ದೋಷಯುಕ್ತ ನಂಬರ್ಪ್ಲೇಟ್; ಪಾಲನೆಯಾಗದ ಸಂಚಾರ ನಿಯಮ
ವಾಹನಗಳ ನಂಬರ್ ಪ್ಲೇಟ್ನಲ್ಲಿ ರಾರಾಜಿಸುತ್ತಿವೆ ಚಿಹ್ನೆ, ಹೆಸರು
Team Udayavani, Feb 19, 2020, 5:15 AM IST
ಮಹಾನಗರ: ರಾಜ್ಯ ಸರಕಾರವು ನೂತನವಾಗಿ ಜಾರಿಗೆ ತಂದ ನಂಬರ್ ಪ್ಲೇಟ್ ಮಾದರಿ ನಗರದಲ್ಲಿ ಇನ್ನೂ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ವಾಹನಗಳ ನಂಬರ್ ಪ್ಲೇಟ್ನಲ್ಲಿ ಕೇವಲ ನಂಬರ್ ಮಾತ್ರ ಇರಬೇಕು. ಬದಲಾಗಿ ಯಾವುದೇ ಚಿಹ್ನೆ, ಹೆಸರು ನಮೂದಿಸುವಂತಿಲ್ಲ ಎಂದು ಸರಕಾರ ಈಗಾಗಲೇ ಅರಿವು ಮೂಡಿಸಿದರೂ, ನಗರದಲ್ಲಿ ದೋಷಯುಕ್ತ ನಂಬರ್ಪ್ಲೇಟ್ ಹೊಂದಿರುವಂತಹ ವಾಹನಗಳು ಇನ್ನೂ ಓಡಾಡುತ್ತಿವೆ.
ಕೆಲವೊಂದು ಸರಕಾರಿ ಕಾರುಗಳ ನಂಬರ್ ಪ್ಲೇಟ್ಗಳಲ್ಲಿ ನಿಗಮ ಅಥವಾ ತಮ್ಮ ಸಂಸ್ಥೆಗಳ ಹೆಸರು ಇದ್ದು, ಮತ್ತೂಂದೆಡೆ ಕೆಲವೊಂದು ರಾಜಕಾರಣಿಗಳು ಕೂಡ ತಮ್ಮ ಪಕ್ಷ, ಹುದ್ದೆಯ ಹೆಸರನ್ನು ನಂಬರ್ ಪ್ಲೇಟ್ನಲ್ಲಿ ನಮೂದಿಸಿಕೊಂಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ನಗರದಲ್ಲಿ ಓಡಾಡುವ ಕೆಲವೊಂದು ವಾಹನಗಳು ನಂಬರ್ ಪ್ಲೇಟ್ ಮೇಲೆ ಆಯಾ ಸಂಘಟನೆಯ ಫಲಕಗಳನ್ನು ನಮೂದು ಮಾಡಿರುವುದು ಕಾಣುತ್ತಿದೆ.
ಕಟ್ಟು ನಿಟ್ಟಿನ ಕ್ರಮ
ನೂತನ ಸಾರಿಗೆ ಕಾಯ್ದೆಯ ಅನ್ವಯ ಈ ರೀತಿಯಾಗಿ ನಂಬರ್ ಪ್ಲೇಟ್ಗಳ ಮೇಲೆ ಇತರೆ ಚಿಹ್ನೆ ಅಥವಾ ಬರಹವಿದ್ದರೆ ಕಟ್ಟು ನಿಟ್ಟಾಗಿ ಕ್ರಮ ಜರುಗಿಸಲಾಗುತ್ತದೆ. ಕರ್ನಾಟಕದಲ್ಲಿ ನೋಂದಣಿಯಾದಂತಹ ಕೆಲವೊಂದು ವಾಹನಗಳಲ್ಲಿ ಕನ್ನಡ ಅಕ್ಷರದಲ್ಲಿ ನೋಂದಣಿ ಸಂಖ್ಯೆಯನ್ನು ಬರೆದಿರುತ್ತಾರೆ. ಕನ್ನಡ ಭಾಷೆ ಬಳಕೆಗೆ ಸಾರಿಗೆ ಇಲಾಖೆ ಈಗಾಗಲೇ ಅನುಮತಿ ನೀಡಿದೆ. ಆದರೆ ನಂಬರ್ ಪ್ಲೇಟ್ನಲ್ಲಿ ಕನ್ನಡ ಭಾಷೆಯ ಬಳಕೆ ಜತೆ ಆಂಗ್ಲ ಭಾಷೆಯನ್ನೂ ನಮೂದು ಮಾಡಬೇಕು. ಇದರ ಬದಲಾಗಿ ಕೇವಲ ಕನ್ನಡ ಭಾಷೆಯನ್ನು ಮಾತ್ರ ನಮೂದಿಸಿದರೆ ನಿಯಮ ಉಲ್ಲಂಘಿಸಿದಂತಾಗುತ್ತದೆ ಎಂದು ಸಾರಿಗೆ ಅಧಿಕಾರಿಯೊಬ್ಬರು “ಉದಯವಾಣಿ ಸುದಿನ’ಕ್ಕೆ ತಿಳಿಸಿದ್ದಾರೆ.
ಸೂಕ್ತ ಕ್ರಮಕೈಗೊಳ್ಳಲಾಗುವುದು
ಟ್ರಾಫಿಕ್ ನಿಯಮಗಳನ್ನು ಪಾಲನೆ ಮಾಡಬೇಕು. ಈ ನಿಟ್ಟಿನಲ್ಲಿ ನಗರದಲ್ಲಿ ಯಾವೆಲ್ಲಾ ವಾಹನಗಳಲ್ಲಿ ದೋಷಯುಕ್ತ ನಂಬರ್ ಪ್ಲೇಟ್ಗಳು ಹೊಂದಿವೆ ಎಂಬುವುದನ್ನು ಎಂಬ ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
-ಮಂಜುನಾಥ ಶೆಟ್ಟಿ, ಟ್ರಾಫಿಕ್ ಎಸಿಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
ಮತದಾರರ ಚೀಟಿಯಲ್ಲಿ ಕ್ಯುಆರ್ ಕೋಡ್! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ
Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ