ದಟ್ಟ ಮಂಜು ಹಿನ್ನೆಲೆ: ವಿಮಾನ ಸಂಚಾರದಲ್ಲಿ ವ್ಯತ್ಯಯ
Team Udayavani, May 24, 2022, 11:49 PM IST
ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಗ್ಗೆ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
ಸೋಮವಾರ ರಾತ್ರಿ ಮಂಜು ಹಿನ್ನೆಲೆಯಲ್ಲಿ ಆಲ್ವುತ್ತೂಮ್ ವಿಮಾನನಿಲ್ದಾಣಕ್ಕೆ (ದುಬಾೖ) ರಾತ್ರಿ 11.35ಕ್ಕೆ ತೆರಳಬೇಕಾಗಿದ್ದ ವಿಮಾನದ ವೇಳಾಪಟ್ಟಿ ಮಂಗಳವಾರ ಬೆಳಗ್ಗೆ 6.15ಕ್ಕೆ ಮರು ನಿಗದಿಗೊಂಡಿತ್ತು. ಆದರೆ ಬೆಳಗ್ಗೆಯೂ ಮಂಜು ಇದ್ದ ಕಾರಣ ಬೆಳಗ್ಗೆ 8.20 ಕ್ಕೆ ನಿರ್ಗಮಿಸಿತು.
ಬೆಂಗಳೂರಿನಿಂದ ಬೆಳಗ್ಗೆ 7ಕ್ಕೆ ಬರಬೇಕಾಗಿದ್ದ ವಿಮಾನ ವಿಳಂಬವಾಗಿ 9.05ಕ್ಕೆ ಆಗಮಿಸಿತು. ಇದೇ ವಿಮಾನ 7.55ಕ್ಕೆ ಮುಂಬಯಿಗೆ ನಿರ್ಗಮಿಸಬೇಕಾಗಿತ್ತು. ಆದರೆ ಬೆಂಗಳೂರಿನಿಂದ ಬರುವಾಗ ತಡವಾದ ಕಾರಣ 10ಕ್ಕೆ ಮುಂಬಯಿಗೆ ನಿರ್ಗಮಿಸಿತು.
ಆಲ್ವುತ್ತೂಮ್ ವಿಮಾನನಿಲ್ದಾಣದಿಂದ (ದುಬಾೖ) ಬೆಳಗ್ಗೆ 6ಕ್ಕೆ ಆಗಮಿಸಬೇಕಾಗಿದ್ದ ವಿಮಾನ ಮಂಜು ಹಿನ್ನೆಲೆಯಲ್ಲಿ ಕಣ್ಣೂರು ವಿಮಾನ ನಿಲ್ದಾಣಕ್ಕೆ ತೆರಳಿ ಬಳಿಕ 9.23ಕ್ಕೆ ಮರಳಿ ಮಂಗಳೂರಿಗೆ ಆಗಮಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ
Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
IPL; ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ : ಒಂದೇ ದೋಣಿಯ ಪಯಣಿಗರು
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ