ಹೂಳು ತುಂಬಿದ ಕಾಲುವೆ; ತೋಡಿನ ನೀರು ಮನೆಗೆ!


Team Udayavani, Jun 3, 2018, 10:15 AM IST

3-june-3.jpg

ಮಹಾನಗರ: ಇತ್ತೀಚೆಗೆ ಸುರಿದ ಮಳೆಗೆ ನಗರದ ಬಹುತೇಕ ಭಾಗ ಮುಳುಗಡೆಯಾಗಿದ್ದು, ಬೇರೆ ಬೇರೆ ಕಾರಣಗಳಿಂದ ರಾಜಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯದೆ ಅದು ಮನೆಗಳಿಗೆ ನುಗ್ಗುವ ಪರಿಸ್ಥಿತಿ ಉಂಟಾಗಿತ್ತು. ಅಳಕೆ, ಕುದ್ರೋಳಿ ಭಾಗದಲ್ಲೂ ಇಲ್ಲಿನ ರಾಜಕಾಲುವೆಯ ನೀರು ಮನೆಗಳಿಗೆ ನುಗ್ಗಿ ಅಪಾರ ಹಾನಿಯನ್ನುಂಟು ಮಾಡಿತ್ತು.

ಬಲ್ಲಾಳ್‌ಬಾಗ್‌ ಮೂಲಕ ಕೊಡಿಯಾಲಬೈಲ್‌, ಅಳಕೆ- ಕುದ್ರೋಳಿ ಪ್ರದೇಶದಲ್ಲಿ ಸಾಗುವ ರಾಜಕಾಲುವೆಯಲ್ಲಿ ಮುಖ್ಯವಾಗಿ ಒತ್ತುವರಿಗಿಂತಲೂ ಹೂಳು ತುಂಬಿರುವುದೇ ಪ್ರಮುಖ ಕಾರಣ. ಪಾಲಿಕೆಯು ಇದನ್ನು ಸಮರ್ಪಕವಾಗಿ ವಿಲೇವಾರಿ ಮಾಡದೇ ಇರುವುದರಿಂದ ಮಳೆ ನೀರು ಕಾಲುವೆಯ ಮೇಲ್ಮುಖವಾಗಿ ಸಾಗುತ್ತದೆ.

ಅಳಕೆ ಪ್ರದೇಶ ಎನ್ನುವುದು ತಗ್ಗು ಪ್ರದೇಶವಾಗಿರುವುದರಿಂದ ಹೆಚ್ಚಿನ ಭಾಗಗಳಲ್ಲಿ ಮಣ್ಣು ತುಂಬಿಸಿ ಬೃಹತ್‌ ಕಟ್ಟಡಗಳು, ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಮೇ 29ರಂದು ಧಾರಾಕಾರ ಮಳೆ ಸುರಿದಿರುವುದರಿಂದ ನೀರು ಮನೆಗಳಿಗೆ ನುಗ್ಗಿದೆ.

ತೋಡಿನ ಬದಿ ಮಣ್ಣಿನ ರಾಶಿ
ಸಾರ್ವಜನಿಕರು ತಮ್ಮ ಖಾಸಗಿ ಜಾಗದಲ್ಲಿ ತೆಗೆದ ಮಣ್ಣು, ಕಟ್ಟಡದ ಅವಶೇಷಗಳನ್ನು ತೋಡಿನ ಬದಿ ತಂದು ರಾಶಿ ಹಾಕುತ್ತಾರೆ. ಮಳೆ ಬೀಳುವ ಸಂದರ್ಭ ಇದು ತೋಡು ಸೇರುವುದರಿಂದ ನೀರಿನ ಹರಿವಿಗೆ ತೊಂದರೆಯಾಗುತ್ತಿದೆ. ಮುಖ್ಯವಾಗಿ ಕುದ್ರೋಳಿ ಸಮೀಪದ ಮಂಡಿ ಭಾಗದಲ್ಲಿ ಇದೇ ರೀತಿ ಮಣ್ಣಿನ ರಾಶಿ ತೋಡು ಸೇರಿರುವ ಘಟನೆ ನಡೆದಿತ್ತು.

ಮಳೆಯ ಮುಂಚಿತವಾಗಿ ಈ ರೀತಿ ತೋಡಿನ ಮಣ್ಣನ್ನು ತೆರವುಗೊಳಿಸುವುದು ಅಥವಾ ಆ ರೀತಿ ಮಣ್ಣು ಹಾಕದಂತೆ ಕ್ರಮಕೈಗೊಂಡರೆ ಇಂತಹ ತೊಂದರೆ ಎದುರಾಗುವುದಿಲ್ಲ. ತೋಡಿನಿಂದ ತೆರವು ಗೊಳಿಸಿದ ಮಣ್ಣನ್ನೇ ತೋಡಿನ ಬದಿಯಲ್ಲಿ ಹಾಕಿರುತ್ತಾರೆ. ಅದು ಕೂಡ ಮಳೆ ಬರುವ ವೇಳೆ ತೋಡು ಸೇರುವ ಸಾಧ್ಯತೆ ಇದೆ.

ಡ್ರೆಜ್ಜಿಂಗ್‌ ಕಾರ್ಯವಿಲ್ಲ
ಅಳಕೆಯಲ್ಲಿ ಸಾಗುವ ರಾಜ ಕಾಲುವೆಯು ಅಳಿವೆಬಾಗಿಲಿನಲ್ಲಿ ಪಲ್ಗುಣಿ ತೋಡನ್ನು ಸೇರುತ್ತದೆ. ಹೀಗಾಗಿ ತೋಡಿನಲ್ಲಿ ಹರಿದು ಬಂದ ಮಣ್ಣು ಹೆಚ್ಚಿನ ಪ್ರಮಾಣದಲ್ಲಿ ಅಳವೆಬಾಗಿಲಿನಲ್ಲಿ ಸಂಗ್ರಹವಾಗುತ್ತದೆ.

ಸೇತುವೆಯಲ್ಲಿ ಹೂಳು 
ತೋಡಿಗೆ ಅಲ್ಲಲ್ಲಿ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದ್ದು, ಮಳೆ ನೀರಿನೊಂದಿಗೆ ಹರಿದು ಬರುವ ಕಸಕಡ್ಡಿಗಳು ಇದ ರ ಲ್ಲಿ ನಿಲ್ಲುವುದರಿಂದ ನೀರು ಹರಿಯಲು ತಡೆಯುಂಟಾಗುತ್ತಿ ದೆ. ಬಲ್ಲಾಳ್‌ಬಾಗ್‌ ಪ್ರದೇಶದಲ್ಲಿ ಮುಖ್ಯರಸ್ತೆಗೆ ಮೋರಿ ಹಾಕಿದ್ದು, ಅದರ ಮೇಲೆ ಕಸಕಡ್ಡಿಗಳು ತುಂಬಿಕೊಂಡಿದೆ. ಅಳಕೆಯಲ್ಲಿ ಹೊಸದಾಗಿ ಸೇತುವೆ ನಿರ್ಮಿಸಲಾಗಿದ್ದು, ಅದರ ಬದಿಯಲ್ಲಿ ಅನೇಕ ಪೈಪ್‌ಗ್ಳು ಹಾದು ಹೋಗಿರುವುದರಿಂದ ಅಲ್ಲೂ ಕಸಕಡ್ಡಿ ನಿಲ್ಲುವ ಸಾಧ್ಯತೆ ಇದೆ. ಪ್ರಸ್ತುತ ಅದನ್ನು ತೆರವು ಗೊಳಿಸಲಾಗಿದ್ದರೂ ಮುಂದಿನ ದಿನಗಳಲ್ಲಿ ಮತ್ತೆ ಅದೇ ರೀತಿ ಪುನರಾವರ್ತನೆಯಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

ತಡೆಗೋಡೆಗಳ ಕುಸಿತ
ತೋಡಿನ ಬದಿಯಲ್ಲಿ ಮಣ್ಣಿನ ಸವೆತ ಉಂಟಾಗಬಾರದು ಎಂಬ ಕಾರಣಕ್ಕೆ ಎರಡೂ ಬದಿಗಳಲ್ಲಿ ಕಲ್ಲಿನ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಅಳಕೆ, ಕುದ್ರೋಳಿ ಪ್ರದೇಶದಲ್ಲಿ ಅದು ಕುಸಿದು ತೋಡನ್ನು ಸೇರುತ್ತಿದೆ. ಇದು ಕೂಡ ನೀರು ಹರಿವಿಗೆ ತೊಂದರೆಯಾಗುತ್ತಿದೆ. ಈಗ ತೋಡಿನಲ್ಲಿರುವ ಮಣ್ಣನ್ನು ತೆಗೆಯದೇ ಇರುವುದರಿಂದ ನೀರು ಸಾಗಲು ಕಷ್ಟವಾಗುತ್ತದೆ. ಈ ರೀತಿ ವರ್ಷದಿಂದ ವರ್ಷಕ್ಕೆ ಮಣ್ಣಿನ ಪ್ರಮಾಣ ಹೆಚ್ಚಾಗಿ, ತೋಡಿನ ಆಳ ಕಿರಿದಾಗುತ್ತಿದೆ. ಬಲ್ಲಾಳ್‌ಬಾಗ್‌, ಕುದ್ರೋಳಿ, ಅಳಕೆ ಪ್ರದೇಶದಲ್ಲಿ ಅಲ್ಲಲ್ಲಿ ಮಣ್ಣು ತುಂಬಿರುವುದರಿಂದ ಹೆಚ್ಚಿನ ನೀರು ಬಂದಾಗ ತೋಡಿನಿಂದ ಹೊರಕ್ಕೆ ಹರಿಯುವ ಸಾಧ್ಯತೆ ಇದೆ.

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.