20 ವರ್ಷಗಳ ಬಳಿಕ ಬರದ ಛಾಯೆ

ನದಿಯಲ್ಲಿ ಒಳಹರಿವು; ಅಂತರ್ಜಲ ಕುಸಿತ

Team Udayavani, Mar 24, 2019, 1:09 PM IST

5

ನಗರಕ್ಕೆ ನೀರು ಪೂರೈಕೆ ಮಾಡುತ್ತಿದ್ದ ಸೋಮಾವತಿ ನದಿಯ ಪ್ರದೇಶ ಸಂಪೂರ್ಣ ಬತ್ತಿಹೋಗಿದೆ.

ಬೆಳ್ತಂಗಡಿ : ಸುಮಾರು 20 ವರ್ಷಗಳ ಬಳಿಕ ಬೆಳ್ತಂಗಡಿ ನಗರದಲ್ಲಿ ಬರದ ಛಾಯೆ ಲಕ್ಷಣ ಕಂಡುಬರುತ್ತಿದ್ದು, ಅಂತರ್ಜಲ ಮಟ್ಟ ಗಣನೀಯ ಕುಸಿತ ಕಂಡಿದೆ. ಇದರ ಪರಿಣಾಮ ನಗರದ ಜನತೆಗೆ ಕುಡಿಯುವ ನೀರು ಪೂರೈಕೆಗೆ ಬೆಳ್ತಂಗಡಿ ಪ.ಪಂ. ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ನಗರಕ್ಕೆ ನೀರು ಪೂರೈಕೆ ಮಾಡುತ್ತಿದ್ದ ಸೋಮಾವತಿ ನದಿಯಲ್ಲಿ ನೀರಿನ ಒಳಹರಿವು ಸಂಪೂರ್ಣ ನಿಂತಿದ್ದು, ನೀರೆತ್ತಲು ನಿರ್ಮಿಸಿದ್ದ ತಾತ್ಕಾಲಿಕ ಕಟ್ಟದಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ಕೊಳವೆಬಾವಿಗಳೇ ಗತಿಯಾಗಿವೆ. ಆದರೆ ಅಲ್ಲೂ ಅಂತರ್ಜಲ
ಬತ್ತಿಹೋದರೆ ಪರಿಸ್ಥಿತಿ ವಿಕೋಪಕ್ಕೆ ತೆರಳುವ ಸಾಧ್ಯತೆ ಇದೆ. ಈ ಹಿಂದೆ ಪ್ರತಿದಿನ 1.05 ಎಂಎಲ್‌ಡಿ ನೀರು ಪೂರೈಕೆ ಮಾಡಲಾಗುತ್ತಿದ್ದು, ಈಗ ಅದನ್ನು 0.75 ಎಂಎಲ್‌ಡಿಗೆ ಇಳಿಸಲಾ ಗಿದೆ. ಅಂದರೆ ಪ್ರತಿಯೊಬ್ಬರಿಗೂ 100 ಎಲ್‌ಪಿಸಿಡಿ ಆಧಾರದಲ್ಲಿ ಪೂರೈಕೆ ಮಾಡ ಲಾಗುತ್ತಿದೆ. ಪ.ಪಂ. ವ್ಯಾಪ್ತಿಯಲ್ಲಿ 14 ಕೊಳವೆ ಬಾವಿಗಳಿದ್ದು, 11ರಿಂದ ಮಾತ್ರ ನೀರು ತೆಗೆಯಲಾಗುತ್ತಿದೆ. ಆದರೆ ವಿದ್ಯುತ್‌ ವ್ಯತ್ಯಯಗೊಂಡರೆ ಪೂರೈಕೆಯೂ ಕಷ್ಟವಾ ಗಲಿದೆ. ಪ್ರಸ್ತುತ 3 ಕೊಳವೆಬಾವಿ ಪ್ರಸ್ತಾ ವನೆಗೆ ಮಂಜೂರಾತಿ ಸಿಕ್ಕಿದ್ದು, ಆದರೆ ಅದನ್ನು 1 ತಿಂಗಳ ಬಳಿಕವೇ ಕೊರೆಯ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಸರು ತೆಗೆದರೂ ಲಾಭವಿಲ್ಲ
ಪಟ್ಟಣ ಪಂಚಾಯತ್‌ನ ಜಾಕ್‌ ವೆಲ್‌ ಬಳಿ ಸೋಮಾವತಿ ನದಿಗೆ ತಾತ್ಕಾಲಿಕ ಕಟ್ಟ ನಿರ್ಮಿಸಿ ನೀರು ತೆಗೆಯಲಾಗುತ್ತಿದ್ದು, ಈ ಹಿಂದೆ ಪ್ರತಿನಿತ್ಯ ಸುಮಾರು 4 ಲಕ್ಷ ಲೀ.ನಷ್ಟು ನೀರನ್ನು ನದಿಯಿಂದ ತೆಗೆಯಲಾಗುತ್ತಿತ್ತು.

ಆದರೆ ಈಗ 1 ಲಕ್ಷ ಲೀ. ಕೂಡಾ ಕಷ್ಟದಲ್ಲಿ ಸಿಗುತ್ತಿದೆ. ಹೀಗಾಗಿ ನೀರು ಸಂಗ್ರಹವಾಗಬೇಕು ಎಂದು ಅಲ್ಲಿನ ಸುತ್ತಮುತ್ತಲ ಕೆಸರನ್ನು ಜೆಸಿಬಿ ಮೂಲಕ ತೆಗೆದರೂ ದೊಡ್ಡ ಪ್ರಯೋಜನವಾಗಿಲ್ಲ. ಒಳಹರಿವು ಪೂರ್ತಿ ನಿಂತಿರುವುದರಿಂದ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

1,423 ಕನೆಕ್ಷನ್‌ ಮಾತ್ರ
ಬೆಳ್ತಂಗಡಿ ನಗರದ ಜನಸಂಖ್ಯೆ 2011ರ ಜನಗಣತಿಯ ಪ್ರಕಾರ 7,746 ಆಗಿದ್ದು, ಒಟ್ಟು ಸುಮಾರು 3,300ರಷ್ಟು ಮನೆಗಳಿವೆ. ಆದರೆ ವಾಣಿಜ್ಯ ಸಂಪರ್ಕಗಳೂ ಸೇರಿ ಪಟ್ಟಣ ಪಂಚಾಯತ್‌ ನಿಂದ ನೀರಿನ ಸಂಪರ್ಕ ಪಡೆದಿರುವುದು ಕೇವಲ 1,423 ಮಂದಿ ಮಾತ್ರ. ಅಂದರೆ ಉಳಿದವರಿಗೆ ಸ್ವಂತ ಕೊಳವೆಬಾವಿ, ಬಾವಿಗಳಿವೆ ಎಂದರ್ಥ. ಇಲ್ಲದೇ ಇರುತ್ತಿದ್ದರೆ ಈಗಾಗಲೇ ಬೆಳ್ತಂಗಡಿ ನಗರ ನೀರಿಲ್ಲದೆ ಪರದಾಡಬೇಕಿತ್ತು.

ಪೋಲು ಮಾಡದಂತೆ ಮನವಿ
ಬೆಳ್ತಂಗಡಿ ನಗರದಲ್ಲಿ ಕಟ್ಟಡ ಕಾಮಗಾರಿಗಾಗಿ ಸುಮಾರು 30 ನೀರಿನ ಸಂಪರ್ಕ ನೀಡಲಾಗಿದ್ದು, ಪಟ್ಟಣ ಪಂಚಾಯತ್‌ ಅಂತಹವರಿಗೆ ಈಗಾಗಲೇ ನೋಟಿಸ್‌ ನೀಡಿ ನೀರು ಬಳಕೆ ಮಾಡದಂತೆ ಮನವಿ ಮಾಡಿದೆ. ಜತೆಗೆ ಪಟ್ಟಣ ಪಂಚಾಯತ್‌ ನಿಂದ ನೀರು ಪಡೆಯುವ ಎಲ್ಲರೂ ನೀರಿನ ಬಳಕೆ ಕಡಿಮೆ ಮಾಡಿ, ವಾಹನ ಹಾಗೂ ಕೃಷಿ, ಹೂವಿನ ಗಿಡಗಳಿಗೆ ನೀರು ಹಾಕಬಾರದು. ಜತೆಗೆ ಇತರ ಯಾವುದೇ ರೀತಿಯಲ್ಲಿ ನೀರು ಪೋಲು ಮಾಡದಂತೆ ಪಟ್ಟಣ ಪಂಚಾಯತ್‌ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಹಿಂದೆ 8 ಗಂಟೆ, ಈಗ ಬರೀ 2 ಗಂಟೆ
ಬೇಸಗೆ ಆರಂಭದ ಮೊದಲು ಪ.ಪಂ. ಬೆಳಗ್ಗೆ 6ರಿಂದ ಅಪರಾಹ್ನ 2ರ ವರೆಗೆ ಅಂದರೆ ದಿನಕ್ಕೆ ಒಟ್ಟು 8 ಗಂಟೆಗಳ ಕಾಲ ನೀರು ಪೂರೈಕೆ ಮಾಡುತ್ತಿತ್ತು. ಆದರೆ ಈಗ ನೀರಿನ ಲಭ್ಯತೆ ಆಧಾರದಲ್ಲಿ ಬರೀ 2 ಗಂಟೆ ಮಾತ್ರ ನೀರು ಕೊಡಬೇಕಾದ ಸ್ಥಿತಿ ಇದೆ. ಆದರೆ ಪೂರ್ಣ ಪ್ರಮಾಣದ ಮಳೆಗಾಲ ಆರಂಭಕ್ಕೆ ಇನ್ನೂ 2 ತಿಂಗಳು ಬಾಕಿ ಇದ್ದು, ಮುಂದೆ ಪರಿಸ್ಥಿತಿ ಹೇಗಾಗಬಹುದೆಂಬ ಭೀತಿ ಇದೆ.

ಗಣನೀಯ ಇಳಿಕೆ
ಸುಮಾರು 20 ವರ್ಷಗಳ ಬಳಿಕ ನದಿಯಲ್ಲಿ ನೀರು ಗಣನೀಯ ಇಳಿಕೆಯಾಗಿದ್ದು, ಈಗ ಕೊಳವೆ ಬಾವಿಗೆ ಹೆಚ್ಚಿನ ಒತ್ತು ನೀಡಿ ಜನರಿಗೆ ತೊಂದರೆ ಆಗದಂತೆ ನೀರು ಪೂರೈಕೆಗೆ ಗರಿಷ್ಠ ಪ್ರಯತ್ನ ಮಾಡುತ್ತಿದ್ದೇವೆ. ನಿತ್ಯ ನೀರಿನ ಪ್ರಮಾಣ ಒಟ್ಟು 0.75 ಎಂಎಲ್‌ಡಿಗೆ ಇಳಿದಿದೆ. ಪ.ಪಂ.ನ ಜನತೆಯೂ ನೀರು ಪೋಲು ಮಾಡದೆ ಸಹಕಾರ ನೀಡಬೇಕಿದೆ.
– ಮಹಾವೀರ ಆರಿಗ
ಎಂಜಿನಿಯರ್‌, ಪ.ಪಂ. ಬೆಳ್ತಂಗಡಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.