ಚುನಾವಣೆಯ ಹಿನ್ನೆಲೆ: ಸಾರಿಗೆ ವ್ಯವಸ್ಥೆಯಲ್ಲಿ ವ್ಯತಯ


Team Udayavani, May 12, 2018, 12:18 PM IST

12-May-7.jpg

ಪುತ್ತೂರು : ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಸಂಚಾರ ವ್ಯವಸ್ಥೆಯ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಿರುವುದರಿಂದ ಶುಕ್ರ ವಾರ ಬಸ್‌ಗಳ ಸಂಚಾರದಲ್ಲಿ ಕೊರತೆ ಕಂಡು ಬಂದಿದ್ದು, ಶನಿವಾರವೂ ಸಂಚಾರ ವ್ಯವಸ್ಥೆ ಯಲ್ಲಿ ಒಂದಷ್ಟು ವ್ಯತ್ಯಾಸ, ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಪುತ್ತೂರು, ಸುಳ್ಯ ತಾಲೂಕು ವ್ಯಾಪ್ತಿಗಳು ಗ್ರಾಮಾಂತರ ಪ್ರದೇಶಗಳಾಗಿರುವುದರಿಂದ ಸರಕಾರಿ ಸಾರಿಗೆ ಬಸ್ಸುಗಳು, ಗ್ರಾಮಾಂತರ ಭಾಗಗಳಿಗೆ ಸರ್ವಿಸ್‌ ನಡೆಸುವ ಜೀಪು, ಮ್ಯಾಕ್ಸಿಕ್ಯಾಬ್‌, ಟ್ಯಾಕ್ಸಿಗಳು ಪ್ರಯಾ ಣಿಕರ ಸಂಚಾರ ವ್ಯವಸ್ಥೆಗೆ ಆಧಾರ. ಚುನಾವಣೆಯ ಹಿನ್ನೆಲೆಯಲ್ಲಿ ಇಂತಹ ಸುಮಾರು 500 ವಾಹನಗಳನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಈ ಕಾರಣದಿಂದ ಇಂತಹ ವ್ಯವಸ್ಥೆಗಳನ್ನು ಅವಲಂಬಿಸುವವರು ಶನಿವಾರ ತೊಂದರೆಪಡುವುದು ಖಚಿತ.

ಶುಕ್ರವಾರ ರಶ್‌
ಸರಕಾರಿ ರಜೆ ಘೋಷಣೆ ಮಾಡಿರುವುದು, ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ರಜಾ ಅವಧಿ, ಶುಭ ಸಮಾರಂಭಗಳು ಶನಿವಾರ ಕಡಿಮೆ ನಿಗದಿಯಾಗಿರುವ ಕಾರಣ ಸಾರ್ವಜನಿಕ ಸಂಚಾರ ವ್ಯವಸ್ಥೆ ಯಲ್ಲಿ ಒಂದಷ್ಟು ವ್ಯತ್ಯಯವಾದರೂ ದೊಡ್ಡ ಮಟ್ಟಿನ ತೊಂದರೆಯಾಗುವ ಸಾಧ್ಯತೆ ಇಲ್ಲ. ಶುಕ್ರವಾರ ಕೆಲವು ಕಡೆ ಬಸ್‌ ಸಂಚಾರ ವಿರಳವಾಗಿದ್ದು, ಬಸ್‌ನಲ್ಲಿ ರಶ್‌ ಕಂಡು ಬಂತು.

ಚುನಾವಣೆಯ ಕರ್ತವ್ಯದ ಹಿನ್ನೆಲೆಯಲ್ಲಿ ಪುತ್ತೂರು ಪ್ರಾದೇಶಿಕ ಸಾರಿಗೆ ಕಚೇರಿಯ ಮೂಲಕ ಒಟ್ಟು 322 ವಾಹನಗಳನ್ನು ಬಳಕೆ ಮಾಡಲಾಗಿದೆ. ಚುನಾವಣೆ ಘೋಷಣೆ ಯಾದ ತತ್‌ ಕ್ಷಣದಲ್ಲಿ ಪುತ್ತೂರಿಗೆ 31 ಹಾಗೂ ಸುಳ್ಯಕ್ಕೆ 30 ಜೀಪುಗಳನ್ನು, ಪೊಲೀಸ್‌ ಇಲಾಖೆಗೆ ಪುತ್ತೂರಿಗೆ 32, ಸುಳ್ಯಕ್ಕೆ 30 ಜೀಪುಗಳನ್ನು, ಮಸ್ಟರಿಂಗ್‌ ಸಂದರ್ಭದಲ್ಲಿ ಪುತ್ತೂರಿಗೆ 25 ಹಾಗೂ ಸುಳ್ಯಕ್ಕೆ 38 ಮ್ಯಾಕ್ಸಿ ಕ್ಯಾಬ್‌, ಮಂಗಳೂರು ಡಿಆರ್‌ಗೆ 9 ಜೀಪು, 6 ಕಾರು, 6 ಮ್ಯಾಕ್ಸಿ ಕ್ಯಾಬ್‌ಗಳು, ಪುತ್ತೂರಿಗೆ 34 ಹಾಗೂ ಸುಳ್ಯಕ್ಕೆ 29 ಕೆಎಸ್‌ಆರ್‌ಟಿಸಿ
ಬಸ್ಸುಗಳನ್ನು ಆರ್‌ಟಿಒ ಕಚೇರಿ ಮೂಲಕ ನೀಡಲಾಗಿದೆ.

ವಿಭಾಗದಿಂದ 182 ಬಸ್ಸುಗಳು
ಪುತ್ತೂರು ಕೆಎಸ್‌ಆರ್‌ಸಿ ವಿಭಾಗದಿಂದ ಒಟ್ಟು 182 ಬಸ್ಸುಗಳನ್ನು ಚುನಾವಣಾ ಕರ್ತವ್ಯಕ್ಕಾಗಿ ಕಳುಹಿಸಲಾಗಿದೆ. ಕೆಎಸ್‌ಆರ್‌ ಟಿಸಿ ವಿಭಾಗದ ಪುತ್ತೂರು, ಸುಳ್ಯ, ಬೆಳ್ತಂಗಡಿ ಘಟಕಗಳಿಗೆ 98 ಹಾಗೂ ಮಡಿಕೇರಿ ಘಟಕಕ್ಕೆ 84 ಬಸ್ಸು ಗಳನ್ನು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ.

ತೊಂದರೆ ಕಡಿಮೆ
ಸ್ಥಳೀಯವಾಗಿ ಸಂಚರಿಸುವ ಬಸ್ಸುಗಳಲ್ಲಿ ವ್ಯತ್ಯಯವಾಗುವುದಿಲ್ಲ. ದೂರ ಸಂಚಾರದ ಬಸ್ಸುಗಳನ್ನೇ ಹೆಚ್ಚಾಗಿ ಚುನಾವಣಾ ಕರ್ತವ್ಯಕ್ಕೆ ನೀಡಲಾಗಿದೆ. ಸರಕಾರಿ ರಜೆ ಘೋಷಣೆ ಮಾಡಿರುವುದರಿಂದ ದೊಡ್ಡ ಮಟ್ಟದಲ್ಲಿ ತೊಂದರೆ ಎದುರಾಗದು.
ನಾಗರಾಜ್‌ ಶಿರಾಲಿ
ಕೆಎಸ್‌ಆರ್‌ಟಿಸಿ ವಿಭಾಗ
ವ್ಯವಸ್ಥಾಪಕರು

ಅನಿವಾರ್ಯ
ಚುನಾವಣೆ ಘೋಷಣೆಯಾದಂದಿನಿಂದ ನಿಯಮದಂತೆ ಖಾಸಗಿ ಹಾಗೂ ಟೂರಿಸ್ಟ್‌, ಸರಕಾರಿ ವಾಹನಗಳು ಸೇರಿ 322ವಾಹನಗಳನ್ನು ಚುನಾವಣಾ ಕರ್ತವ್ಯಕ್ಕೆ ಬಳಸಲಾಗಿದೆ. ಸಂಚಾರ ವ್ಯವಸ್ಥೆಯಲ್ಲಿ ಒಂದಷ್ಟು ಸಮಸ್ಯೆಯಾದರೂ ಇದು ಅನಿವಾರ್ಯ. 
ಫೆಲಿಕ್ಸ್‌ ಡಿ’ಸೋಜಾ
ಆರ್‌ಟಿಒ, ಪುತ್ತೂರು

ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.