ಹೊಸ ಕ್ಷೇತ್ರ ರಚನೆಗೆ ಹಾಲಿ ಕ್ಷೇತ್ರ ವಿಭಜನೆ ಶೀಘ್ರ

ಕರಾವಳಿಯ 6 ಹೊಸ ತಾಲೂಕು ಪಂಚಾಯತ್‌ಗಳು

Team Udayavani, Jan 29, 2020, 6:00 AM IST

shu-33

ಸಾಂದರ್ಭಿಕ ಚಿತ್ರ

ಮಂಗಳೂರು: ಕರಾವಳಿಯ 6 ಹೊಸ ತಾಲೂಕುಗಳ ತಾ.ಪಂ. ಸದಸ್ಯರ ಕ್ಷೇತ್ರ ವಿಭಜನೆಯ ಅಧಿಸೂಚನೆ ಶೀಘ್ರವೇ ಪ್ರಕಟಗೊಳ್ಳಲಿದೆ. ಹೊಸ ಮತ್ತು ಹಳೆ ತಾ.ಪಂ. ಮಧ್ಯೆ ಸದಸ್ಯರ ಕ್ಷೇತ್ರವನ್ನು ಭೌಗೋಳಿಕವಾಗಿ ವಿಭಜಿಸಿ ಪ್ರಾದೇಶಿಕ ಆಯುಕ್ತರು ಅಧಿಸೂಚನೆ ಹೊರಡಿಸುವರು. ಜಿ.ಪಂ. ಸಿಇಒ ಮತ್ತು ತಾ.ಪಂ. ಇಒ ಪೂರಕ ಕ್ರಮಗಳನ್ನು ಕೈಗೊಳ್ಳುವರು.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ, ಕಡಬ ಮತ್ತು ಉಡುಪಿ ಜಿಲ್ಲೆಯ ಬ್ರಹ್ಮಾವರ, ಕಾಪು, ಬೈಂದೂರು, ಹೆಬ್ರಿಗಳನ್ನು ತಾಲೂಕುಗಳಾಗಿ ಸರಕಾರ ಘೋಷಿಸಿತ್ತು. ಈಗಿರುವ ಕ್ಷೇತ್ರಗಳ ಕೆಲವು ಭಾಗಗಳು ಬದಲಾಗಲಿದ್ದು, ಹೊಸ ತಾ.ಪಂ. ಕ್ಷೇತ್ರ ರಚನೆಗೊಳ್ಳಲಿದೆ. ಈ ವಿವರಗಳನ್ನು ಪ್ರಾದೇಶಿಕ ಆಯುಕ್ತರಿಗೆ ನೀಡಲಾಗಿದೆ. ಇದರ ಪ್ರಕಾರ ಅಧಿಸೂಚನೆ ಸದ್ಯವೇ ಪ್ರಕಟವಾಗುವ ನಿರೀಕ್ಷೆಯಿದೆ.

ಹೊಸ ತಾ.ಪಂ.ಗೆ ಹೊಸ ಮೀಸಲಾತಿ!
ತಾ.ಪಂ. ಸದಸ್ಯರನ್ನು ವಿಭಜಿಸಿ ಅಧಿಸೂಚನೆ ಪ್ರಕಟಗೊಂಡ ಬಳಿಕ, ಆಯ್ದ ಹಾಲಿ ಸದಸ್ಯರು ಅವರ ಅವಧಿ ಮುಗಿಯುವವರೆಗೆ ಹೊಸ ತಾ.ಪಂ. ಸದಸ್ಯರಾಗುವರು. ಅದೇ ವೇಳೆಗೆ ಹೊಸ ತಾ.ಪಂ.ಅಧ್ಯಕ್ಷ/ ಉಪಾಧ್ಯಕ್ಷರ ಮೀಸಲು ಪ್ರಕಟವಾಗಿ ಹೊಸ ತಾ.ಪಂ. ಅಧಿಕಾರಕ್ಕೆ ಬರಲಿದೆ. 2021 ಫೆಬ್ರವರಿಯಲ್ಲಿ ಎಲ್ಲ ತಾ.ಪಂ.ಗಳಿಗೂ ಚುನಾವಣೆ ನಡೆಯಲಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಹಳೆಯ ತಾ.ಪಂ.ನಲ್ಲಿ ಈಗಿ ರುವ ಅಧ್ಯಕ್ಷ/ಉಪಾಧ್ಯಕ್ಷರ ಕ್ಷೇತ್ರಗಳು ಹೊಸ ತಾ.ಪಂ. ವ್ಯಾಪ್ತಿಗೆ ಒಳಪಟ್ಟರೆ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಅವರ ಸ್ಥಾನವೂ ತೆರವುಗೊಳ್ಳಲಿದೆ.

ಹೊಸ ತಾ.ಪಂ.ಗಳ ಕಾ.ನಿ. ಅಧಿಕಾರಿಯ ಹುದ್ದೆಗೆ ಸಮನಾಂತರ ಹುದ್ದೆಗಳನ್ನು ಹೊಂದಿರುವ ಅಧಿಕಾರಿಯನ್ನು ಹೆಚ್ಚುವರಿಯಾಗಿ, ಪ್ರಭಾರವಾಗಿ, ಸಹಾಯಕ ನಿರ್ದೇಶಕರು ಮತ್ತು ಇತರ ಸಿಬಂದಿಯ ಹುದ್ದೆಗಳಿಗೆ ಮೂಲ ತಾ.ಪಂ. ಅಥವಾ ಜಿ.ಪಂ.ನ ಸಮನಾಂತರ ಅಧಿಕಾರಿಗಳನ್ನು ನೇಮಿಸಬೇಕಿದೆ. ಜಿ.ಪಂ.ನ ಉಪ ಕಾರ್ಯದರ್ಶಿಯನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ತಾಲೂಕು ಕಚೇರಿ ರಚನೆಗೆ ಸೂಚನೆ
ಹೊಸ ತಾ.ಪಂ. ಕೇಂದ್ರ ಸ್ಥಾನವು ಗ್ರಾ.ಪಂ. ಆಗಿದ್ದರೆ ಅಲ್ಲಿ ತಾ.ಪಂ. ಕಚೇರಿ ತೆರೆಯಬೇಕಿದೆ. ಪಟ್ಟಣ ಪ್ರದೇಶವಾಗಿದ್ದರೆ ಇತರ ಸರಕಾರಿ ಕಚೇರಿಯಲ್ಲಿ ಸ್ಥಳವಿದೆಯೇ ಎಂದು ಗುರುತಿಸಬೇಕು. ಇಲ್ಲದಿದ್ದರೆ ಬಾಡಿಗೆ ಕಟ್ಟಡದಲ್ಲಿ ತಾ.ಪಂ. ಕಚೇರಿ ತೆರೆಯಬೇಕು. ತಾತ್ಕಾಲಿಕ ಕಚೇರಿಗೆ ಬಳಸುವ ಸರಕಾರಿ ಕಟ್ಟಡಗಳಿಗೆ ದುರಸ್ತಿ ಅಥವಾ ಪೀಠೊಪಕರಣಕ್ಕೆ ಬೇಕಾಗುವ ಅನುದಾನದ ಪ್ರಸ್ತಾವನೆ ಕಳುಹಿಸಲು ಸರಕಾರ ಸೂಚಿಸಿದೆ.

ಹೊಸ ತಾಲೂಕುಗಳ ತಾ.ಪಂ. ಸದಸ್ಯರ ಕ್ಷೇತ್ರ ವಿಭಜನೆಯ ಅಧಿಸೂಚನೆ ಶೀಘ್ರದಲ್ಲಿ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಈಗಾಗಲೇ ಗ್ರಾಮಗಳ ಹಂಚಿಕೆ ನಡೆದಿದ್ದು, ಕೆಲವೇ ದಿನದಲ್ಲಿ ಹೊಸ ತಾಲೂಕಿನ ಕಚೇರಿ ಕಾರ್ಯವೂ ಆರಂಭಗೊಳ್ಳಲಿದೆ.
– ಡಾ| ಸೆಲ್ವಮಣಿ ಆರ್‌., ಸಿಇಒ, ದ.ಕ. ಜಿ.ಪಂ

- ದಿನೇಶ್‌ ಇರಾ

ಟಾಪ್ ನ್ಯೂಸ್

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.