ಕೊಟ್ಟಾರಚೌಕಿ: ಅರ್ಧಕ್ಕೆ ನಿಂತ ಚರಂಡಿ ಕಾಮಗಾರಿ
Team Udayavani, Jun 9, 2018, 2:40 AM IST
ಮಹಾನಗರ: ನಗರದ ಕೊಟ್ಟಾರ ಚೌಕಿ ಹಾಗೂ ಕೋಡಿಕಲ್ ನಿಂದ ರಾಷ್ಟ್ರಿಯ ಹೆದ್ದಾರಿಯನ್ನು ಸಂಪರ್ಕಿಸುವ ಬೃಹತ್ ಚರಂಡಿಗಳ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅದನ್ನು ಪೂರ್ತಿಗೊಳಿಸುವಂತೆ ಸ್ಥಳೀಯ ಸುಬ್ರಹ್ಮಣ್ಯಪುರ ರೆಸಿಡೆಂಟ್ಸ್ ಸಮಿತಿಯು ಕಳೆದೊಂದು ವರ್ಷದಿಂದ ಹೋರಾಟ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಪ್ರವಾಹದ ಸ್ಥಿತಿ ಇರುವುದು ಕೂಡ ಇದಕ್ಕೆ ಕಾರಣ.! ಪಾಲಿಕೆಯು 2012ರಲ್ಲಿ ಈ ಎರಡು ಬೃಹತ್ ಚರಂಡಿ ನಿರ್ಮಾಣಕ್ಕೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಿತ್ತು. ವಿಶೇಷವೆಂದರೆ ಇಂದಿಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗಾಗಿ ತೋಡು ಕಿರಿದಾಗುತ್ತಿದ್ದು, ಮಳೆ ನೀರು ರಸ್ತೆಗೆ ಹರಿಯುತ್ತಿದೆ.
ಕೃತಕ ನೆರೆಗೆ ಇದೂ ಕಾರಣ
ಚರಂಡಿಯಲ್ಲಿ ಬೆಳೆದಿರುವ ಪೊದೆಗಳನ್ನು ತೆಗೆಯಲಾಗಿದ್ದು, ಹೂಳು ತೆಗೆದಿಲ್ಲ. ಹೀಗಾಗಿ ಮಣ್ಣು ತುಂಬಿ ಚರಂಡಿ ಮುಚ್ಚುವ ಅಪಾಯವಿದೆ. ಹೀಗಾಗಿ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ನಾವು ಆಗ್ರಹಿಸುತ್ತಿದ್ದೇವೆ ಎನ್ನುತ್ತಾರೆ ಸಮಿತಿ ಸದಸ್ಯ ಎಚ್.ವಿ. ಶೆಣೈ.
ಪಾಲಿಕೆ ಆಯುಕ್ತರಿಗೆ ಪತ್ರ
ಸಮಿತಿಯವರು ಜನಹಿತ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ ಪರಿಣಾಮ 2016ರ ಜನವರಿಯಲ್ಲಿ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ನಗರಾಭಿವೃದ್ಧಿ ಕೋಶದ ಯೋಜನ ನಿರ್ದೇಶಕರು ಸಮಸ್ಯೆ ಬಗೆಹರಿಸುವಂತೆ ಪಾಲಿಕೆಯ ಆಯುಕ್ತರಿಗೆ ಆದೇಶ ಪತ್ರವೊಂದನ್ನು ನೀಡಿದ್ದರು.
2012ರ ಕಾಮಗಾರಿ!
ಪಾಲಿಕೆಯು 2012ರಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಮೊದಲನೇ ಹಂತದಲ್ಲಿ ಉಳಿಕೆಯಾಗಿರುವ ಮೊತ್ತದಲ್ಲಿ ಪರಿಷ್ಕೃತ ಕ್ರಿಯಾಯೋಜನೆಯನ್ವಯ ಕಾಮಗಾರಿ ಕೈಗೊಂಡಿತ್ತು. ಕೊಟ್ಟಾರ ಚೌಕಿಯಿಂದ 4ನೇ ಮೈಲ್ ತನಕ ಮಳೆನೀರು ಬೃಹತ್ ಚರಂಡಿ ನಿರ್ಮಾಣಕ್ಕೆ 49.97 ಲಕ್ಷ ರೂ. ಹಾಗೂ ರಾ.ಹೆ.ಯಲ್ಲಿ ಕೋಡಿಕಲ್ ನಿಂದ ಬಂದು ಸೇರುವ ಕೂಡುರಸ್ತೆಯಲ್ಲಿ ಮಳೆನೀರು ಚರಂಡಿ ನಿರ್ಮಾಣ ಕಾಮಗಾರಿ 19.97 ಲಕ್ಷ ರೂ. ಅನುದಾನ ಮಂಜೂರಾಗಿತ್ತು. ಆದರೆ ಕೊಟ್ಟಾರ ಚೌಕಿಯಿಂದ ಕೋಡಿಕಲ್ ಸೇತುವೆವರೆಗಿನ ಕಾಮಗಾರಿ ಮಾತ್ರ ನಡೆಸಲಾಗಿದೆ.
ಈ ಕುರಿತು ದೂರು ಬಂದಿದೆ
ಕೊಟ್ಟಾರ ಚೌಕಿಯಲ್ಲಿ ತೋಡಿನ ಕಾಮಗಾರಿ ಅರ್ಧಕ್ಕೆ ನಿಂತಿರುವ ಕುರಿತು ಸುಬ್ರಹ್ಮಣ್ಯಪುರ ರೆಸಿಡೆಂಟ್ಸ್ ಸಮಿತಿಯವರಿಂದ ದೂರು ಬಂದಿದೆ. ದೂರನ್ನು ಪರಿಶೀಲನೆ ನಡೆಸಿದ್ದು, ಆದರೆ ಈಗ ತಾನು ವರ್ಗಾವಣೆಗೊಳ್ಳುತ್ತಿದ್ದೇವೆ. ನನ್ನ ಜಾಗಕ್ಕೆ ಬೇರೆ ಆಯುಕ್ತರು ಬರುತ್ತಿದ್ದು, ಅವರು ಗಮನಹರಿಸಬಹುದು.
– ಡಾ| ಭಾಸ್ಕರ್, ಆಯುಕ್ತರು, ಮುಡಾ
— ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ