ಹೊಸ ವರ್ಷಾಚರಣೆ: ಫಲವಸ್ತುಗಳಿಂದ ಸಿಂಗಾರಗೊಂಡ ಮಂಜುನಾಥ ಸ್ವಾಮಿ ಸನ್ನಿಧಿ
ಯಾತ್ರಾರ್ಥಿಗಳಿಂದ ತುಂಬಿದೆ ಶ್ರೀ ಕ್ಷೇತ್ರ ಧರ್ಮಸ್ಥಳ
Team Udayavani, Dec 31, 2019, 8:24 PM IST
ಬೆಳ್ತಂಗಡಿ: ಹೊಸ ವರ್ಷಾಚರಣೆ ಪ್ರಯುಕ್ತ ನಾಡಿನೆಲ್ಲೆಡೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಿದ್ದು, ಈ ಪ್ರಯುಕ್ತ ಕಳೆದ 12 ವರ್ಷಗಳಿಂದ ದೇವರ ಸೇವೆಯಲ್ಲಿರುವ ಬೆಂಗಳೂರಿನ ತಂಡವೊಂದು ಕ್ಷೇತ್ರವನ್ನು ವಿಶೇಷ ಹೂಗಳಿಂದ ಸಿಂಗರಿಸಿದೆ.
ಬೆಂಗಳೂರಿನ ಚಂದ್ರಲೇಔಟ್ ನಿವಾಸಿಗಳಾದ ಸಾಯಿ ಸರವಣ, ಎಸ್.ಗೋಪಾಲ್ ರಾವ್, ಆನಂದ, ಮಂಜುನಾಥ ರಾವ್ ಜತೆಗುಡಿ ಕಳೆದ 20 ವರ್ಷಗಳಿಂದ ಹೊಸ ವರ್ಷಕ್ಕೆ ಮುಂಜುನಾಥ ಸ್ವಾಮಿ ದರ್ಶನ ಪಡೆಯಲೆಂದು ಆಗಮಿಸುತ್ತಿದ್ದಾರೆ. ಈ ನಡುವೆ ಕಳೆದ 12 ವರ್ಷಗಳಿಂದ ಹೊಸ ವರ್ಷವನ್ನು ದೇವರ ಸೇವೆಗಾಗಿ ಮೀಸಲಿಡುವ ನಿಟ್ಟಿನಲ್ಲಿ ಹೂವಿನ ಅಲಂಕಾರ ಸೇವೆ ನೀಡುತ್ತಿದ್ದಾರೆ.
ಸಿಂಗಾರಕ್ಕೆ 15 ಬಗೆ ಹೂ, ಹಣ್ಣು
ಭತ್ತ ತೆನೆ, ಕಬ್ಬು, ದಾಳಿಂಬೆ, ಅನನಾಸು, ಬಾಳೆ ದಿಂಡು, ತೆಂಗಿನ ಗರಿ, ತಾವರೆ, ಲಿಲಿಯಂಮ್, ಕ್ರಿಸಾಂಟಮೊ, ಆಂತೂರಿಯಂ, ಜಮೈಕಾನ್ ಎಲೆ ಏರಿದಂತೆ 6 ಲೋಡ್ ಅಲಂಕಾರಿಕ ಸಾಮಾಗ್ರಿ ಬಳಸಿ ದೇವಳ ಹೊರಾಂಗಣ ಧ್ವಾರ, ಸುತ್ತು ಪೌಳಿ ಮೇಲ್ಛಾವಣಿ, ಸ್ತಂಭಗಳನ್ನು ವಿಭಿನ್ನವಾಗಿ ಸಿಂಗರಿಸಲಾಗಿದೆ.
ಹೊಸ ವರ್ಷವನ್ನು ಆಚರಿಸುವ ಸಲುವಾಗಿ ದೇವರ ಮೊರ ಹೋಗಬೇಕೆಂಬ ಸಂಕಲ್ಪದೊಂದಿಗೆ ಕಳೆದ 12 ವರ್ಷಗಳಿಂದ ಸೇವೆಯಲ್ಲಿ ತೊಡಗಿದ್ದೇವೆ. ಹೊಷ ವರ್ಷ ಎಂದು ಪಾರ್ಟಿ ಸುತ್ತಾಟ ನಡೆಸದೆ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ ಪಡೆಯಲು ಕುಟುಂಬ ಸಮೇತರಾಗಿ ಭೇಟಿ ನೀಡುತ್ತಿದ್ದೇವೆ.
-ಎಸ್. ಗೋಪಾಲ್ ರಾವ್, ಸೇವಾಕರ್ತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
Dharmasthala; ಕೆಎಸ್ಸಾರ್ಟಿಸಿ ಬಸ್ನಡಿ ಸಿಲುಕಿ ಮಹಿಳೆ ಸಾವು
MUST WATCH
ಹೊಸ ಸೇರ್ಪಡೆ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ