ಪುತ್ತೂರಿನ ವಿದ್ಯಾರ್ಥಿಯ ಆಂಗ್ಲ ಕವನ 8ನೇ ತರಗತಿ ಪಠ್ಯದಲ್ಲಿ
Team Udayavani, Oct 30, 2022, 8:45 AM IST
ಪುತ್ತೂರು: ತಾಲೂಕಿನ ಬನ್ನೂರು ನಿವಾಸಿ, ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ ಬಿ. ದಿವಿತ್ ಯು. ರೈ ಅವರು ರಚಿಸಿದ ಆಂಗ್ಲ ಕವನವೊಂದು 8ನೇ ತರಗತಿಗೆ ಪಠ್ಯವಾಗಿದೆ.
ದಿವಿತ್ ಅವರು ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆ ಯಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ಪ್ರಕಟಿಸಿದ್ದ “ಸಿಂಪಲ್ ಲೈಫ್’ ಎಂಬ ಆಂಗ್ಲ ಕವನ ಸಂಕಲನದ “ಮದರ್ ಅರ್ಥ್’ ಕವನವನ್ನು ಸರಕಾರ 8ನೇ ತರಗತಿಯ ಕಲಿಕಾ ಚೇತರಿಕೆ ಪಠ್ಯದಲ್ಲಿ ಮುದ್ರಿಸಿದೆ.
ದಿವಿತ್ ಹಾರಾಡಿ ಸರಕಾರಿ ಶಾಲೆಯಲ್ಲಿ 6ನೇ ತರಗತಿಯಲ್ಲಿರುವಾಗಲೇ “ಡ್ನೂ ಡ್ರಾಪ್ಸ್’ ಎಂಬ ಆಂಗ್ಲ ಕವನ ಸಂಕಲನ ಹೊರತಂದಿದ್ದರು. ಹಾರಾಡಿ ಸರಕಾರಿ ಶಾಲೆಯ ಐವರು ಶಿಕ್ಷಕಿಯರನ್ನು ಹೆಚ್ಚುವರಿ ಕಾರಣದಲ್ಲಿ ವರ್ಗಾಯಿ ಸಿದ ಸಂದರ್ಭ ಪ್ರತಿಭಟಿಸಿ ಅಂದಿನ ಗೃಹಸಚಿವ ಡಾ| ಜಿ. ಪರಮೇಶ್ವರ್ ಅವರ ಗಮನ ಸೆಳೆದಿದ್ದರು. ಬಳಿಕ ದಿವಿತ್ ಮನವಿ ಮೇರೆಗೆ ಶಾಲೆಯ ವಾರ್ಷಿ ಕೋತ್ಸವದಲ್ಲಿ ಭಾಗಿಯಾಗಿದ್ದ ಡಾ| ಪರಮೇಶ್ವರ್ ಶಾಲಾ ಕೊಠಡಿಗಾಗಿ 10 ಲಕ್ಷ ರೂ. ಅನುದಾನ ನೀಡಿದ್ದರು. ಅಲ್ಲದೆ ದಿವಿತ್ ಶಿಕ್ಷಣದ ಖರ್ಚನ್ನು ಭರಿಸುವ ಭರವಸೆ ನೀಡಿದ್ದರು. ಈತ ಸ್ಕೌಟ್ ಗೈಡ್ ಜಾಂಬೂರಿಯಲ್ಲಿ ಭಾಗವಹಿಸಲು ಜಪಾನ್ಗೆ ತೆರಳುವ ಖರ್ಚನ್ನೂ ಪರಮೇಶ್ವರ್ ಭರಿಸಿದ್ದರು. ಇವರು ಉದಯ ಕುಮಾರ್ ರೈ ನೀಲಂಪಾಡಿ ಮತ್ತು ಪ್ರತಿಮಾ ಯು. ರೈ ಅವರ ಪುತ್ರ.
ಇದನ್ನೂ ಓದಿ : ಜಮ್ಮು – ಕಾಶ್ಮೀರದ ಕಿಶ್ತ್ವಾರ್ ಸುರಂಗದಲ್ಲಿ ಭೂಕುಸಿತ : 4 ಸಾವು, 6 ಮಂದಿಗೆ ಗಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ