ಮಹಾಮಜ್ಜನವನ್ನು ಕಣ್ತುಂಬಿಕೊಂಡ ಹಲವು ಗಣ್ಯರು
Team Udayavani, Feb 18, 2019, 3:49 AM IST
ಬೆಳ್ತಂಗಡಿ: ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕದ 2ನೇ ದಿನದ ಅಭಿಷೇಕ ಕಾರ್ಯವು ರವಿವಾರ ಸಂಪನ್ನಗೊಂಡಿದ್ದು, ರಾಜ್ಯದ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು. ಜತೆಗೆ ಸಹಸ್ರಾರು ಮಂದಿ ಭಕ್ತರು ಪಾಲ್ಗೊಂಡು ಮಜ್ಜನದ ವೀಕ್ಷಣೆಯ ಜತೆಗೆ ಅಭಿಷೇಕದಲ್ಲೂ ಪಾಲ್ಗೊಂಡರು.
ರವಿವಾರ ಬೆಳಗ್ಗೆ ನಿತ್ಯವಿಧಿ ಸಹಿತ ಅಗ್ರೋದಕ ಮೆರವಣಿಗೆ ಸೇರಿದಂತೆ 8.30ರ ಸುಮಾರಿಗೆ ಬೆಂಗಳೂರಿನ ಅನಿಲ್ ಸೇಠಿ ಅವರು ಪ್ರಥಮ ಅಭಿಷೇಕ ಕಾರ್ಯ ನಡೆಸಿದರು. ಬಳಿಕ 12.40ಕ್ಕೆ ಆರಂಭಗೊಂಡ ದ್ರವ್ಯಕಲಶಾಭಿಷೇಕ 2.30ರ ಸುಮಾರಿಗೆ ಸಂಪನ್ನಗೊಂಡಿತು.
ಮಸ್ತಕಾಭಿಷೇಕದಲ್ಲಿ ಪಾಲ್ಗೊಂಡಿದ್ದ ವಿವಿಧ ಪೀಠಗಳ ಎಲ್ಲ ಭಟ್ಟಾರಕ ಮಹಾಸ್ವಾಮೀಜಿಗಳನ್ನು ಧರ್ಮಾಧಿಕಾರಿಗಳು ಗೌರವಿಸಿದರು. ಕ್ಷೇತ್ರಕ್ಕೆ ಭೇಟಿ ನೀಡಿದ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅವರನ್ನು ಸಮ್ಮಾನಿಸಿದರು. ಕರ್ನಾಟಕ ಜೈನ್ ಅಸೋಸಿಯೇಶನ್ನವರು ಡಾ| ಹೆಗ್ಗಡೆ ಅವರನ್ನು ಗೌರವಿಸಿದರು. ಕವಿ ರತ್ನಾಕರವರ್ಣಿಯ “ಭರತೇಶ ವೈಭವ’ ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಲಾಯಿತು.
ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್, ಶಾಸಕ ಅಭಯ್ ಪಾಟೀಲ್, ಮಾಜಿ ಶಾಸಕ ಸಂಜಯ್ ಪಾಟೀಲ್, ಡಿ. ಸುರೇಂದ್ರಕುಮಾರ್, ಸಂಚಾಲಕ ಡಿ. ಹಷೇìಂದ್ರಕುಮಾರ್ ಹಾಗೂ ಹೆಗ್ಗಡೆ ಕುಟುಂಬಸ್ಥರು ಉಪಸ್ಥಿತರಿದ್ದರು. .