ಪ್ರಾಣ ತೆಗೆವ ಬ್ಲೂವೇಲ್‌ ಆಟಕ್ಕೆ ಬಾಲಕ ಬಲಿ?


Team Udayavani, Jul 27, 2018, 5:10 AM IST

blue-whale-26-7.jpg

ಬೆಳ್ತಂಗಡಿ: ಜಗತ್ತಿನಾದ್ಯಂತ ತೀವ್ರ ತಲ್ಲಣ ಸೃಷ್ಟಿಸಿದ್ದ, ಹದಿಹರೆಯದ ಯುವಕರ ಪ್ರಾಣ ತೆಗೆಯುವ ಆಟ ಬ್ಲೂವೇಲ್‌ ಗೆ ಇದೀಗ ಬೆಂಗಳೂರಿನ ಬಾಲಕನೂ ಬಲಿಯಾಗಿರುವ ಬಗ್ಗೆ ತೀವ್ರ ಶಂಕೆ ವ್ಯಕ್ತವಾಗಿದೆ. ಸತತ ಶೋಧದ ಬಳಿಕ ಗುರುವಾಯನಕೆರೆಯಲ್ಲಿ ಬೆಂಗಳೂರು ಮೂಲದ ವಿದ್ಯಾರ್ಥಿ ಯಶವಂತ್‌ ಸಾಯಿ ಕೆ.ಪಿ. (15) ಶವ ಪತ್ತೆಯಾಗಿದೆ. ಆತನ ಬ್ಯಾಗ್‌ ಮತ್ತು ಚಪ್ಪಲಿ ಜು. 25ರಂದು ಪತ್ತೆಯಾಗಿದ್ದು, ಘಟನೆಯನ್ನು ಪುಷ್ಟೀಕರಿಸಿತ್ತು. ಅಗ್ನಿ ಶಾಮಕ ಸಿಬಂದಿ ರಾತ್ರಿವರೆಗೂ ಹುಡುಕಾಟ ನಡೆಸಿದ್ದು ಗುರುವಾರ ಬೆಳಗ್ಗೆ ಶವವನ್ನು ಕೆರೆಯಿಂದ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

ಗುರುವಾಯನಕೆರೆಗೆ ಬಂದಿದ್ದೇಕೆ? 
ಬೆಂಗಳೂರು ಹೂಡಿ ನಿವಾಸಿ ಎನ್‌. ವಿ. ಪ್ರೇಮ್‌ಕುಮಾರ್‌ ಅವರ ಪುತ್ರ ಯಶವಂತ್‌ ದೂರ್ವನಿ ನಗರದ ಐಟಿಐ ವಿದ್ಯಾಮಂದಿರ್‌ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಜು. 24ರಂದು ಶಾಲೆಯಿಂದ ತಪ್ಪಿಸಿಕೊಂಡು KSRTC ಬಸ್ಸಿನಲ್ಲಿ ಬೆಳ್ತಂಗಡಿಗೆ ಬಂದಿದ್ದ. ಬಳಿಕ ಕಾರ್ಕಳ ಬಸ್‌ ನಲ್ಲಿ ಗುರುವಾಯನಕೆರೆಗೆ ಬಂದಿದ್ದ. ಆಕಸ್ಮಿಕವಾಗಿ ನೀರಿಗೆ ಬಿದ್ದನೋ ಆತ್ಮಹತ್ಯೆ ಮಾಡಿಕೊಂಡನೋ? ಆತ ಇಲ್ಲೇಕೆ ಬಂದ  ಎಂಬುದು ಸ್ಪಷ್ಟವಾಗಿಲ್ಲ.


ಬ್ಲೂವೇಲ್‌ ಶಂಕೆ

ವಿದ್ಯಾರ್ಥಿ ಮಾವ ರಾಜಶೇಖರ್‌ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತ, ಸಾವಿಗೆ ಬ್ಲೂವೇಲ್‌ ಆಟ ಕಾರಣವಾಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಆದರೆ ‘ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದಿದ್ದಾನೆ ಎಂಬ ಕಾರಣಕ್ಕೆ ಬೈದಿದ್ದೇವೆ. ಇದೇ ಕಾರಣಕ್ಕೆ ಮನೆಬಿಟ್ಟು ಬಂದಿರಬಹುದು’ ಎಂದು ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.

ಆಧಾರ್‌ ಕಾರ್ಡ್‌ ಬ್ಯಾಗಲ್ಲಿತ್ತು!
ಕೆರೆ ದಂಡೆಯಲ್ಲಿದ್ದ ಬಾಲಕನ ಬ್ಯಾಗ್‌ ನಲ್ಲಿ ಆತನ ಆಧಾರ್‌ ಕಾರ್ಡ್‌, ಐಡಿ ಕಾರ್ಡ್‌, ಇತರ ದಾಖಲೆಗಳಿದ್ದು, ಅದು ಬೆಂಗಳೂರಿನ ವಿದ್ಯಾರ್ಥಿಯದ್ದು ಎಂದು ಪತ್ತೆಯಾಗಿತ್ತು. ಅದರಂತೆ ಪೊಲೀಸರು ಆತನ ಪೋಷಕರನ್ನು ಕರೆಸಿಕೊಂಡಿದ್ದರು. ವಿದ್ಯಾರ್ಥಿಯ ಶವ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಪೋಷಕರು ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ.

ಏನಿದು ಬ್ಲೂವೇಲ್‌ ಆಟ? 
2016ರಲ್ಲಿ ರಷ್ಯಾದಲ್ಲಿ ಹುಟ್ಟಿಕೊಂಡ ಒಂದು ಪ್ರಾಣವನ್ನೇ ತೆಗೆಯುವ ಆಟ ಬ್ಲೂವೇಲ್‌. ಸಾಮಾಜಿಕ ಜಾಲತಾಣಗಳ ಮೂಲಕ ಆಡುವ ಆಟ ಇದಾಗಿದೆ. 50 ದಿನಗಳಲ್ಲಿ ತಂಡದ ಮುಖಂಡ ಹೇಳುವಂತೆ ಅಪಾಯಕಾರಿ ಟಾಸ್ಕ್ ಗಳನ್ನು ಆಡಬೇಕಿರುತ್ತದೆ.

ಡೈರಿಯಲ್ಲಿತ್ತು ‘ಮಂಗಳೂರು ಅಡ್ವೆಂಚರ್‌’
ವಿದ್ಯಾರ್ಥಿ ಬ್ಲೂವೇಲ್‌ ಗೆ ಬಲಿಯಾಗಿರುವ ಶಂಕೆ ತೀವ್ರವಾಗಲು ಕಾರಣವಾಗಿರುವುದು ಆತ ಬರೆದ ಡೈರಿ. ಅದರಲ್ಲಿ ಆತ 2018ರ ಜು. 24ಕ್ಕೆ ನಾನು ಉಡುಪಿ ಕಡೆಗೆ ಪ್ರಯಾಣ ಬೆಳೆಸುತ್ತಿದ್ದು, ಅಲ್ಲಿ 5 ತಿಂಗಳ ಕಾಲ ಕೆಲಸ ಮಾಡಲಿದ್ದೇನೆ. ಅಲ್ಲದೇ ‘ಮಂಗಳೂರು ಅಡ್ವೆಂಚರ್‌’ ಎಂಬುದಾಗಿ ಇಂಗ್ಲಿಷ್‌ನಲ್ಲಿ ಬರೆದುಕೊಂಡಿದ್ದ ಎಂದು ಮನೆಯವರು ತಿಳಿಸಿದ್ದಾರೆ.  

ಖಚಿತಗೊಂಡಿಲ್ಲ 
ವಿದ್ಯಾರ್ಥಿ ಬ್ಲೂವೇಲ್‌ಗೆ ಬಲಿಯಾದ ಬಗ್ಗೆ  ಖಚಿತಗೊಂಡಿಲ್ಲ. ಕಲಿಕೆಯಲ್ಲಿ ಹಿಂದೆ ಎಂಬ ಕಾರಣಕ್ಕೆ ಪೋಷಕರು ಬೈದಿರುವ ಹಿನ್ನೆಲೆಯಲ್ಲಿ ಆತ ಮನೆಬಿಟ್ಟು ಬಂದಿದ್ದಾನೆ. ಆದರೆ ಮಾಧ್ಯಮಗಳಲ್ಲಿ ಬ್ಲೂವೇಲ್‌ಗೆ ಬಲಿ ಎಂದು ಸುದ್ದಿ ಹಬ್ಬಿದೆ. 
– ನಾಗೇಶ್‌ ಕದ್ರಿ, ಬೆಳ್ತಂಗಡಿ ವೃತ್ತ ನಿರೀಕ್ಷಕ 

ಮುಂದುವರಿದ ತನಿಖೆ
ವಿದ್ಯಾರ್ಥಿಯ ದೇಹದಲ್ಲಿ ಯಾವುದೇ ಗಾಯಗಳು ಪತ್ತೆಯಾಗಿಲ್ಲ. ವಿದ್ಯಾರ್ಥಿ ತಂದೆ ಆತ ಕಲಿಕೆಯಲ್ಲಿ ಹಿಂದಿದ್ದ ಎಂಬುದನ್ನು ಹೇಳಿದ್ದಾರೆ. ಸದ್ಯ ತನಿಖೆ ಮುಂದುವರಿದಿದ್ದು, ಬ್ಲೂವೇಲ್‌ ಬಗ್ಗೆ ಸುಳಿವು ಲಭ್ಯವಾಗಿಲ್ಲ. 
– ಡಾ| ರವಿಕಾಂತೇಗೌಡ, ಜಿಲ್ಲಾ  ಪೊಲೀಸ್‌ ವರಿಷ್ಠಾಧಿಕಾರಿ  

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.