‘ಮಧ್ಯವರ್ತಿಗಳಿಗೆ ಮಾರು ಹೋಗದಿರಿ’
Team Udayavani, Oct 22, 2017, 3:41 PM IST
ಬೆಳ್ತಂಗಡಿ: ಕೃಷಿ ಇಲಾಖೆ ವತಿಯಿಂದ ಅಥವಾ ಯಾವುದೇ ಸರಕಾರಿ ಇಲಾಖೆಯಿಂದ ಸವಲತ್ತು ಪಡೆಯಲು ಮಧ್ಯವರ್ತಿಗಳ ಸಹಾಯ ಪಡೆಯಬೇಡಿ ಎಂದು ಶಾಸಕ, ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದ್ದಾರೆ. ಅವರು ಕೃಷಿ ಇಲಾಖೆ ಆವರಣದಲ್ಲಿ ಕೃಷಿ ಇಲಾಖೆ ಸಹಾಯಧನದಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣ ವಿತರಿಸಿ ಮಾತನಾಡಿದರು.
ರಾಜ್ಯ ಸರಕಾರ ಬಡವರಿಗೆ ಸಹಾಯವಾಗಬೇಕೆಂಬ ನಿಟ್ಟಿನಲ್ಲಿ, ಕೃಷಿಕರು ಸ್ವಾವಲಂಬಿಗಳಾಗಬೇಕು ಎಂದು ಸಹಾಯಧನದ ಮೂಲಕ ಕೃಷಿ ಯಂತ್ರೋಪಕರಣ ವಿತರಿಸುತ್ತಿದೆ. ಕೃಷಿ ಕೂಲಿ ಕಾರ್ಮಿಕರ ಕೊರತೆ ನಿವಾರಿಸಲು ಇದು ಪೂರಕವಾಗಲಿದೆ. ಯಂತ್ರೋಪಕರಣ ಪಡೆದವರು ದುರುಪಯೋಗ ಮಾಡದೆ ಸದುಪಯೋಗ ಮಾಡಬೇಕು ಎಂದರು.
ಟಿಲ್ಲರ್ ವಿತರಣೆ
ಓಡಿಲ್ಳಾಳದ ಅಪ್ಪಿ ಅವರಿಗೆ 2 ಲಕ್ಷ ರೂ. ಸಹಾಯಧನದಲ್ಲಿ 3.47 ಲಕ್ಷ ರೂ.ಗಳ ಟ್ರ್ಯಾಕ್ಟರ್, ಕಡಿರುದ್ಯಾವರದ ಕಿನ್ನಿ ನಾೖಕ
ಅವರಿಗೆ 1 ಲಕ್ಷ ರೂ. ಸಹಾಯಧನದಲ್ಲಿ 1.6 ಲಕ್ಷ ರೂ.ಗಳ ಟಿಲ್ಲರ್, ಇಂದಬೆಟ್ಟಿನ ಕೇಶವ ಗೌಡ ಅವರಿಗೆ 60 ಸಾವಿರ ರೂ. ಸಹಾಯಧನದಲ್ಲಿ 1.52 ಲಕ್ಷ ರೂ.ಗಳ ಟಿಲ್ಲರ್ ವಿತರಿಸಲಾಯಿತು.