ಧರ್ಮಸ್ಥಳದ ಧರ್ಮಾಧಿಕಾರಿಗಳಿಗೆ ದೆಹಲಿಯಲ್ಲಿ ಬೆಳ್ತಂಗಡಿ ಕ್ಷೇತ್ರದ ಶಾಸಕರಿಂದ ಸ್ವಾಗತ
Team Udayavani, Jul 20, 2022, 10:06 PM IST
ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೊದಿಯವರು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭೆಗೆ ನಾಮನಿರ್ದೇಶನಗೊಳಿಸಿರುವ ಹಿನ್ನೆಲೆ ಜು.21 (ನಾಳೆ) ರಂದು ಪ್ರಮಾಣವಚನ ಸ್ವೀಕರಿಸಲು ದೆಹಲಿಗೆ ತೆರಳಿರುವ ಪೂಜ್ಯರನ್ನು ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಸಹಿತ ಪ್ರಮುಖರು ಇದೀಗ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.
ಜು.21 ರಂದು 11 ಗಂಟೆಗೆ ಸರಿಯಾಗಿ ಪ್ರಮಾಣ ವಚನ ಸ್ವೀಕರಸಲಿರುವ ಹಿನ್ನೆಲೆ ಧರ್ಮಸ್ಥಳದಿಂದ ಹೊರಟ ಪೂಜ್ಯರು ಇದೀಗ 8.30 ರ ಸುಮಾರಿಗೆ ಬಂದಿಳಿದರು.
ಈ ವೇಳೆಗೆ ಶಾಸಕ ಹರೀಶ್ ಪೂಂಜ, ಸಂಸದ ತೇಜಸ್ವಿ ಸೂರ್ಯ, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರ.ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್, ಗಣೇಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.