಕುರಿತಂತೆ ಚರ್ಚ್‌ಗಳಲ್ಲಿ ತರಬೇತಿ ನಡೆದಿದ್ದು, ಡಿ. 24ರಂದು ಬಲಿಪೂಜೆಗೆ ಮುಂಚಿತವಾಗಿ ಈ ಗೀತೆಗಳನ್ನು ಹಾಡಲು ಸಿದ್ಧತೆಗಳಾಗಿವೆ. ಗೋದಲಿ, ಮನೆ, ಚರ್ಚ್‌, ಪ್ರಾರ್ಥನಾ ಮಂದಿರಗಳನ್ನು ಅಲಂಕರಿಸುವ ನಕ್ಷತ್ರಗಳು, ಘಂಟೆ (ಬೆಲ್‌)ಗಳ ಸಾಲು, ಕ್ರಿಸ್ಮಸ್‌ ಟ್ರೀ, ಸಾಂತಾಕ್ಲಾಸ್‌ ವೇಷ ಭೂಷಣ ಇತ್ಯಾದಿಗಳ ಖರೀದಿ ಭರ ದಿಂದ ನಡೆಯುತ್ತಿದೆ.

ಸಾಧಾರಣ ವ್ಯಾಪಾರ :

ಕ್ರಿಸ್ಮಸ್‌ ಆಚರಣೆಗೂ ಕೋವಿಡ್ ಪರಿಣಾಮ ತಟ್ಟಿದೆ. ವ್ಯಾಪಾರ ತಕ್ಕ ಮಟ್ಟಿಗೆ ಇದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಲು ಸಾಧ್ಯವೇ ಇಲ್ಲ; ಈಗ ಜನರ ಕೈಯಲ್ಲೂ ಹಣ ಕಡಿಮೆಯಿದೆ ಎಂದು ಬೇಕರಿ ವ್ಯಾಪಾರಿ  ವೈಶಾಖ್‌ ತಿಳಿಸಿದ್ದಾರೆ.

ಕ್ರಿಸ್ಮಸ್‌ ಕೇಕ್‌, ಕುಸ್ವಾರ್‌ ಬೇಡಿಕೆ:

ಕ್ರಿಸ್ಮಸ್‌ ಸ್ಪೆಷಲ್‌ ಕೇಕ್‌ ಜತೆಗೆ ರಿಚ್‌ ಪ್ಲಮ್‌ ಕೇಕ್‌, ಎಗ್‌ಲೆಸ್‌ ಪ್ಲಮ್‌ ಕೇಕ್‌, ಶುಗರ್‌ ಫ್ರೀ ಪ್ಲಮ್‌ ಕೇಕ್‌, ನಟ್ಟಿ ಬೊನಾನಾl, ಗೋಲ್ಡನ್‌ ಕೇಕ್‌, ರೋಯಲ್‌ ಡ್ರೈಫ್ರುಟ್‌ ಕೇಕ್‌, ಬ್ಲ್ಯಾಕ್‌ ಸ್ಟಾಲಿಯನ್‌ ಕೇಕ್‌, ಸ್ಕೋಚ್‌ ವಿಸ್ಕಿ ಕೇಕ್‌, ಮಿಲ್ಕಿ ಬಾದಾಮ್‌ ಕೇಕ್‌, ರೆಡ್‌ ವೆಲ್‌ವೆಟ್‌ ಕೇಕ್‌, ಪರ್ಪಲ್‌ ವೆಲ್‌ವೆಟ್‌ ಕೇಕ್‌, ಗುಲಾಬ್‌ ಜಾಮೂನ್‌ ಚೀಸ್‌ ಕೇಕ್‌, ಓರಿಯೋ ಚೀಸ್‌ ಕೇಕ್‌, ತಿರಮಿಸು ಚೀಸ್‌ ಕೇಕ್‌ ಇತ್ಯಾದಿ ವಿಧ ವಿಧದ ಸಿಗ್ನೇಚರ್‌ ಕೇಕ್‌ಗಳಿಗೆ ಬೇಕರಿಗಳಲ್ಲಿ ಬೇಡಿಕೆ ಹೆಚ್ಚಿದೆ.

ಟಾಪ್ ನ್ಯೂಸ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

5-fusion

UV Fusion: ನಾಟಕದ ಜೀವನಕ್ಕೆ ಯಾತಕ್ಕಾಗಿ ದೇವರ ಹೊಣೆ

4-uv-fusion

Women: ಜಗದೆಲ್ಲ ನೋವನುಂಡರೂ ಹಿತ ಬಯಸುವವಳು ಮಾತೇ

3-uv-fusion

Holi: ಬಣ್ಣಗಳ ಹಬ್ಬ ಹೋಳಿ ಹಬ್ಬ, ಉಲ್ಲಾಸ ತರುವ ಬಣ್ಣಗಳ ಹಬ್ಬ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.