ತುಳು ಲಿಪಿಯ ಸಂಸ್ಕೃತ ಶಾಸನ ಪತ್ತೆ
Team Udayavani, Dec 12, 2019, 11:34 PM IST
ಉಳ್ಳಾಲ: ಮಂಗಳೂರು ತಾಲೂಕಿನ ಮಂಜನಾಡಿಯಲ್ಲಿರುವ ಮಲರಾಯ ಬಂಟ ದೈವಸ್ಥಾನದಲ್ಲಿ ಅಪರೂಪದ ತುಳು ಶಾಸನವೊಂದು ಪತ್ತೆಯಾಗಿದೆ. ಧ್ವಜಸ್ತಂಭದ ಬುಡದಲ್ಲಿರಿಸಿದ್ದ ಶಾಸನವನ್ನು ಅಧ್ಯಯನ ನಡೆಸಿರುವ ಶಾಸನ ತಜ್ಞರು ಇದು ತುಳು ಲಿಪಿಯನ್ನು ಬಳಸಿ ಬರೆದ ಸಂಸ್ಕೃತ ಭಾಷೆಯ ಶಾಸನ ಎಂದು ಗುರುತಿಸಿದ್ದಾರೆ.
ದೈವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ಶಂಕರ ಕುಂಜತ್ತೂರು ಅವರು ಇದನ್ನು ಗುರುತಿಸಿ ನೀಡಿದ ಮಾಹಿತಿಯಂತೆ ಶಾಸನ ತಜ್ಞರಾದ ಪ್ರೊ| ಎಸ್.ಎ. ಕೃಷ್ಣಯ್ಯ, ಡಾ| ರಾಧಾಕೃಷ್ಣ ಬೆಳ್ಳೂರು,ಸುಭಾಷ್ ನಾಯಕ್ ಶಾಸನದ ಅಧ್ಯಯನ ನಡೆಸಿದರು. ತುಳು ಲಿಪಿಯನ್ನು ಬಳಸಿ ಬರೆದ ತುಳು, ಕನ್ನಡ ಭಾಷೆಯ ಶಾಸನಗಳು ಈಗಾಗಲೇ ಹಲವೆಡೆ ಪತ್ತೆಯಾಗಿವೆ. ತುಳು ಲಿಪಿಯನ್ನು ಬಳಸಿ ಬರೆದ ಸಂಸ್ಕೃತ ಶಾಸನ ಬಲು ಅಪರೂಪ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರಲ್ಲಿರುವ ಲಿಪಿ ಹೆಚ್ಚು ಸವೆದಿಲ್ಲ. ಇದು ಶಾಲಿವಾಹನ ಶಕಕ್ಕೆ ಸೇರಿರುವ ಸಾಧ್ಯತೆ ಇದ್ದು ಕ್ರಿ.ಶ.1326ಕ್ಕೆ ಸರಿ ಹೊಂದುತ್ತದೆ ಎಂದು ರಾಧಾಕೃಷ್ಣ ಬೆಳ್ಳೂರು ಅಭಿಪ್ರಾಯಿಸಿದ್ದಾರೆ. ಇದರಲ್ಲಿ ಬಲ್ಲಾಳ, ನಾಗೇಶ್ವರ, ಅರ್ಕ, ನಾಗಬೆರ್ಮ ಮುಂತಾದ ಉಲ್ಲೇಖಗಳು ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ