ಮೃತ ಕೋತಿಗಳ ಪರೀಕ್ಷೆ: ನಾಲ್ಕರ ವರದಿ ನೆಗೆಟಿವ್
Team Udayavani, Feb 7, 2019, 12:30 AM IST
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮಂಗನ ಕಾಯಿಲೆ ಪ್ರಕರಣ ಇಲ್ಲ. ಬಯಾಪ್ಸಿ ಪರೀಕ್ಷೆಗಾಗಿ ಈ ಹಿಂದೆ ಪುಣೆಗೆ ಕಳುಹಿಸಲಾಗಿದ್ದ ಐದು ಮಂಗಗಳ ಕಳೇಬರಗಳ ಪೈಕಿ ನಾಲ್ಕರ ವರದಿ ನೆಗೆಟಿವ್ ಆಗಿದೆ. ಒಂದರ ವರದಿ ಇನ್ನಷ್ಟೇ ಲಭ್ಯವಾಗಬೇಕಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಚಾರ್ಮಾಡಿ, ಕಾಣಿಯೂರು, ಕೊçಲ ಹಳೆನೇರೆಂಕಿ, ಶಿರಾಡಿ ಅಡ್ಡಹೊಳೆಯಲ್ಲಿ ಸತ್ತ ಮಂಗಗಳ ಕಳೇಬರವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು ಎಂದರು.
11 ಮಂದಿಯ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಎಲ್ಲವೂ ನೆಗೆಟಿವ್ ಬಂದಿವೆ. ಉಜಿರೆ, ಕಡಬ ವ್ಯಾಪ್ತಿಯಿಂದ ಸಂಗ್ರಹಿಸಿದ 8 ಉಣ್ಣಿಗಳ ಸ್ಯಾಂಪಲ್ಗಳ ಪೈಕಿ 5 ನೆಗೆಟಿವ್ ಬಂದಿವೆ. ಉಳಿದವುಗಳ ವರದಿ ಬರಬೇಕಿದೆ. ಪರೀಕ್ಷೆಗೆ ಜಿಲ್ಲೆ ಯಿಂದ ಶಿವಮೊಗ್ಗಕ್ಕೆ ಕಳುಹಿಸಿ, ಅಲ್ಲಿಂದ ಪುಣೆಗೆ ಸ್ಯಾಂಪಲ್ಗಳನ್ನು ಕಳುಹಿಸಿ ಕೊಡಬೇಕಾಗುತ್ತದೆ. ಇದ ರಿಂದಾಗಿ ವರದಿ ಸಿಗುವುದು ಸ್ವಲ್ಪ ತಡ ವಾಗುತ್ತಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ