6 ಹೊಸ ತಾಲೂಕು ಪಂಚಾಯತ್ ಅಸ್ತಿತ್ವಕ್ಕೆ: ಮೊದಲ ಚುನಾವಣೆಯತ್ತ ನೋಟ
Team Udayavani, Nov 16, 2019, 4:27 AM IST
ಮಂಗಳೂರು ತಾಲೂಕು ಪಂಚಾಯತ್ ಕಚೇರಿ ಕಟ್ಟಡ.
ಮಂಗಳೂರು: ಕರಾವಳಿಯಲ್ಲಿ ಘೋಷಣೆಯಾಗಿರುವ 6 ತಾಲೂಕಿನಲ್ಲಿ ಹೊಸದಾಗಿ ತಾಲೂಕು ಪಂಚಾಯತ್ಗಳು ಅಸ್ತಿತ್ವಕ್ಕೆ ಬಂದಿದ್ದು, ಚುನಾವಣೆಗೆ ಬೇಕಾದ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವತ್ತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗಮನಹರಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ, ಕಡಬ ಮತ್ತು ಉಡುಪಿ ಜಿಲ್ಲೆಯ ಬ್ರಹ್ಮಾವರ, ಕಾಪು, ಬೈಂದೂರು, ಹೆಬ್ರಿಗಳನ್ನು ತಾಲೂಕಾಗಿ ವರ್ಷಗಳ ಹಿಂದೆ ಸರಕಾರ ಘೋಷಿಸಿತ್ತು. ಈಗ ಇಲ್ಲಿ ಹೊಸ ತಾಲೂಕು ಪಂಚಾಯತ್ ರಚನೆಗೆ ಆದೇಶಿಸಿದೆ. ಈಗಿನ ತಾ.ಪಂ. ಸದಸ್ಯರಿಗೆ ಇನ್ನು 1 ವರ್ಷ 3 ತಿಂಗಳು ಕಾಲಾವಧಿ ಇದ್ದು, ಅದರೊಳಗೆ ಚುನಾವಣೆ ನಡೆಯುವ ಸಾಧ್ಯತೆಯಿದೆ.
ಹೊಸ ತಾ.ಪಂ. ಮತ್ತು ಈಗ ಇರುವ ತಾ.ಪಂ.ಗಳಿಗೆ ಸದಸ್ಯರನ್ನು ಅಧಿಸೂಚಿಸುವ ಅಧಿಕಾರವನ್ನು ಮೈಸೂರು ಪ್ರಾದೇಶಿಕ ಆಯುಕ್ತರಿಗೆ ನೀಡಲಾಗಿದೆ. ಹೀಗಾಗಿ ಹೊಸ ತಾ.ಪಂ. ಸದಸ್ಯರಿಗೆ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸಿ ಹೊಸ ತಾಲೂಕು ರಚಿಸಲು ಅವಕಾಶ ಸಿಗಲಿದೆ.
ಈಗಾಗಲೇ ಆರು ತಾಲೂಕು ವ್ಯಾಪ್ತಿಗೆ ಬರುವ ತಾ.ಪಂ. ಸದಸ್ಯರ ಭೌಗೋಳಿಕ ಪರಿಧಿಯನ್ನು ವಿಂಗಡಿಸಲಾಗಿದ್ದು, ತಾ.ಪಂ. ಆಗಿಯೂ ಆದೇಶಿಸಲಾಗಿದೆ. ಆದರೆ ಎಲ್ಲ ತಾ.ಪಂ. ಆಡಳಿತಾವಧಿ ಮುಗಿಯುವವರೆಗೆ ಹಾಲಿ ತಾ.ಪಂ.ನ ಸದಸ್ಯರು ಹಿಂದಿನ ತಾಲೂಕು ಪಂಚಾಯತ್ಗಳ ಸಭೆಗಳಲ್ಲಿ ಭಾಗವಹಿಸಲು ಅವಕಾಶವಿದೆ.
ಎರಡು ಸಾಧ್ಯತೆ
ಘೋಷಣೆಯಾದ ಹೊಸ ತಾ.ಪಂ. ವ್ಯಾಪ್ತಿಯಲ್ಲಿ ಕಟ್ಟಡ ಸ್ವಂತ, ಬಾಡಿಗೆ ಲಭ್ಯವಿದ್ದರೆ ಅಥವಾ ಶೀಘ್ರ ಲಭ್ಯವಾದರೆ ಆ ಹೊತ್ತಿಗೆ ಅಲ್ಲಿ ತಾ.ಪಂ. ಅಸ್ತಿತ್ವಕ್ಕೆ ಬರಲು ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಯನ್ನು ಮೈಸೂರು ಪ್ರಾದೇಶಿಕ ಆಯುಕ್ತರು ಪ್ರಕಟಿಸಲಿದ್ದಾರೆ. ಹಾಲಿ ಸದಸ್ಯರ ಅವಧಿ ಮುಗಿಯಲು ಬಾಕಿ ಇರುವ ಸಮಯದಲ್ಲಿ ಹೊಸ ಕಟ್ಟಡ, ಬಾಡಿಗೆ ಕಟ್ಟಡ ವ್ಯವಸ್ಥೆಯನ್ನು ಜಿ.ಪಂ. ಮಾಡಿ, ಎಲ್ಲ ತಾ.ಪಂ.ಗಳಿಗೆ ಸಾರ್ವತ್ರಿಕ ಚುನಾವಣೆ ವೇಳೆಯೇ ಹೊಸ ತಾ.ಪಂ.ಗೂ ಚುನಾವಣೆ ನಡೆಯಬಹುದು ಎಂದು ಜಿ.ಪಂ. ಮೂಲಗಳು ತಿಳಿಸಿವೆ.
ಅಸ್ತಿತ್ವದಲ್ಲಿರುವ ತಾ.ಪಂ.ಗಳಲ್ಲಿ ನಿಹಿತವಾಗಿ ಖರ್ಚು ಮಾಡದೆ ಉಳಿದ ನಿಧಿ ಮತ್ತು ಎಲ್ಲ ಇತರ ಸ್ವತ್ತುಗಳನ್ನು, ಸಂಬಂಧಪಟ್ಟ ಕಾರ್ಯ ನಿರ್ವಾಹಕ ಅಧಿಕಾರಿಗಳು ಶೇ.50ರಷ್ಟು ನಿಧಿಯನ್ನು ಪ್ರದೇಶದ ವಿಸ್ತೀರ್ಣದ ಆಧಾರದ ಮೇಲೆ ಮತ್ತು ಶೇ.50ರಷ್ಟು ನಿಧಿಯನ್ನು ಜನಸಂಖ್ಯೆ ಆಧಾರದ ಮೇಲೆ ವಿಭಜಿಸಲು ಸರಕಾರ ಸೂಚಿಸಿದೆ.
ಘೋಷಣೆ ಮಾಡಿರುವ ಹೊಸ ತಾಲೂಕಿಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಅಧಿಕಾರಿ ಗಳು-ಸಿಬಂದಿ ನೇಮಕ ವಾಗಿಲ್ಲ. ಇದರ ಮಧ್ಯೆಯೇ ಹೊಸ ತಾ.ಪಂ. ಘೋಷಣೆ ಮಾಡಿರುವ ಕಾರಣದಿಂದ ಮುಂಬರುವ ಹೊಸ ಸದಸ್ಯರಿಗೆ ಮೂಲಸೌಕರ್ಯ ಸಮಸ್ಯೆಯೇ ಬಹುದೊಡ್ಡ ಸವಾಲಾಗಲಿದೆ.
ಹೊಸ ತಾ.ಪಂ.- ಹೊಸ ರಾಜಕೀಯ !
ಹೊಸ ತಾ.ಪಂ. ರಚನೆಯಾದ ಹಿನ್ನೆಲೆಯಲ್ಲಿ ರಾಜಕೀಯ ಲೆಕ್ಕಾಚಾರಗಳು ಆರಂಭವಾಗಿವೆ. ಹಾಲಿ ಇರುವ ತಾಲೂಕಿನ ಕೆಲವು ಕ್ಷೇತ್ರಗಳು ಹೊಸ ತಾ.ಪಂ.ಗೆ ಸೇರ್ಪಡೆಗೊಂಡ ಕಾರಣ ತಾ.ಪಂ.ನಲ್ಲಿ ಪಕ್ಷಗಳ ಬಲಾಬಲವೂ ವ್ಯತ್ಯಾಸವಾಗುವ ಸಾಧ್ಯತೆಯಿದೆ.
ಈಗಾಗಲೇ ಘೋಷಣೆ ಯಾದ ಹೊಸ ತಾಲೂಕುಗಳಲ್ಲಿ ತಾ.ಪಂ. ರಚನೆಗೆ ಸರಕಾರ ಆದೇಶಿಸಿದೆ. ಹಾಲಿ ತಾ.ಪಂ.ನ ಆಡಳಿತಾವಧಿ ಮುಗಿಯುವವರೆಗೆ ಸದಸ್ಯರು ಅಲ್ಲೇ ಸದಸ್ಯರಾಗಿರುತ್ತಾರೆ ಅಥವಾ ಘೋಷಣೆಯಾದ ಹೊಸ ತಾಲೂಕಿನಲ್ಲಿ ಸೂಕ್ತ ಕಟ್ಟಡ ವ್ಯವಸ್ಥೆಗಳಿದ್ದರೆ ಅಲ್ಲಿಗೆ ಈಗಲೇ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಜಾರಿಗೆ ತಂದು ಹೊಸ ತಾ. ಪಂ. ಅಸ್ತಿತ್ವಕ್ಕೆ ಬರಲಿದೆ. ಬಳಿಕ ಅಲ್ಲಿ ಚುನಾವಣೆ ನಡೆಯಲಿದೆ.
– ಡಾ| ಸೆಲ್ವಮಣಿ ಆರ್. ದ.ಕ. ಜಿ.ಪಂ. ಸಿಇಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula: “ಫ್ಯಾನ್-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!
Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ
Moodabidri: ಬೃಹತ್ ಜೈನ ಆರಾಧನಾ ಕೋಶದ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ
Mangaluru: CCB ಪೊಲೀಸರ ಕಾರ್ಯಾಚರಣೆ… ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ
ಬಸ್ಗಳಿಗೆ ಬಾಗಿಲು ಅಳವಡಿಕೆ ; ಡಿಸಿ ಗಡುವು ಸಮೀಪಿಸಿದರೂ ಬಗೆಹರಿಯದ ಗೊಂದಲ!
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು