ಆಲಂಕಾರು: ಅಪಾಯಕಾರಿ ಮರ
Team Udayavani, Aug 4, 2017, 4:40 AM IST
ಆಲಂಕಾರು: ಇಲ್ಲಿಯ ಶ್ರೀ ದುರ್ಗಾಂಬ ಪದವಿಪೂರ್ವ ಕಾಲೇಜಿನ ಬಳಿ ಬೃಹತ್ ಗಾತ್ರದ ಮರವೊಂದು ವಿದ್ಯುತ್ ತಂತಿಯ ಮೇಲೆ ತುಂಡಾಗಿ ಬೀಳುವ ಹಂತದಲ್ಲಿದೆ. ಆಲಂಕಾರು-ಶರವೂರು ರಸ್ತೆ ಬದಿ ಯಲ್ಲಿಯೇ ಇರುವ ಈ ಮರದ ಒಂದು ಬದಿಯ ಗೆಲ್ಲುಗಳನ್ನು ಈಗಾಗಲೇ ತೆರವುಗೊಳಿಸಿದ್ದು, ವಿದ್ಯುತ್ ತಂತಿಯ ಮೇಲಿದ್ದ ಗೆಲ್ಲುಗಳನ್ನು ಮಾತ್ರ ಹಾಗೆಯೇ ಬಿಡಲಾಗಿದೆ. ಇದರ ಪರಿಣಾಮ ಯಾವುದೇ ಕ್ಷಣದಲ್ಲಿ ಮರ ತಂತಿಯ ಮೇಲೆ ಬೀಳುವ ಸಾಧ್ಯತೆಯಿದೆ. ದುರ್ಗಾಂಬ ಪ.ಪೂ. ಕಾಲೇಜಿನ ಪ್ರವೇಶ ದ್ವಾರವು ಈ ಮರದ ಸಮೀಪವೇ ಇರುವುದರಿಂದ ವಿದ್ಯಾರ್ಥಿಗಳು ಆತಂಕದಲ್ಲಿಯೇ ಓಡಾಡುವಂತಾಗಿದೆ.
ಅಪಾಯ ಕಟ್ಟಿಟ್ಟ ಬುತ್ತಿ
ಒಂದು ವೇಳೆ ಮರವು ತುಂಡಾಗಿ ಬಿದ್ದಲ್ಲಿ 7 ವಿದ್ಯುತ್ ಕಂಬಗಳ ಸಹಿತ ವಿದ್ಯುತ್ ಪರಿವರ್ತಕವೊಂದು ಧರೆಗುರುಳಬಹುದು. ಇನ್ನಾದರೂ ಮೆಸ್ಕಾಂ ಎಚ್ಚತ್ತುಕೊಳ್ಳಬೇಕಿದೆ.
ಶರವೂರು ದೇಗುಲದ ಬಳಿ ಇದೇ ಸ್ಥಿತಿ
ಶರವೂರು ದೇಗುಲದ ಭದ್ರಕಾಳಿ ಅಮ್ಮನವರ ಗುಡಿಯ ಬಳಿ ಬೃಹತ್ ಅಕೇಶಿಯಾ ಮರದ ರೆಂಬೆಗಳು ವಿದ್ಯುತ್ ತಂತಿಯ ಮೇಲಿದೆ. ಭಾರೀ ಗಾಳಿ ಮಳೆ ಬಂದರೆ ಅಪಾಯ ಸಂಭವಿಸಬಹುದು. ಇಲ್ಲಿ ಮರದ ಗೆಲ್ಲು ತಂತಿಯ ಮೇಲೆ ಬಿದ್ದಲ್ಲಿ ಒಂದು ವಿದ್ಯುತ್ ಪರಿವರ್ತಕ ಮತ್ತು ಹಲವು ಕಂಬಗಳು ಧರೆಗುರುಳುವುದು ಖಂಡಿತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಂಡ್ಯದಲ್ಲಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ
Panaji: ಸರಕಾರದ ಆ್ಯಪ್ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ
Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ