ಮಳೆ ಹಾನಿ ಎದುರಿಸಲು ಸರ್ವ ಸನ್ನದ್ಧ; ಕಾಮಗಾರಿ ಚುರುಕು
Team Udayavani, May 27, 2019, 3:07 PM IST
ಮೂಲ್ಕಿ: ಇಲ್ಲಿನ ನ.ಪಂ.ವ್ಯಾಪ್ತಿಯ ನಾಲ್ಕು ಗ್ರಾಮಗಳ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಆಗಬಹುದಾದ ಅನಾಹುತಗಳನ್ನು ಎದುರಿಸುವಲ್ಲಿ ಸಂಪೂರ್ಣವಾಗಿ ತಯಾರಾಗಿದ್ದು, ತರಾತುರಿಯಲ್ಲಿ ಕಾಮಗಾರಿ, ಸಭೆಗಳನ್ನು ನಡೆಸಲಾಗುತ್ತಿದೆ.
ಮೂಲ್ಕಿಯ ನಾಲ್ಕು ಗ್ರಾಮಗಳ 16 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆಯ 80 ಕಿ.ಮೀ. ಉದ್ದದ ಪೈಪ್ಲೈನ್ ಕಾಮಗಾರಿಯೂ ಆಮೆ ಗತಿಯಲ್ಲಿ ನಡೆಯುತ್ತಿದೆ. ಕಾಮಗಾರಿಯ ಕೆಲಸವೂ ಚುರುಕು ಕಾಣದೇ ಇರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಮೂಲ್ಕಿ ನ. ಪಂ. ಕಳೆದ ವರ್ಷದ ಮಳೆಗಾಲದ ಕೆಲವು ನಿರ್ವಹಣೆಯ ವ್ಯತ್ಯಯಗಳನ್ನು ಕಂಡು ಮುಂಜಾಗ್ರತೆಯ ಕ್ರಮವಾಗಿ ಎಪ್ರಿಲ್ ತಿಂಗಳಿನಿಂದಲೇ ನೀರು ಹರಿದು ಆತಂಕದ ಪರಿಸ್ಥಿತಿ ಉಂಟು ಮಾಡುವ ಎಲ್ಲ ಚರಂಡಿಗಳ ಹೂಳೆತ್ತುವ ಕೆಲಸ ಆರಂಭಿಸಿ ರಸ್ತೆಗಳನ್ನು ಸುಸ್ಥಿರಗೊಳಿಸಲಾಗುತ್ತಿದೆ.
ಚರಂಡಿ ಕಾಮಗಾರಿಗೆ ಅಗೆದ ಹೂಳಿನ ಮಣ್ಣನ್ನು ರಸ್ತೆ ಬದಿಯಲ್ಲಿ ಹಾಕುತ್ತಿದ್ದು, ಇದನ್ನು ಸುವ್ಯವಸ್ಥಿತವಾಗಿ ಮುಚ್ಚಲು ತಿಂಗಳುಗಟ್ಟಲೇ ತೆಗೆದುಕೊಳ್ಳಲಾಗುತ್ತಿದೆ. ಈ ಬಗ್ಗೆ ನ. ಪಂ.ಗೆ ಸಾರ್ವಜನಿಕರ ದೂರುಗಳು ಕೇಳಿ ಬಂದಿವೆ. ರಸ್ತೆ ಬದಿಯಿರುವ ಹೂಳನ್ನು ಮುಚ್ಚದೇ ಹೋದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದು ಸಾರ್ವಜನಿಕರ ವಾದ.
ನ. ಪಂ. ವ್ಯಾಪ್ತಿಯಲ್ಲಿ ಸಾಧಾರಣ 75 ಕಿ.ಮೀ. ನಷ್ಟು ಉದ್ದಕ್ಕೆ ಇರುವ ಚರಂಡಿಗಳಲ್ಲಿ ಒಟ್ಟು 26 ಕಿ.ಮೀ. ಚರಂಡಿಗಳು ಮಳೆಗಾಲದ ಪರಿಸ್ಥಿತಿಯನ್ನು ಅಭದ್ರಗೊಳಿಸುವಂತದ್ದು. ಅದಕ್ಕಾಗಿ ಈಗಾಗಲೇ 18 ಕಿ.ಮೀ. ಚರಂಡಿಗಳ ಹೂಳೆತ್ತುವ ಕೆಲಸ ಮುಗಿದಿದೆ.
– ಮಾಣಿಕ್ಯ ಎಂ., ವಿಶೇಷ ತಹಶಿಲ್ದಾರರು, ನಾಡ ಕಚೇರಿ
ಸರ್ವೋತ್ತಮ ಅಂಚನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ
Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ
Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ