ದ.ಕ.: ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ
Team Udayavani, Mar 9, 2018, 10:47 AM IST
ಮಂಗಳೂರು : ಚುನಾವಣೆ ಹಿನ್ನೆಲೆಯಲ್ಲಿ ಮತ್ತಷ್ಟು ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಇತರ ಜಿಲ್ಲೆಗಳಿಗೆ ಹಾಗೂ ಇತರ ಜಿಲ್ಲೆಗಳಿಂದ ದ.ಕ. ಜಿಲ್ಲೆಗೆ ವರ್ಗಾವಣೆಗೊಳಿಸಿ ಗೃಹ ಇಲಾಖೆ ಆದೇಶ ಹೊರಡಿಸಿದೆ.
ಸುರತ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಧರ ಶಾಸ್ತ್ರೀ ಅವರನ್ನು ದಾವಣಗೆರೆ ಡಿಸಿಆರ್ಇ, ಗುರುದತ್ ಕಾಮತ್ ಸಿಸಿಬಿ ಮಂಗಳೂರು ಸಿಟಿಯಿಂದ ಉತ್ತರ ಕನ್ನಡ ಡಿಸಿಆರ್ಬಿ, ಮಹಮ್ಮದ್ ಶರೀಫ್ ಸಿಸಿಬಿ ಸ್ಪೆಷಲ್ ಪೊಲೀಸ್ ಸ್ಟೇಷನ್ನಿಂದ ಚಿಕ್ಕಮಗಳೂರು ಡಿಸಿಐಬಿ, ಶಿವಪ್ರಕಾಶ್ ನಗರ ಪೂರ್ವ ಸಂಚಾರ ಠಾಣೆಯಿಂದ ಸಿಸಿಬಿ ಮೈಸೂರು ನಗರ, ರಾಮಚಂದ್ರ ನಾಯಕ್ ಮೂಡಬಿದಿರೆ ಪೊಲೀಸ್ ಠಾಣೆಯಿಂದ ಡಿಸಿಬಿ ಉತ್ತರಕನ್ನಡ, ಉರ್ವ ಠಾಣೆಯ ರವೀಶ್ ನಾಯಕ್ ಬೆಂಗಳೂರಿನ ಐಎಸ್ಡಿ, ಕಲಾವತಿ ಕೆ. ಅವರನ್ನು ಪಾಂಡೇಶ್ವರ ಮಹಿಳಾ ಠಾಣೆಯಿಂದ ಉಡುಪಿ ಜಿಲ್ಲಾ ಮಹಿಳಾ ಠಾಣೆಗೆ ವರ್ಗಾಯಿಸಲಾಗಿದೆ.
ಮೋಹನ್ ಕೊಟ್ಟಾರಿ ಅವರನ್ನು ಸಿಟಿ ಎಸ್ಬಿ ಯಿಂದ ಎಸಿಬಿ ಮಂಗಳೂರು, ಅಶೋಕ್ ಪಿ. ಅವರನ್ನು ಕೊಣಾಜೆ ಠಾಣೆಯಿಂದ ಡಿಸಿಆರ್ಇ ಮಂಗಳೂರು, ನಾಗರಾಜ ಟಿ.ಡಿ ಅವರನ್ನು ಡಿಎಸ್ಬಿಯಿಂದ ಸಿಎಸ್ಪಿಗೆ ವರ್ಗಾವಣೆ ಮಾಡಲಾಗಿದೆ.
ಶಿವಮೊಗ್ಗ ಡಿಎಸ್ಬಿಯ ವಾಸೀಮ್ ಅಹಮ್ಮದ್ ಅವರು ಮಂಗಳೂರು ಸಿಸಿಬಿ ಸ್ಪೆಷಲ್ ಪೊಲೀಸ್ ಠಾಣೆಗೆ, ಮೈಸೂರು ಲಕ್ಷ್ಮೀಪುರಂ ಪೊಲೀಸ್ ಠಾಣೆಯ ರಘು ಜಿ.ಎಸ್.ಮಂಗಳೂರು ಸಿಸಿಆರ್ಬಿಗೆ ವರ್ಗಾವಣೆಗೊಂಡಿದ್ದಾರೆ. ವರ್ಗಾವಣೆ ಗೊಂಡಿರುವ ಸ್ಥಳಗಳಿಗೆ ತೆರಳಿ ತತ್ಕ್ಷಣ ಕೆಲಸಕ್ಕೆ ಹಾಜರಾಗಬೇಕೆಂದು ಆದೇಶದಲ್ಲಿ ತಿಳಿಸಿಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ