ಯುವ ಬ್ರಿಗೇಡ್‌ನಿಂದ ಪ್ರತಿ ರವಿವಾರ ಕಡಬ ಪೇಟೆ ಸ್ವತ್ಛತೆ


Team Udayavani, Jul 16, 2019, 5:40 AM IST

yuva-brigade

ಕಡಬ: ಕೆಲ ಸಮಯದಿಂದ ಕಡಬ ಪೇಟೆಯಲ್ಲಿ ಪ್ರತಿ ಆದಿತ್ಯವಾರ ಕಡುನೀಲಿ ಬಣ್ಣದ ಸಮವಸ್ತ್ರ ಧರಿಸಿದ ಯುವ ಬ್ರಿಗೇಡ್‌ನ‌ ಯುವಕರ ತಂಡ ಕೈಗೆ ಗ್ಲೌಸ್‌ ಹಾಕಿಕೊಂಡು ಚರಂಡಿ, ಅಂಗಡಿಗಳ ಮುಂಭಾಗ, ರಸ್ತೆ, ಬಸ್‌ ತಂಗುದಾಣ ಮುಂತಾದೆಡೆ ಕಸ ತೆಗೆದು ಶುಚಿ ಮಾಡುವ ಮೂಲಕ ಸಾರ್ವಜನಿಕರಲ್ಲಿ ಸ್ವತ್ಛತೆಯ ಕುರಿತು ಜಾಗೃತಿ ಮೂಡಿಸುವ ವಿಶಿಷ್ಟ ಪ್ರಯತ್ನದಲ್ಲಿ ತೊಡಗಿದೆ.

ಆರಂಭದಲ್ಲಿ 11 ಮಂದಿ ಯುವಕರ ತಂಡ ಆರಂಭಿಸಿದ ಈ ಸ್ವತ್ಛತಾ ಅಭಿಯಾನದಲ್ಲಿ ಇಂದು ವಿದ್ಯಾರ್ಥಿಗಳು, ಆಟೋ ಚಾಲಕರು, ಖಾಸಗಿ ಉದ್ಯೋಗಿಗಳು ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಸಮಾಜಮುಖೀ ಚಿಂತನೆಯ ಯುವಕರು ಸೇರಿಕೊಂಡಿದ್ದಾರೆ. ಕಳೆದ ಜೂ. 16ರ ರವಿವಾರ ಚಾಲನೆ ಪಡೆದ ಈ ಕಾರ್ಯಕ್ರಮ ಬಳಿಕ ಪ್ರತಿ ರವಿವಾರವೂ ನಡೆದು ಇದೀಗ 5ನೇ ಸುತ್ತಿನ ಸ್ವತ್ಛತಾ ಕಾರ್ಯ ಮುಗಿದಿದೆ.

ಯುವ ಬ್ರಿಗೇಡ್‌ನ‌ ದ.ಕ. ಜಿಲ್ಲಾ ಸಂಚಾಲಕ ತಿಲಕ್‌ ಶಿಶಿಲ ಅವರ ಪ್ರೇರಣೆಯಂತೆ ಮಂಗಳೂರಿನಲ್ಲಿ ಉದ್ಯೋಗದಲ್ಲಿರುವ ಕಡಬ ಪರಿಸರದ ಯುವಕರ ಪ್ರಯತ್ನದಿಂದ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ಬಳಿಕ ಕಡಬದ ಸಾಕಷ್ಟು ಯುವಕರು ಕೈಜೋಡಿಸುವ ಮೂಲಕ ಸ್ವತ್ಛ ಕಡಬ ಎನ್ನುವ ಕಲ್ಪನೆಗೆ ಶಕ್ತಿ ತುಂಬುತ್ತಿದ್ದಾರೆ. ಆರಂಭದಲ್ಲಿ ಯುವಕರ ಕೆಲಸವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದ ಕಡಬ ಪೇಟೆಯ ಜನರು ಇದೀಗ ಈ ಯುವಕರ ಸಾಮಾಜಿಕ ಕಳಕಳಿಯ ಬಗ್ಗೆ ಶ್ಲಾಘನೆಯ ಮಾತುಗಳನ್ನಾಡುತ್ತಿದ್ದಾರೆ. ಸ್ವತ್ಛತೆಯ ಕೆಲಸದಲ್ಲಿ ನಿರತರಾಗಿರುವ ಯುವಕರಿಗೆ ಪಾನೀಯ, ಫಲಹಾರ ನೀಡುವ ಮೂಲಕ ತಾವೂ ಸ್ವತ್ಛತೆಯ ಅಭಿಯಾನದಲ್ಲಿ ಕೈಜೋಡಿಸುತ್ತಿದ್ದಾರೆ. ಕಡಬ ಗ್ರಾಮ ಪಂಚಾಯತ್‌ ಕೂಡ ತ್ಯಾಜ್ಯ ಸಾಗಿಸಲು ವಾಹನ, ಗ್ಲೌಸ್‌, ಹಾರೆ, ಬುಟ್ಟಿ ಮುಂತಾದ ಸಲಕರಣೆಗಳನ್ನು ನೀಡುವ ಮೂಲಕ ಸಹಕರಿಸುತ್ತಿದೆ.

ಬದಲಾವಣೆ ಆಗುತ್ತಿದೆ
5 ವಾರಗಳ ಹಿಂದೆ ಸ್ವತ್ಛತಾ ಕಾರ್ಯಕ್ರಮ ನಡೆದ ಮರುದಿನ ನಾವು ಸ್ವತ್ಛ ಮಾಡಿದ ಅಂಗಡಿಗಳ ಮುಂದೆ ಮತ್ತೆ ಎಂದಿನಂತೆಯೇ ಕಸಕಡ್ಡಿಗಳು, ಕೊಳೆತ ತರಕಾರಿಗಳನ್ನು ಬಿಸಾಡಿರುವುದನ್ನು ನೋಡಿ ನಮಗೆ ಭ್ರಮನಿರಸನವಾಗಿತ್ತು. ಆದರೆ ನಾವು ನಮ್ಮ ಪ್ರಯತ್ನ ಬಿಡಲಿಲ್ಲ. ಅಂತಹ ಅಂಗಡಿಗಳ ಮಾಲಕರಲ್ಲಿ ಮಾತುಕತೆ ನಡೆಸಿ ಅವರಿಗೆ ಸ್ವತ್ಛತೆಯ ಅನಿವಾರ್ಯತೆಯ ಕುರಿತು ಮನವರಿಕೆ ಮಾಡುವುದರೊಂದಿಗೆ ಪ್ರತಿ ಅಂಗಡಿಗಳಿಗೆ ಜಾಗೃತಿ ಕರಪತ್ರ ಹಂಚುವ ಕೆಲಸವನ್ನು ಮಾಡಿದೆವು. ಈ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನವೂ ಸಾಕಷ್ಟು ಫಲ ನೀಡಿದೆ. ಈಗ ಪ್ರತಿಯೊಬ್ಬರೂ ಸ್ಪಂದಿಸುತ್ತಿದ್ದಾರೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ಚೀಲ, ಪ್ಲಾಸ್ಟಿಕ್‌ ಬಾಟಲು, ಕಸಕಡ್ಡಿಗಳನ್ನು ಎಸೆಯುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ತಮ್ಮ ಅಂಗಡಿಯ ಮುಂದಿನ ರಸ್ತೆಗೆ ಕೊಳೆತ ತರಕಾರಿಗಳನ್ನು ಎಸೆಯುತ್ತಿದ್ದ ತರಕಾರಿ ಅಂಗಡಿಗಳವರು ಕೂಡ ಈಗ ಅದನ್ನು ನಿಲ್ಲಿಸಿದ್ದಾರೆ. ಇನ್ನೂ ಕೆಲವು ವಾರ ಈ ಸ್ವತ್ಛತೆ ನಡೆಯಲಿದೆ. ಜತೆ ಜತೆಗೆ “ಉಸಿರು ಹಂಚೋಣ’ ಎನ್ನುವ ಧ್ಯೇಯ ವಾಕ್ಯದಡಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನೂ ನಡೆಸುವ ಉದ್ದೇಶ ಇದೆ ಎನ್ನುತ್ತಾರೆ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಪ್ರತಿ ವಾರ ಸ್ವತ್ಛತೆಯಲ್ಲಿ ಭಾಗವಹಿಸುತ್ತಿರುವ ಯುವ ಬ್ರಿಗೇಡ್‌ ಕಾರ್ಯಕರ್ತ ಮರ್ದಾಳದ ಮಿಥುನ್‌ ಅಚ್ಚಿಲ.

ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಬೇಕಿದೆ
ಅಂಗಡಿಗಳಿಂದ ತಿಂಡಿ ತಿನಿಸುಗಳನ್ನು ಕೊಂಡು ತಿನ್ನುವ ವಿದ್ಯಾರ್ಥಿಗಳು ಅವುಗಳ ಪ್ಲಾಸ್ಟಿಕ್‌ ಪೊಟ್ಟಣಗಳನ್ನು ರಸ್ತೆಯಲ್ಲಿಯೇ ಬಿಸಾಡುತ್ತಿರುವುದು ಕಂಡುಬರುತ್ತಿದೆ. ಈ ಕುರಿತು ಶಾಲಾ ಕಾಲೇಜುಗಳ ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಸೂಚನೆ ನೀಡಿ ಸ್ವತ್ಛತೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಮನದಟ್ಟು ಮಾಡಬೇಕಿದೆ ಎನ್ನುತ್ತಾರೆ ಯುವ ಬ್ರಿಗೇಡ್‌ ಕಾರ್ಯಕರ್ತರು.

ಶ್ಲಾಘನೀಯ
ಸ್ವತ್ಛತೆ ಮತ್ತು ತ್ಯಾಜ್ಯ ವಿಲೇವಾರಿಯ ಕೆಲಸ ಇಂದು ಬಲು ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದು ಸುಳ್ಳಲ್ಲ. ಈ ನಿಟ್ಟಿನಲ್ಲಿ ಯುವ ಬ್ರಿಗೇಡ್‌ ಕಾರ್ಯಕರ್ತರು ಕಡಬ ಪೇಟೆಯಲ್ಲಿ ಪ್ರತಿ ರವಿವಾರ ನಡೆಸುತ್ತಿರುವ ಸ್ವತ್ಛತಾ ಕಾರ್ಯ ಶ್ಲಾಘನಾರ್ಹ. ಎಲ್ಲರೂ ಈ ಕಾರ್ಯದಲ್ಲಿ ಕೈಜೋಡಿಸುವ ಅಗತ್ಯವಿದೆ. ಪಂಚಾಯತ್‌ ಕೂಡ ಯುವ ಬ್ರಿಗೇಡ್‌ನ‌ ಕಾರ್ಯಕರ್ತರಿಗೆ ಅಗತ್ಯ ನೆರವು ನೀಡುತ್ತಿದೆ.
– ಚೆನ್ನಪ್ಪ ಗೌಡ ಕಜೆಮೂಲೆ , ಕಡಬ ಗ್ರಾ.ಪಂ. ಪಿಡಿಒ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.