
ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ವಾಟರ್ ವೇ
ಫಲ್ಗುಣಿ ನದಿಯಲ್ಲಿ ಬಾರ್ಜ್ ಮೂಲಕ ವಾಹನ, ಪ್ರಯಾಣಿಕರ ಸಂಚಾರ
Team Udayavani, Sep 17, 2022, 7:10 AM IST

ಮಂಗಳೂರು: ಇದು ಜಿಲ್ಲೆಯ ನ್ಯಾಶ ನಲ್ ವಾಟರ್ ವೇ, ಹೆಸರು ಎನ್ಡಬ್ಲ್ಯು 43. ಈ ಮೂಲಕ ಜಿಲ್ಲೆಯಲ್ಲಿ ಪ್ರಥಮವಾಗಿ ಮಂಗಳೂರಿಗೆ ಜಲಮಾರ್ಗ ಲಭಿಸಿದಂತಾಗಿದೆ. ಸರಕು ಸಾಗಣೆ, ಪ್ರಯಾಣಿಕರ ಸಂಚಾರಕ್ಕೆ ನೆರವಾಗುವಂತೆ ಫಲ್ಗುಣಿ ನದಿಯಲ್ಲಿ ಬಾರ್ಜ್ ಸಂಚಾರ ಯೋಜನೆ ಅಂತಿಮಗೊಂಡಿದೆ.
ರಾಜ್ಯದ ಮೆರಿಟೈಂ ಮಂಡಳಿಯವರು ಸಿದ್ಧಪಡಿಸಿದ ಒಟ್ಟು 29.62 ಕೋಟಿ ರೂ. ವೆಚ್ಚದ ಯೋಜನೆಗೆ ಸಾಗರಮಾಲಾ ದಿಂದ ಅಂತಿಮ ಅನುಮೋ ದನೆ ಬಂದಿದ್ದು, ಶೀಘ್ರ ಕೆಲಸ ಆರಂಭವಾಗಲಿದೆ.
ದಕ್ಷಿಣಕ್ಕೆ ಹೊಯ್ಗೆ ಬಜಾರ್, ಉತ್ತರಕ್ಕೆ ಕೂಳೂರು -ಇವೆರಡು ಈ ಜಲಮಾರ್ಗದ ಕೊನೆಯ ಬಿಂದುಗಳು. ಈ ಯೋಜನೆ ಕಾರ್ಯ ರೂಪಕ್ಕೆ ಬಂದಾಗ ಮಂಗಳೂರು ನಗರವನ್ನು ಬೈಪಾಸ್ ಮಾಡಿ ಕೊಂಡು ಮುಖ್ಯವಾಗಿ ಸರಕು ಸಾಗಣೆ ಲಾರಿಗಳು ಬಂದರು ಕಡೆಯಿಂದ ಕೂಳೂರುವರೆಗೆ ಬಾರ್ಜ್ನಲ್ಲೇ ಸಾಗಬಹುದು. ಇದರಿಂದ ಡೀಸೆಲ್ ಉಳಿತಾಯ, ನಗರದಲ್ಲಿ ವಾಹನ ದಟ್ಟಣೆ ನಿಯಂ ತ್ರಣಕ್ಕೆ ಅನುಕೂಲವಾಗಲಿದೆ. ಪ್ರವಾಸೋದ್ಯಮ ದೃಷ್ಟಿಯಿಂದಲೂ ಒಳ್ಳೆಯದು ಎನ್ನಲಾಗಿದೆ.
ಏನೇನಿದೆ ಯೋಜನೆಯಲ್ಲಿ?
ಎನ್ಡಬ್ಲ್ಯು 43ರಲ್ಲಿ ಹೊಯ್ಗೆ ಬಜಾರ್ ಮತ್ತು ಕೂಳೂರು -ಈ ಎರಡು ಕಡೆ ಫಲ್ಗುಣಿ ನದಿಯಲ್ಲಿ ರ್ಯಾಂಪ್ ಜೆಟ್ಟಿ ನಿರ್ಮಾಣ ಮಾಡಲಾಗುತ್ತದೆ. ಲಾರಿಗಳು ಅಥವಾ ಪ್ರಯಾಣಿಕರ ವಾಹನಗಳು ಬಾರ್ಜ್ಗೆ ಏರಲು ಇದು ಸಹಾಯಕ.
ಮಂಗಳೂರಿನ ವಾಣಿಜ್ಯ ಕೇಂದ್ರವಾದ ಬಂದರಿಗೆ ಹಲವು ಸರಕು ಲಾರಿಗಳು, ಮೀನಿನ ಟ್ರಕ್ಗಳು ಬಂದು ಹೋಗುತ್ತಿರುತ್ತವೆ.
ಅವುಗಳ ಚಾಲಕರು ಬಾರ್ಜ್ಗೆ ಕನಿಷ್ಠ ದರ ತೆತ್ತು ಕೂಳೂರು ಸೇತುವೆ ಸಮೀಪ ಬಂದು ಸೇರಬಹುದು, ಅಲ್ಲಿಂದ ಹೆದ್ದಾರಿಯಲ್ಲಿ ಪ್ರಯಾಣ ಮುಂದುವರಿಸಬಹುದು.
ಇಲಾಖೆಯಿಂದಲೇ ಬಾರ್ಜ್ ಯೋಜನೆಗೆ ಸಂಬಂಧಿಸಿ ಅಗತ್ಯ ವಿರುವ ಬಾರ್ಜ್ ಖರೀದಿಸ ಲಾಗು ತ್ತದೆ, ಇದಕ್ಕಾಗಿ 6.45 ಕೋಟಿ ರೂ. ಮೀಸಲಿರಿಸಲಾಗಿದೆ. ಆರಂಭದಲ್ಲಿ 4 ಟ್ರಕ್ ನಿಲ್ಲಬಲ್ಲಂತಹ ಬಾರ್ಜ್ ಬರಲಿದೆ. ಸ್ಪಂದನೆ ಉತ್ತಮವಾಗಿದ್ದು, ಬೇಡಿಕೆ ಇದ್ದಲ್ಲಿ ಬಾರ್ಜ್ ಗಳ ಸಂಖ್ಯೆ ಹೆಚ್ಚಿಸುವುದಕ್ಕೆ ಅವಕಾಶಗಳಿವೆ ಎಂದು ಮೂಲಗಳು ತಿಳಿಸಿವೆ.
ಸರಕು ವಾಹನಗಳಿಗೆ ಕನಿಷ್ಠ ದರಗಳನ್ನು ವಿಧಿಸಲಾಗುವುದು, ನಿರಂತರವಾಗಿ ಹೋಗುವ ವಾಹನಗಳು ಹೆಚ್ಚಿರುವ ಕಾರಣ ಬಾರ್ಜ್ ಅನ್ನು ಲಾಭದಾಯಕವಾಗಿ ನಿರ್ವಹಣೆ ಮಾಡಿಕೊಂಡು ಹೋಗುವುದು ಸಾಧ್ಯ ಎನ್ನುವುದು ಇಲಾಖೆಯ ಲೆಕ್ಕಾಚಾರ. ಸದ್ಯ ಬಂದರು ಭಾಗದ ಅಗಲ ಕಿರಿದಾದ ಮಾರ್ಗಗಳಲ್ಲಿ ಸರಕು ಲಾರಿಗಳ ಸಂಚಾರ ಕಷ್ಟಕರವಾಗಿದೆ. ಬಾರ್ಜ್ನಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಕೂಳೂರು ವರೆಗೆ ಸಾಗಿ ದರೆ ಮುಂದೆ ಪ್ರಯಾಣ ಸರಾಗವಾಗಲಿದೆ.
ಒಳನಾಡು ಜಲಸಾರಿಗೆ ಇಲಾಖೆಯ ಸದ್ಯದ ಮಾಹಿತಿ ಪ್ರಕಾರ ಬಾರ್ಜ್ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೂ ಉದ್ದೇಶಿಸಲಾಗಿದೆ.
ಯೋಜನೆಗೆ ಮರು ಜೀವ
ಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರವು ರಾಜ್ಯದಲ್ಲಿ ಗುರುತಿಸಿರುವ 11 ವಾಟರ್ವೆàಗಳಲ್ಲಿ ಫಲ್ಗುಣಿ, ನೇತ್ರಾವತಿ ಸೇರಿದಂತೆ ಕಬಿನಿ, ಕಾಳಿ, ಶರಾವತಿ ನದಿಗಳನ್ನು ಸರಕು ಸಾಗಣೆಗಾಗಿ ಅಭಿವೃದ್ಧಿ ಪಡಿಸಲು 2016-17ನೇ ಸಾಲಿನಲ್ಲಿ “ಇನ್ಲ್ಯಾಂಡ್ ವಾಟರ್ವೆàಸ್ ಅಥಾರಿಟಿ ಆಫ್ ಇಂಡಿಯಾ’ (ಐಡಬ್ಲ್ಯುಎಐ)ವಿಸ್ತೃತ ಯೋಜನಾ ವರದಿ ಸಲ್ಲಿಸಿತ್ತು. ಆದರೆ ಸರಕು ಸಾಗಣೆಗೆ ಇವು ಅಷ್ಟಾಗಿ ಸೂಕ್ತವಲ್ಲ ಎಂಬ ವರದಿಯ ಹಿನ್ನೆಲೆ ಯಲ್ಲಿ ಯೋಜನೆಗೆ ಹಿನ್ನಡೆಯಾಗಿತ್ತು. ಈಗ ಮತ್ತೆ ಬಾರ್ಜ್ ಯೋಜನೆಗೆ ಜೀವ ಬಂದಿದೆ.
ಇದು ಕಾರ್ಯರೂಪಕ್ಕೆ ಬಂದಾಗ ಈ ಪ್ರದೇಶದ ಮೊದಲ ಯೋಜನೆ ಇದಾಗಲಿದೆ. ನಗರದಲ್ಲಿ ಸರಕು ಸಾಗಣೆ ವಾಹನಗಳು, ಪ್ರಯಾಣಿಕರ ವಾಹನಕ್ಕೆ ಅವಕಾ ಶವಿದೆ. ಯೋಜನೆ ಟೆಂಡರ್ ಹಂತದಲ್ಲಿದೆ.
– ಕ್ಯಾ| ಸಿ. ಸ್ವಾಮಿ
ಬಂದರು ಮತ್ತು ಒಳನಾಡು ಜಲಸಾರಿಗೆ ನಿರ್ದೇಶಕರು
-ವೇಣುವಿನೋದ್ ಕೆ.ಎಸ್.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಖ್ಯಾತ ನಟ ಅರವಿಂದ ಬೋಳಾರ್

ಮೈಗ್ರೇನ್ ಎಂಬ ತಲೆಶೂಲೆ…ಇದರ ಲಕ್ಷಣಗಳೇನು? ಮೈಗ್ರೇನ್ಗೆ ಇದೆ ಮನೆ ಮದ್ದು

ದುಬೈಯಿಂದ ಆಕ್ಲೆಂಡ್ ಗೆ ಹೊರಟಿದ್ದ ಎಮಿರೇಟ್ಸ್ ವಿಮಾನ ಬಂದಿಳಿದದ್ದು ಮಾತ್ರ ದುಬೈಯಲ್ಲೇ…

ಪುಟಿನ್ ಗಿಂತ ಚೀನಾ ಅಧ್ಯಕ್ಷ ಅತ್ಯಂತ ಒರಟು, ಕ್ರೂರ ನಾಯಕ: ಮೈಕ್ ಪೊಂಪಿಯೊ

ಭಾರತ್ ಜೋಡೋ ಯಾತ್ರೆ ಎಲ್ಲಾ ಸಮಾಜ ವಿರೋಧಿ ಅಂಶಗಳನ್ನು ಒಟ್ಟುಗೂಡಿಸಿತು: ಬಿಜೆಪಿ