ಅಪಾಯಕಾರಿ ಮರದ ರೆಂಬೆಗಳ ತೆರವಿಗೆ ಆಗ್ರಹ
Team Udayavani, May 24, 2018, 1:46 PM IST
ಮಹಾನಗರ : ನಗರದ ಜೈಲ್ರೋಡ್ನ ಸುಬ್ರಹ್ಮಣ್ಯ ಸಭಾದ ಬಳಿ ಬೃಹತ್ ಗಾತ್ರದ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿದ್ದು, ಅದರ ರೆಂಬೆಗಳನ್ನು ತೆರವುಗೊಳಿಸುವಂತೆ ಮೇಯರ್ ಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಜಿ. ಹರಿರಾಮ ಶೆಣೈ ಆರೋಪಿಸಿದ್ದಾರೆ.
‘ಮುಂಗಾರು ಮುಂಜಾಗ್ರತೆ’ ಸುದಿನ ಅಭಿಯಾನಕ್ಕೆ ಸ್ಪಂದಿಸಿರುವ ಓದುಗರು ತಮ್ಮ ಭಾಗದ ವಿದ್ಯುತ್ ತಂತಿಗಳ ಸಮಸ್ಯೆಗಳನ್ನು ಉದಯವಾಣಿಗೆ ತಿಳಿಸಿದ್ದಾರೆ. ಮುಂಗಾರು ಜಿಲ್ಲೆಗೆ ಸದ್ಯದಲ್ಲೇ ಆಗಮಿಸಲಿದ್ದು , ಜೋರಾಗಿ ಗಾಳಿ ಬರುವ ಸಂದರ್ಭಗಳಲ್ಲಿ ಮರದ ರೆಂಬೆಗಳು ಬೀಳುವ ಅಪಾಯ ಇದೆ. ಈ ಕುರಿತು ಜಿಲ್ಲಾಧಿಕಾರಿ ಅವರಿಗೆ ತಿಳಿಸಿದಾಗ ಅವರು ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದರು.
ಆದರೆ ಈತನಕ ಯಾರೂ ಕೂಡ ಇದರ ಕುರಿತು ಕ್ರಮಕೈಗೊಂಡಿಲ್ಲ. ಈ ಪ್ರದೇಶವು ಜನನಿಬಿಡ, ವಾಹನ ನಿಬಿಡ ಪ್ರದೇಶವಾಗಿದೆ. ಜತೆಗೆ ಹಲವು ಮನೆಗಳು ಕೂಡ ಇಲ್ಲಿವೆ. ಹೀಗಾಗಿ ಅಪಾಯ ಸಂಭವಿಸುವ ಮೊದಲು ಈ ಕುರಿತು ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಲಿ ಎಂದು ಅವರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?