ನದಿಗೆ ಹಾರಿದ ವ್ಯಕ್ತಿಯ ಶವ ಪತ್ತೆ
Team Udayavani, Oct 7, 2017, 12:22 PM IST
ಹಳೆಯಂಗಡಿ: ಸಸಿಹಿತ್ಲು-ಕದಿಕೆಯ ನಡುವೆ ನಿರ್ಮಾಣಗೊಂಡಿರುವ ನೂತನ ಸೇತುವೆಯಿಂದ ಅಪರಿಚಿತ ಯುವಕನೋರ್ವ ಗುರುವಾರ ನಂದಿನಿ ನದಿಗೆ ಹಾರಿದ್ದು, ಆತನ ಶವ ಶುಕ್ರವಾರ ಮುಂಜಾನೆ ಪತ್ತೆಯಾಗಿದೆ.
ಗುರುವಾರ ಬೆಳಗ್ಗೆ ಸೇತುವೆಯಿಂದ ಹಾರುತ್ತಿರುವುದನ್ನು ಸ್ಥಳೀಯ ಮಹಿಳೆಯೋರ್ವರು ಕಂಡಿದ್ದರಿಂದ ಸ್ಥಳೀಯರು ಹಾಗೂ ಮೂಲ್ಕಿ ಪೊಲೀಸರು ಅಗ್ನಿಶಾಮಕ ದಳದ ಸಹಾಯದಿಂದ ಶೋಧ ಕಾರ್ಯಾಚರಣೆ ನಡೆಸಿ ಹಿಂದಿರುಗಿದ್ದರು. ಶುಕ್ರವಾರ ಯುವಕನ ಶವ ಸೇತುವೆಯ ಅಡಿಯಲ್ಲಿಯೇ ಪತ್ತೆಯಾಗಿ ಅದನ್ನು ಸ್ಥಳೀಯ ಮೀನುಗಾರರ ಸಹಾಯದಿಂದ ಮೇಲೆತ್ತಲಾಗಿದೆ. ಇದೀಗ ಆತನ ಪರಿಚಯಕ್ಕೆ ಶೋಧ ಕಾರ್ಯ ಮುಂದುವರಿದಿದೆ.
ಶವದ ಗುರುತು ಪತ್ತೆಗಾಗಿ ಮನವಿ: ಸುಮಾರು 35ರ ಹರೆಯದ 5.5 ಅಡಿ ಎತ್ತರದ ಯುವಕನ ಶವದ ಮೈಮೇಲೆ ಉದ್ದತೋಳಿನ ಕ್ರೀಮ್ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಕಪ್ಪು ಬೆಲ್ಟ್ ಇದೆ. ದೇಹದ ಬಲ ಭಾಗದಲ್ಲಿ ಶಸ್ತ್ರ ಚಿಕಿತ್ಸೆಗೊಳಗಾದ ಗಾಯದ ಗುರುತು ಇದೆ. ಶರ್ಟ್ನ ಕಾಲರ್ನಲ್ಲಿ ನಟರಾಜ ರೋಡ್ ಶಿರಸಿ ಎಂದು ಟೆ„ಲರ್ನ ಲೇಬಲ್ ಇದೆ. ಶವವನ್ನು ಮಂಗಳೂರಿನ ವೆನಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ಈ ವ್ಯಕ್ತಿಯ ಬಗ್ಗೆ ತಿಳಿದವರು ಮೂಲ್ಕಿ ಪೊಲೀಸ್ ಠಾಣೆಯನ್ನು (0824-2290533) ಸಂಪರ್ಕಿಸಲು ಕೋರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ