ಶೇ. 70 ಫಲಾನುಭವಿಗಳಿಗೆ ಮತ್ತೆ ಸಂಕಷ್ಟ?

ಸಾಲ ಮನ್ನಾ ಅಪ್‌ಡೇಟ್‌ ಸಾಫ್ಟ್ವೇರ್‌ ಮೂರೇ ದಿನಗಳಲ್ಲಿ ಸ್ಥಗಿತ

Team Udayavani, Oct 29, 2019, 5:19 AM IST

e-30

ಸುಳ್ಯ: ಸಾಲಮನ್ನಾಕ್ಕೆ ಸಂಬಂಧಿಸಿ ಕಿಸಾನ್‌ ಕ್ರೆಡಿಟ್‌ಕಾರ್ಡ್‌ ಉಳಿತಾಯ ಖಾತೆ ಸಮರ್ಪಕವಾಗಿಲ್ಲದೆ ಹಣ ವಾಪಸಾಗಿರುವ ಫಲಾನುಭವಿಗಳ ಖಾತೆಗೆ ಅಗತ್ಯ ಮಾಹಿತಿ ಸೇರ್ಪಡೆಗೊಳಿಸಲು ತೆರೆಯಲಾಗಿದ್ದ ಸುಧಾರಿತ ಆನ್‌ಲೈನ್‌ ಸಾಫ್ಟ್ವೇರ್‌ ಆ್ಯಪ್ಶನ್‌ ಮೂರೇ ದಿನದಲ್ಲಿ ಸ್ಥಗಿತಗೊಂಡ ಕಾರಣ ಶೇ. 70ರಷ್ಟು ಫಲಾನುಭವಿಗಳು ಮತ್ತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಸಾಲಮನ್ನಾ ಹಣ ಬಿಡುಗಡೆಗೊಂಡರೂ ಉಳಿತಾಯ ಖಾತೆಗೆ ಬಾರದೆ ಉಭಯ ಜಿಲ್ಲೆಯ 22,687 ಫಲಾನುಭವಿಗಳಿಗೆ ತೊಂದರೆಯಾಗಿತ್ತು. ಮೊದಲ ಹಂತದಲ್ಲಿ ಬ್ಯಾಂಕ್‌ ಖಾತೆ ಸರಿಪಡಿಸುವ ನಿಟ್ಟಿನಲ್ಲಿ ಸುಧಾರಿತ ಸಾಫ್ಟ್ವೇರ್‌ ತೆರೆದು ಸಮರ್ಪಕ ಮಾಹಿತಿ ದಾಖಲಾತಿಗೆ ಸರಕಾರ ಅವಕಾಶ ನೀಡಿತ್ತು.

ಶೇ. 30 ಮಾತ್ರ ಪೂರ್ಣ
ಫಲಾನುಭವಿಗಳಿಗೆ ಸಂಬಂಧಿಸಿ 18 ಪಟ್ಟಿ ರಚಿಸಲಾಗಿತ್ತು. ಆ ಪೈಕಿ 14 ಪಟ್ಟಿಗಳ ಫಲಾನುಭವಿಗಳದ್ದು ಮಾತ್ರ ಅಪ್‌ಡೇಟ್‌ ಅವಕಾಶ ದೊರೆಯಿತು. ಉಳಿದ 4 ಪಟ್ಟಿಗಳ ಫಲಾನುಭವಿಗಳ ಉಳಿತಾಯ ಖಾತೆ ಅಪ್‌ಡೇಟ್‌ ಮಾಡಲು ಅವಕಾಶ ಸಿಕ್ಕಿಲ್ಲ. 14 ಪಟ್ಟಿಯಲ್ಲಿ ಕೇವಲ ಶೇ. 30ರಷ್ಟು ಮಾತ್ರ ಫಲಾನುಭವಿಗಳಿದ್ದು, ಉಳಿದ ಶೇ.70ರಷ್ಟು ಫಲಾನುಭವಿಗಳ ಕೊನೆಯ ನಾಲ್ಕು ಪಟ್ಟಿಯೊಳಗಿದ್ದಾರೆ. ಹೀಗಾಗಿ ಅಪ್‌ಡೇಟ್‌ನಲ್ಲಿ ಅವಕಾಶ ವಂಚಿತರ ಪಟ್ಟಿಯೇ ಗರಿಷ್ಠ ಮಟ್ಟದಲ್ಲಿದ್ದು, ಆ್ಯಪ್ಶನ್‌ ತೆರೆದರೂ ಪ್ರಯೋಜನ ಇಲ್ಲವಾಗಿದೆ.

ಮೂರು ದಿನವಷ್ಟೇ ಕಾಲಾವಕಾಶ
ಆಯಾ ಸಹಕಾರ ಬ್ಯಾಂಕ್‌ ವ್ಯಾಪ್ತಿಯ ಡಿಸಿಸಿ ಬ್ಯಾಂಕ್‌ ಶಾಖೆಗಳಲ್ಲಿ ಅ. 23ರಿಂದ ಅ. 25ರ ತನಕ ಅಪ್‌ಡೇಟ್‌ಗೆ ಅವಕಾಶ ನೀಡಲಾಗಿತ್ತು. ಬ್ಯಾಂಕಿನಿಂದ ನಿಗದಿಪಡಿಸಿದ ನಿಯೋಜಿತ ಅಧಿಕಾರಿ, ಸಹಕಾರ ಅಭಿವೃದ್ಧಿ ಅಧಿಕಾರಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಸಹಕಾರ ಸಂಘದ ಸಿಬಂದಿಗಳು ಡಿಸಿಸಿ ಬ್ಯಾಂಕ್‌ ಶಾಖೆಗಳಲ್ಲಿ ರೈತರ ಕೆಸಿಸಿ ಉಳಿತಾಯ ಖಾತೆಯ ವಿವರವನ್ನು ಅಪ್‌ಲೋಡ್‌ ಮಾಡಿ ದೃಢೀಕರಿಸುವಂತೆ ತಿಳಿಸಲಾಗಿತ್ತು.

ಲಾಕ್‌ ಆದರೆ ಕ್ರಮ
ಸುತ್ತೋಲೆಯಲ್ಲಿ ಮೂರು ದಿನದೊಳಗೆ ಮಾಹಿತಿ ಅಪ್‌ಲೋಡ್‌ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಆದರೆ ಆ್ಯಪ್ಶನ್‌ನಲ್ಲಿ ಕೊನೆಯ ನಾಲ್ಕು ಪಟ್ಟಿ ನೀಡದ ಕಾರಣ ಪೂರ್ಣ ಅಪ್‌ಲೋಡ್‌ ಸಾಧ್ಯವಾಗಿಲ್ಲ ಅನ್ನುವುದು ಸಹಕಾರ ಸಂಘಗಳ ಅಧಿಕಾರಿಗಳ ಅಳಲು. ಆದರೆ ಸುತ್ತೋಲೆಯಲ್ಲಿ ಮೂರು ದಿನಗಳಲ್ಲಿ ಪೂರ್ಣಗೊಳ್ಳದೆ ಸಾಫ್ಟ್ವೇರ್‌ ಲಾಕ್‌ ಆದಲ್ಲಿ ಆಯಾ ಸಹಕಾರ ಸಂಘಗಳ ಮತ್ತು ಸಂಬಂಧಿಸಿದ ತಾಲೂಕು ಸಹಕಾರ ಇಲಾಖಾಧಿಕಾರಿಗಳ ಮತ್ತು ಎಸ್‌ಡಿಸಿಸಿ ಬ್ಯಾಂಕ್‌ ಮೇಲ್ವಿಚಾರಕರು ಜವಾಬ್ದಾರರಾಗಿದ್ದು, ಸರಕಾರದ ಕಾನೂನು ಕ್ರಮಕ್ಕೆ ಈಡಾಗಬೇಕು ಎಂಬ ಎಚ್ಚರಿಕೆ ನೀಡಲಾಗಿದೆ. ಜತೆಗೆ ಮೂರು ದಿನದಲ್ಲಿ ರಜೆ ಇದ್ದರೆ ಅದನ್ನು ರದ್ದುಗೊಳಿಸಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿತ್ತು.

161.75 ಕೋ.ರೂ. ಹಣ ವಾಪಸ್‌!
ಉಳಿತಾಯ ಖಾತೆ ಅಪೂರ್ಣ ಕಾರಣದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 22,687 ಫಲಾನುಭವಿಗಳ 161.75 ಕೋ.ರೂ. ಫಲಾನುಭವಿಗಳ ಖಾತೆಗೆ ಬಾರದೆ ಡಿಸಿಸಿ ಬ್ಯಾಂಕ್‌ನಿಂದ ಪುನಃ ಅಪೆಕ್ಸ್‌ ಬ್ಯಾಂಕ್‌ಗೆ ವಾಪಸಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 17,744 ಮಂದಿಯ 128.22 ಕೋ.ರೂ., ಉಡುಪಿ ಜಿಲ್ಲೆಯ 4934 ಮಂದಿಯ 33.53 ಕೋ.ರೂ. ಹಣ ವಾಪಾಸಾತಿ ಆಗಿದೆ. ಹೀಗಾಗಿ ಹಣ ಬಿಡುಗಡೆಗೊಂಡರೂ ಹಣ ಖಾತೆಗೆ ಜಮೆ ಆಗದಿರುವ ಬಗ್ಗೆ ಫಲಾನುಭವಿಗಳಿಗೆ ಗೊಂದಲ ಉಂಟಾಗಿತ್ತು.

ಸಾಫ್ಟ್ವೇರ್‌ ಅಪ್‌ಡೇಟ್‌ ಆಪ್ಶನ್‌ ಮೂರು ದಿನದಲ್ಲಿ ಸ್ಥಗಿತಗೊಂಡಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸೋಮವಾರ ತಾಲೂಕು ಕಚೇರಿಯಲ್ಲಿ ಸಭೆ ನಡೆದಿದೆ. ಬೆಳೆಗಾರರ ಬೇಡಿಕೆಯಂತೆ ಕೆಲ ನಿರ್ಣಯಗಳನ್ನು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗುವುದು.
– ಕುಂಞಿ ಅಹ್ಮದ್‌, ಸುಳ್ಯ ತಹಶೀಲ್ದಾರ್‌

ಟಾಪ್ ನ್ಯೂಸ್

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.