ವಿದ್ಯುತ್ ಶಾಕ್ ; ಯುವಕ ಸಾವು
Team Udayavani, Oct 2, 2019, 9:51 PM IST
ಸಾಂದರ್ಭಿಕ ಚಿತ್ರ.
ಸುಳ್ಯ : ಮಂಡೆಕೋಲು ಗ್ರಾಮದ ಪೇರಾಲಿನಲ್ಲಿ ಎಚ್ ಟಿ ಲೈನ್ ಗೆ ಅಲ್ಯೂಮಿನಿಯಂ ಏಣಿ ತಗುಲಿ ಯವಕನೋರ್ವ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.
ಮಂಡೆಕೋಲು ಗ್ರಾಮದ ಬಾಳೆಕೋಡಿ ಹೊನ್ನಪ್ಪ ಗೌಡರ ಪುತ್ರ ಸೀತಾರಾಮ (36)ಮೃತಪಟ್ಟ ದುರ್ದೈವಿ.
ಬಾಳೆಕೋಡಿ ಕೃಷ್ಣಪ್ಪ ಅವರ ತೋಟಕ್ಕೆತೆರಳಿದ್ದ ಸೀತಾರಾಮ ಅವರು ಹಿಡಿದುಕೊಂಡಿದ್ದ ಏಣಿ ಆಕಸ್ಮಿಕವಾಗಿ ಹೈಟನ್ಷನ್ ತಂತಿಗೆ ತಗುಲಿ ಶಾಕ್ ಹೊಡೆದಿದೆ.
ತೀವ್ರವಾಗಿ ಗಾಯಗೊಂಡ ಅವರನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆತಂದು, ಕೆವಿಜಿ ಆಸ್ಪತ್ರೆಗೆ ಕರೆ ತರಲಾಯಿತು. ಆ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟದಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.