ಕುಂಜತ್ತಬೈಲ್‌ ಒಳಚರಂಡಿ ಸಮಸ್ಯೆ: ಬಾವಿ ನೀರು ಮಲಿನ


Team Udayavani, May 24, 2018, 4:55 AM IST

charandi-24-5.jpg

ಕಾವೂರು: ಮನಪಾ ವ್ಯಾಪ್ತಿಯ ಕುಂಜತ್ತಬೈಲ್‌ ಕುಳ ಭಾಗದಲ್ಲಿ ಒಳಚರಂಡಿ ವ್ಯವಸ್ಥೆಯ ಕೊರತೆಯಿಂದಾಗಿ ತಗ್ಗು ಪ್ರದೇಶದ ಬಾವಿಗಳಿಗೆ ಮಲಿನ ನೀರು ಹರಿದು ಕುಡಿಯುವ ನೀರಿನ ಮೂಲ ಹಾಳಾಗುತ್ತಿದೆ. ಮಳೆ ನೀರು ಹರಿಯುವ ಸಣ್ಣ ತೋಡಿ ನಲ್ಲೇ ತ್ಯಾಜ್ಯ ನೀರು ಹರಿಯುತ್ತಿದೆ. ತಗ್ಗು ಪ್ರದೇಶದಲ್ಲಿ ಅಲ್ಲಲ್ಲಿ ನಿಲ್ಲುವ ಕಾರಣ ಸೊಳ್ಳೆ ಗಳ ಉತ್ಪತ್ತಿಯ ತಾಣವಾಗಿದೆ. ಶುಚಿತ್ವದ ಕೊರತೆಯಿಂದಾಗಿ ಜ್ವರ ಸಹಿತ ಆರೋಗ್ಯ ಏರುಪೇರಿಗೆ ಕಾರಣವಾಗುತ್ತಿದೆ.

ಚರಂಡಿಗೆ ಜಾಗವಿಲ್ಲ 
ರಸ್ತೆಯಲ್ಲಿಯೇ ಹರಿಯುವ ನೀರು, ನಡೆದಾಡುವ ಮೆಟ್ಟಿಲಿನಲ್ಲಿ ಒಸರುವ ಮಲಿನ ನೀರು, ಜತೆಗೆ ದುರ್ವಾಸನೆ. ಇದು ಕುಂಜತ್ತಬೈಲ್‌ ಕುಳ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡು ಬರುವ ದೃಶ್ಯ. ಇದು ಭೌಗೋಳಿಕವಾಗಿ ಗುಡ್ಡ ಹಾಗೂ ತಗ್ಗು ಪ್ರದೇಶಹೊಂದಿದ್ದು, ವಲಸೆ ಕಾರ್ಮಿಕರ ವಸತಿ ಪ್ರದೇಶವಾಗಿದ್ದು, ಎಲ್ಲೆಂದರಲ್ಲಿ ಮನೆ ನಿರ್ಮಾಣದಿಂದ ಚರಂಡಿ ನಿರ್ಮಾಣಕ್ಕೂ ಇಲ್ಲಿ ಜಾಗವಿಲ್ಲ ಎಂಬಂತಾಗಿದೆ. ಈ ಸಮಸ್ಯೆ ಇಂದು ನಿನ್ನೆಯದಲ್ಲ . ಹಕ್ಕು ಪತ್ರ ಪಡೆದು ಗುಡ್ಡ ಪ್ರದೇಶದಲ್ಲಿ ವಾಸಿಸುವ ನಿವಾಸಗಳಿಗೆ ಒಳಚರಂಡಿ ವ್ಯವಸ್ಥೆ ಒಂದು ಸವಾಲೇ ಸರಿ. ಶೇ. 50ರಷ್ಟು ಈ ಭಾಗದಲ್ಲಿ ವಾಸಿಸುವರು ದೂರದ ಕೇರಳ, ತಮಿಳು ನಾಡು, ಉತ್ತರ ಕರ್ನಾಟಕದ ವಲಸಿಗರು. ಇನ್ನು ಸಣ್ಣ ಸಣ್ಣ ಮನೆಗಳಲ್ಲಿ ಬಾಡಿಗೆ ನೀಡುವ ವ್ಯವಹಾರ ಈ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ.

ಪಾಲಿಕೆ ಕ್ರಮ ಕೈಗೊಂಡಿಲ್ಲ
ಕುಳ ಭಾಗದಲ್ಲಿ ಗುಡ್ಡ ಪ್ರದೇಶದಲ್ಲಿ ವಾಸಿಸುವವರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಮೇಲಿನಿಂದ ಬರುವ ಮಲಿನ ನೀರು ಒಂದೇ ಕಡೆಗೆ ತೋಡಿನ ಮೂಲಕ ಹರಿಯಬಿಡಲಾಗಿದೆ. ಇದರಿಂದ ಮಾರುತಿ ಬಡಾವಣೆಯ ಬಾವಿಗಳು ಕಲುಷಿತಗೊಂಡಿದ್ದು, ಕುಡಿಯಲು ಅಯೋಗ್ಯವಾಗಿದೆ. ಮುಂದೆ ನೀರು ಹರಿದು ಹೋಗಲು ವ್ಯವಸ್ಥೆಯಿಲ್ಲದೆ ಅಲ್ಲಲ್ಲಿ ನೀರು ನಿಂತು ದುರ್ವಾಸನೆ ಬೀರು ತ್ತಿದೆ. ಸೊಳ್ಳೆಗಳು ವಿಪರೀತವಾಗಿವೆೆ. ಆದ್ದರಿಂದ ಈ ಭಾಗದಲ್ಲಿ ಒಳಚರಂಡಿ ಅಗತ್ಯ ವಾಗಿದೆ. ಸದ್ಯಕ್ಕೆ ನಾಲ್ಕು ಭಾಗಗಳಲ್ಲೂ ಸಮಾನಾಂತರವಾಗಿ ತೋಡು ಮಾಡಿ ಹರಿಯಲು ವ್ಯವಸ್ಥೆ ಮಾಡಿದರೆ ಒಂದೇ ಪ್ರದೇಶ ತ್ಯಾಜ್ಯ ನೀರಿನಿಂದ ಸಮಸ್ಯೆ ಎದುರಿಸುವುದು ತಪ್ಪುತ್ತದೆ. ಈ ಬಗ್ಗೆ ಮನವಿ ಮಾಡಿದ್ದರೂ ಪಾಲಿಕೆ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿ ದಯಾನಂದ ಶೆಟ್ಟಿ, ಕುಳ, ಕುಂಜತ್ತಬೈಲ್‌ ದೂರಿದ್ದಾರೆ.

ಹಾಸುಗಲ್ಲಿನಿಂದಾಗಿ ಒಳಚರಂಡಿ ನಿರ್ಮಾಣ ಕಷ್ಟ
ದೇವಿನಗರ, ಜ್ಯೋತಿನಗರದಂತಹ ಎತ್ತರ ಪ್ರದೇಶದಲ್ಲಿ ಗಟ್ಟಿಯಾದ ಹಾಸುಗಲ್ಲು (ಸೋಮನಾಥ ಪಾದೆ) ಇರುವುದರಿಂದ ಒಳಚರಂಡಿ ನಿರ್ಮಾಣ ಕಷ್ಟ. ಇನ್ನೊಂದೆಡೆ ಮೂರ್‍ನಾಲ್ಕು ಅಡಿ ರಸ್ತೆ ಮಾತ್ರ ಇರುವುದರಿಂದ ಲಾರಿಗಳ ಓಡಾಟ ಕಷ್ಟಕರ. ಇಲ್ಲಿನ ಭಾಗದ ಒಳಚರಂಡಿ ವ್ಯವಸ್ಥೆಗೆ ವೆಟ್‌ ವೆಲ್‌ ನಿರ್ಮಾಣ ಮಾಡಲು ಜಾಗ ಗುರುತಿಸಲಾಗಿದೆ. ಸಾಧ್ಯವಾದ ಪ್ರದೇಶದಲ್ಲಿ ಒಳಚರಂಡಿ ಕಾಮಗಾರಿಯನ್ನು ಹಣಕಾಸಿನ ಸೌಲಭ್ಯ ಹೊಂದಿಕೊಂಡು ಮಾಡಲಾಗುವುದು.
– ಮಹಮ್ಮದ್‌, ಕಾರ್ಪೊರೇಟರ್‌

ಯೋಜನೆ ರೂಪಿಸಲಾಗುವುದು 
ಭೌಗೋಳಿಕ ಪ್ರದೇಶವನ್ನು ಗಮನಿಸಿ ಅದಕ್ಕೆ ಹೊಂದಿಕೊಂಡು ಒಳಚರಂಡಿ ವ್ಯವಸ್ಥೆ ಮಾಡಲು ಪಾಲಿಕೆ ಕ್ರಮ ಕೈಗೊಳ್ಳಲಿದೆ. ತಾಂತ್ರಿಕವಾಗಿ ಸಲಹೆ ಪಡೆದು ಮುಂದಿನ ಯೋಜನೆ ರೂಪಿಸಲಾಗುವುದು.
– ಮಹಮ್ಮದ್‌ ನಝೀರ್‌, ಆಯುಕ್ತರು ಪಾಲಿಕೆ

— ಲಕ್ಷ್ಮೀನಾರಾಯಣ ರಾವ್‌

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.