ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಕಗ್ಗತ್ತಲು!


Team Udayavani, May 9, 2018, 10:07 AM IST

9-May-2.jpg

ಬೈಕಂಪಾಡಿ: ವಾರ್ಷಿಕ 1 ಸಾವಿರ ಕೋ.ರೂ. ರಫ್ತು, 10 ಸಾವಿರಕ್ಕೂ ಮಿಕ್ಕಿ ಉದ್ಯೋಗಿಗಳು ಇರುವ ರಾಜ್ಯದಲ್ಲೇ 2ನೇ ಅತೀ ದೊಡ್ಡ ಕೈಗಾರಿಕಾ ವಲಯ ಎಂದು ಖ್ಯಾತಿಗೆ ಒಳಗಾಗಿರುವ ಬೈಕಂಪಾಡಿ ಕೈಗಾರಿಕಾ ಪ್ರದೇಶ ಬೀದಿ ದೀಪ ಸಮಸ್ಯೆಗಳಿಂದ ನರಳುತ್ತಿದೆ.

ಸಾವಿರಾರು ಕೋ.ರೂ. ಸರಕಾರಕ್ಕೆ ಆದಾಯ ತರುವ ಈ ಪ್ರದೇಶ ಮೂಲ ಸೌಕರ್ಯದಲ್ಲಿ ಮಾತ್ರ ಎಲ್ಲರನ್ನೂ ನಾಚುವಂತೆ ಮಾಡಿದೆ. ಜನರ ಹಕ್ಕೊತ್ತಾಯಕ್ಕೆ ಇದೀಗ ರಸ್ತೆ ಕಾಂಕ್ರೀಟ್‌ ಕಾಮಗಾರಿ ನಡೆಸಿದ್ದರೂ ಬೀದಿದೀಪವಿಲ್ಲದೆ ಮಹಿಳಾ ಕಾರ್ಮಿಕರ ಸಹಿತ ರಾತ್ರಿ ಪಾಳಿಯ ನೌಕರರು ಭಯದಿಂದಲೇ ಸಂಚರಿಸುವಂತಾಗಿದೆ. ರಾತ್ರಿ ಸಮಯ ವೇತನದೊಂದಿಗೆ ತೆರಳುವ ಕಾರ್ಮಿಕರನ್ನು ದೋಚುವ ಹಲವಾರು ಪ್ರಕರಣಗಳು ಸಂಭವಿಸಿದ್ದು, ಇದೀಗ ಇಲ್ಲಿನ ಬೀದಿದೀಪ ಉರಿಯದಿರುವುದು ಕಳ್ಳರಿಗೆ ವರದಾನವಾಗಿದೆ.

ಸುರಕ್ಷತೆ ಇಲ್ಲ
ಕೈಗಾರಿಕೆ ವಲಯದಲ್ಲಿ ಹಾಕಿದ ಬೀದಿ ದೀಪಗಳು ಇದ್ದೂ ಇಲ್ಲದಂತಾಗಿದೆ. ದೂರದಲ್ಲಿ ಅಲ್ಲೊಂದು ಇಲ್ಲೊಂದು ದೀಪಗಳು ಉರಿಯುತ್ತಿದ್ದರೂ ರಾತ್ರಿ ಹೊತ್ತು ಕಾರ್ಮಿಕರ ಸುರಕ್ಷತೆಯ ಭರವಸೆ ನೀಡುತ್ತಿಲ್ಲ. ರಾತ್ರಿ ಹೊತ್ತು ಅಪರಿಚಿತ ವ್ಯಕ್ತಿಗಳು ಕಾರ್ಮಿಕರ ಸೊತ್ತುಗಳನ್ನು ಲೂಟಿ ಮಾಡಿದ, ಗುಜರಿಗಾಗಿ ಕಳ್ಳತನದಂತಹ ಹಲವು ಘಟನೆಗಳು ನಡೆಯುತ್ತಿವೆ. ರಸ್ತೆ ಬದಿ ಹಾಕಿರುವ ವಿದ್ಯುತ್‌ ಕಂಬಗಳೂ ನಿರ್ವಹಣೆಯಿಲ್ಲದೆ ಧರಾಶಾಹಿಯಾಗುತ್ತಿವೆ. ಕೋಟ್ಯಂತರ ರೂ. ಟೆಂಡರ್‌ ವಹಿಸಿ ಬೀದಿ ದೀಪ ಅಳವಡಿಕೆ ಯೋಜನೆ ರೂಪಿಸಿದ್ದರೂ ದೀಪ ಮಾತ್ರ ಎಲ್ಲೂ ಕಾಣುತ್ತಿಲ್ಲ.

ಶುಚಿತ್ವಕ್ಕೂ ಧಕ್ಕೆ
ಕೆಐಎಡಿಬಿ ಅಧೀನದಲ್ಲಿ ಇರುವ ಈ ಕೈಗಾರಿಕಾ ವಲಯ ದೊಡ್ಡ ಹಾಗೂ ಸಣ್ಣ ಉತ್ಪಾದನೆ, ನಿರ್ವಹಣೆ, ಸೇವಾ ಕಂಪೆನಿಗಳನ್ನು ಹೊಂದಿದೆ. ಹಗಲು ರಾತ್ರಿ ಬರುವ ಲಾರಿಗಳು ನೋ ಪಾರ್ಕಿಂಗ್‌ ಪ್ರದೇಶದಲ್ಲಿ ತಂಗುತ್ತಿದ್ದು ನಿತ್ಯ ಕೆಲಸಕ್ಕೆ ಸಾಗುವ ಕಾರ್ಮಿಕರಿಗೆ ಅಡೆತಡೆ ಉಂಟು ಮಾಡುತ್ತಿವೆ. ಲಾರಿ ಚಾಲಕರಿಗೆ ನಿರ್ವಾಹಕರಿಗೆ ಶೌಚಾಲಯದ ವ್ಯವಸ್ಥೆಯಿಲ್ಲದೆ ರಸ್ತೆ ಬದಿಯೇ ನಿತ್ಯಕರ್ಮ ಪೂರೈಸುತ್ತಿರುವುದು ಶುಚಿತ್ವಕ್ಕೂ ಧಕ್ಕೆ ತರುತ್ತಿದೆ. 

ಡಿ.ಸಿ. ಆದೇಶಕ್ಕೆ ಕಿಮ್ಮತ್ತಿಲ್ಲ 
ಈ ಹಿಂದೆ ಕೈಗಾರಿಕಾ ವಲಯದಲ್ಲಿ ಘನವಾಹನಗಳ ಅನಧಿಕೃತ ಪಾರ್ಕಿಂಗ್‌ ನಿಷೇಧಿ ಸಿ ಹಿಂದಿನ ಜಿಲ್ಲಾ ಧಿಕಾರಿ ಎ.ಬಿ. ಇಬ್ರಾಹಿಂ ಆದೇಶ ಹೊರಡಿಸಿದ್ದರು. ಆದರೆ ಕೆಲವು ದಿನಗಳ ಕಾಲ ಮಾತ್ರ ಚಾಲ್ತಿಯಲ್ಲಿದ್ದ ಈ ಆದೇಶ ಇದೀಗ ಮೂಲೆ ಸೇರಿದೆ. ಯಥವತ್ತಾಗಿ ಮತ್ತೆ ಘನಲಾರಿಗಳು ರಸ್ತೆ ಬದಿಕಾಣಸಿಗುತ್ತವೆ. 

ನೀತಿ ಸಂಹಿತೆಯಿಂದ ವಿಳಂಬ
ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಹತ್ತು ದಿನಗಳಿಂದ ಬೀದಿ ದೀಪದ ಸಮಸ್ಯೆ ಆಗಿದೆ. ಈಗಾಗಲೇ ಕೈಗಾರಿಕಾ ಪ್ರದೇಶದ ಪ್ರಮುಖ ಜಂಕ್ಷನ್‌ ಸಹಿತ ಎಲ್ಲೆಡೆ ಸುಮಾರು 180 ಎಲ್‌ಇಡಿ ಲೈಟ್‌ ಕಂಬ ಅಳವಡಿಸಿ ಬೀದಿ ದೀಪ ಒದಗಿಸಲು ಟೆಂಡರ್‌ ಆಗಿದೆ. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಸ್ವಲ್ಪ ವಿಳಂಬವಾಗಿದೆ.
– ಗೌರವ್‌ ಹೆಗ್ಡೆ, ಅಧ್ಯಕ್ಷರು, ಸಣ್ಣ ಕೈಗಾರಿಕೆ ಸಂಘ

ಲಕ್ಷ್ಮೀ ನಾರಾಯಣ ರಾವ್‌

ಟಾಪ್ ನ್ಯೂಸ್

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.