ತೆಂಗಿನ ಮರಗಳಿಗೆ ಹೆಚ್ಚಿದ ಬಿಳಿನೊಣ ರೋಗ ಹಾವಳಿ
Team Udayavani, Jun 1, 2018, 12:38 PM IST
ಸಂಪಾಜೆ : ಸಂಪಾಜೆ ಪರಿಸರದಲ್ಲಿ ತೆಂಗಿನ ಮರಗಳ ಗರಿಗಳಿಗೆ ಬಿಳಿ ನೊಣಗಳ ಹಾವಳಿ ತೀವ್ರಗೊಂಡಿದೆ.
ಕರಾವಳಿ ಜಿಲ್ಲೆಗಳಲ್ಲಿ ತೆಂಗಿನ ಮರಗಳ ಗರಿಗಳಿಗೆ ಈ ರೋಗ ವ್ಯಾಪಕವಾಗಿ ಕಂಡುಬಂದಿದ್ದು, ಸಂಪಾಜೆ, ಅರಂತೋಡು, ತೊಡಿಕಾನ, ಐವರ್ನಾಡು ಪ್ರದೇಶಗಳಿಗೆ ಹರಡಿದೆ. ಸುಳ್ಯ ತಾಲೂಕಿನಲ್ಲಿ ನಗರ, ಗ್ರಾಮೀಣ ಪ್ರದೇಶಗಳ ರೈತರ ತೆಂಗಿನ ತೋಟಗಳಿಗೆ ಬಿಳಿ ನೊಣಗಳು ಲಗ್ಗೆ ಇಡುತ್ತಿವೆ. ಹಲವು ವರ್ಷಗಳಿಂದ ತಾಲೂಕಿನಲ್ಲಿ ನುಸಿ ಬಾಧೆ ಸಹಿತ ಹಲವು ಸಮಸ್ಯೆಗಳು ತೆಂಗಿನ ಕೃಷಿಗೆ ಅಪ್ಪಳಿಸಿ, ತೆಂಗಿ ಕೃಷಿಯ ಮೇಲೆ ಪರಿಣಾಮ ಬೀರುತ್ತಿದೆ. ಇದೀಗ ಬಿಳಿ ನೊಣಗಳ ಹಾವಳಿ ತೆಂಗು ಕೃಷಿಕರಿಗೆ ಹೊಸ ತಲೆ ನೋವು ಹುಟ್ಟು ಹಾಕಿದೆ.
ರೋಗ ಲಕ್ಷಣ
ಹಸಿರು ನಳನಳಿಸುವ ತೆಂಗಿನ ಗರಿಗಳ ಕೆಳಭಾಗದಲ್ಲಿ ಕುಳಿತುಕೊಳ್ಳುವ ಬಿಳಿ ನೊಣಗಳು ಗರಿಯ ರಸ ಹೀರುತ್ತವೆ ಮತ್ತು ಸಿಹಿಯಾದ ಪದಾರ್ಥ ವಿಸರ್ಜನೆ ಮಾಡುತ್ತದೆ. ಈ ಪದಾರ್ಥಗಳ ಮೇಲೆ ಬೂದು ಬಣ್ಣದ ಶಿಲೀಂದ್ರಗಳು ಉತ್ಪತಿಯಾಗುತ್ತವೆ. ಇದರಿಂದ ಎಲೆಗಳ ಹಸಿರು ಮಾಯವಾಗಿ ಬಿಳಿ ಬಣ್ಣಕ್ಕೆ ತಿರುಗುತ್ತವೆ. ಆಹಾರೋತ್ಪಾದನೆ ಕಡಿಮೆಯಾಗಿ ತೆಂಗಿನ ಮರಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಈ ರೋಗದಿಂದ ತೆಂಗಿನ ಮರಗಳು ಸಾಯುವುದಿಲ್ಲ. ಆದರೆ ಬೆಳವಣಿಗೆ ತಗ್ಗುವ ಜತೆಗೆ, ಇಳುವರಿಯೂ ಕುಸಿಯುವ ಭೀತಿ ಎದುರಾಗಿದೆ. ಸುಳ್ಯ ನಗರ ಮತ್ತು ಪರಿಸರದಲ್ಲಿ ಹಲವು ತೆಂಗಿನ ಮರಗಳ ಗರಿಗಳು ಬಿಳಿ ನೊಣಗಳ ಹಾವಳಿಗೆ ತುತ್ತಾಗಿವೆ. ದೊಡ್ಡ ತೆಂಗಿನ ಮರಗಳ ಗರಿಗಳು ಬಿಳಿಯಾಗುತ್ತಿದ್ದು, ಕ್ರಮೇಣ ಕಪ್ಪು ಬಣ್ಣಕ್ಕೆ ತಿರುಗುತ್ತಿವೆ. ಬಿಳಿನೊಣಗಳ ಹಾವಳಿಯಿಂದ ಕೃಷಿಕರು ಕಂಗಾಲಾಗಿದ್ದು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಮೊರೆ ಹೋಗಿದ್ದಾರೆ.
ನಿವಾರಣೆ ಕ್ರಮಗಳು
ಬಿಳಿ ನೊಣದ ಹಾವಳಿಯಿಂದ ತೆಂಗಿನ ತೋಟವನ್ನು ರಕ್ಷಣೆ ಮಾಡಲು ತೋಟಗಾರಿಕಾ ಇಲಾಖೆ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಸೂಚಿಸಿದೆ. ಬಿಳಿ ನೊಣ ಕಂಡುಬಂದಲ್ಲಿ ಒಂದು ಲೀಟರ್ ನೀರಿಗೆ 3ರಿಂದ4 ಮಿ.ಲೀ. ಬೇವಿನ ಎಣ್ಣೆಯನ್ನು ಬೆರೆಸಿ ಸಿಂಪಡಿಸಬೇಕು. ತೆಂಗಿನ ತೋಟಗಳಲ್ಲಿ ಹಳದಿ ಅಂಟು ಪರದೆಯನ್ನು 6ರಿಂದ 7 ಅಡಿ ಎತ್ತರದಲ್ಲಿ ಕಟ್ಟಬೇಕು. ಪರದೆ ಕಟ್ಟುವುದರಿಂದ ಈ ಪರದೆಗೆ ಕೀಟಗಳು ಅಂಟಿಕೊಂಡು ಸಾಯುತ್ತವೆ. ಈ ರೀತಿ ಮಾಡಿದರೆ ಬಿಳಿ ನೊಣಗಳನ್ನು ಸ್ವಲ್ಪ ಮಟ್ಟಿಗೆ ತಡೆಗಟ್ಟಬಹುದು ಎಂದು ಇಲಾಖೆ ತಿಳಿಸುತ್ತದೆ.
ಮರ ಸಾಯುವುದಿಲ್ಲ
ಸುಳ್ಯ ತಾಲೂಕಿನ ಹಲವು ತೆಂಗಿನ ತೋಟಗಳಲ್ಲಿ ಬಿಳಿ ನೊಣ ಬಾಧೆ ಕಂಡುಬಂದಿದೆ. ಇದೀಗ ಸ್ವಲ್ಪ ಮಟ್ಟಿಗೆ ಹತೋಟಿಗೂ ಬಂದಿದೆ. ಈ ರೋಗದಿಂದ ತೆಂಗಿನ ಮರಗಳು ಸಾಯುವುದಿಲ್ಲ. ಮರಗಳ ಬೆಳವಣಿಗೆ ಕುಂಠಿತವಾಗಿ, ಇಳುವರಿ ಕಡಿಮೆ ಆಗುತ್ತದೆ. ಈ ಬಗ್ಗೆ ತೋಟಗಾರಿಕೆ ಇಲಾಖೆ ಪರಿಶೀಲನೆ ನಡೆಸುತ್ತಿದೆ.
– ಅರಬನ ಪೂಜೇರಿ,
ಪ್ರಭಾರ ಹಿರಿಯ ಸಹಾಯಕ ತೋಟಗಾರಿಕಾ
ನಿರ್ದೇಶಕರು, ಸುಳ್ಯ
ಬಾಧಿಸುತ್ತಿದೆ
ರೈತರು ಕೃಷಿ ಉತ್ಪನಗಳಿಗೆ ಬೆಲೆ ಕುಸಿತ, ಕೃಷಿಗಳಿಗೆ ಬಾಧಿಸುತ್ತಿರುವ ವಿವಿಧ ರೋಗಳಿಂದ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಬಿಳಿ ನೊಣ ರೋಗಬಾಧೆ ನಮ್ಮ ತೆಂಗಿನ ಮರಗಳಿಗೂ ಬಾಧಿಸಿದೆ. ಇಂತಹ ರೋಗಗಳ ಬಗ್ಗೆ ಇಲಾಖೆ ತಕ್ಷಣ ಮುಂಜಾಗ್ರತಾ ಕ್ರಮ ಸೂಚಿಸಿ, ರೈತರು ಹೆಚ್ಚು ನಷ್ಟಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು.
– ತಿರುಮಲ ಸಂಪಾಜೆ
ತೆಂಗಿನ ಕೃಷಿಕರು
ತೇಜೇಶ್ವರ್ ಕುಂದಲ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ