ದಿನಬಳಕೆ ವಸ್ತುಗಳು ತುಟ್ಟಿ : ದೈನಂದಿನ ಬದುಕಿನ ಮೇಲೂ ಪರಿಣಾಮ


Team Udayavani, Aug 30, 2018, 10:28 AM IST

30-agust-3.jpg

ಮಹಾನಗರ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್‌ ಬೆಲೆ 80 ರೂ. ಗಡಿದಾಟಿದ್ದು, ಡೀಸೆಲ್‌ ಕೂಡ 71 ರೂ. ದಾಟಿದೆ. ಇದರಿಂದ ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೊಡಗು ಮತ್ತು ಕೇರಳದ ಅತಿವೃಷ್ಟಿಯಿಂದಾಗಿ ಹೂವು ಸಹಿತ ದಿನಸಿ ಸಾಮಾನು ಬೆಲೆ ಈಗಾಗಲೇ ಹೆಚ್ಚಳವಾಗಿದ್ದು, ಇದರ ಜತೆ ಕಚ್ಚಾತೈಲ ಬೆಲೆ ಏರಿಕೆಯಾಗಿರುವುದು ಕೂಡ ಸಾರ್ವಜನಿಕರ ದೈನಂದಿನ ಬದುಕಿನ ಮೇಲೂ ಪರಿಣಾಮ ಬೀರಲಿದೆ.

ಏರಿಕೆ ಸಾಧ್ಯತೆ
ಒಂದು ತಿಂಗಳಿನಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯಾಗುತ್ತಲೇ ಇದೆ. ಆ. 20ರಂದು 79.35 ರೂ. ಇದ್ದ ಪೆಟ್ರೋಲ್‌ ಬೆಲೆ ಆ. 29ಕ್ಕೆ 80.07 ರೂ.ಗೆ ತಲುಪಿದೆ. ಅದೇ ರೀತಿ ಆ. 20ರಂದು 70.62 ರೂ. ಇದ್ದ ಡೀಸೆಲ್‌ ಬೆಲೆ ಆ. 29ಕ್ಕೆ 71.36 ರೂ. ತಲುಪಿದೆ. ಇದರೊಂದಿಗೆ ಒಂಬತ್ತು ದಿನಗಳಲ್ಲಿ ಪ್ರತೀ ಲೀಟರ್‌ ಪೆಟ್ರೋಲ್‌ಗೆ 72 ಪೈಸೆ, ಡೀಸೆಲ್‌ ಗೆ 74 ಪೈಸೆ ಹೆಚ್ಚಳವಾಗಿದೆ. ಮಾರುಕಟ್ಟೆ ತಜ್ಞರ ಪ್ರಕಾರ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಕಾಣಲಿದೆ.

ಜಿಲ್ಲೆಯಲ್ಲಿ ಪ್ರತೀ ದಿನ ಪೆಟ್ರೋಲ್‌ ಗಿಂತ ಡೀಸೆಲ್‌ ಬಳಕೆಯೇ ಹೆಚ್ಚು. ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಶನ್‌ನಿಂದ ಜಿಲ್ಲೆಯಲ್ಲಿ 62 ಸಾವಿರ ಕಿಲೋ ಲೀಟರ್‌ ಪೆಟ್ರೋಲ್‌ ಮತ್ತು 153 ಸಾವಿರ ಕಿಲೋ ಲೀಟರ್‌ ಡೀಸೆಲ್‌ ಮಾರಾಟವಾಗುತ್ತದೆ. ಅದರಂತೆಯೇ ಇಂಡಿಯನ್‌ ಆಯಿಲ್‌ ಸಂಸ್ಥೆಯಿಂದ ಪ್ರತೀದಿನ ಜಿಲ್ಲೆಯಲ್ಲಿ 190 ಸಾವಿರ ಕಿಲೋ ಲೀಟರ್‌ ಪೆಟ್ರೋಲ್‌ ಮತ್ತು 550 ಸಾವಿರ ಕಿ.ಲೀ. ಡೀಸೆಲ್‌ ಮಾರಾಟವಾಗುತ್ತದೆ.

ಹೂವಿನ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ
ವರಮಹಾಲಕ್ಷ್ಮೀ ಹಬ್ಬದ ವೇಳೆ ತುಟ್ಟಿಯಾಗಿದ್ದ ಹೂವಿನ ಬೆಲೆ ಇನ್ನೂ ಚೇತರಿಕೆಯಾಗಿಲ್ಲ. ವ್ಯಾಪಾರಿಗಳ ಪ್ರಕಾರ ಡೀಸೆಲ್‌ ಬೆಲೆ ಜಾಸ್ತಿಯಾದಂತೆ ಸಾಗಾಟ ವೆಚ್ಚ ಹೆಚ್ಚಾಗುತ್ತದೆ. ಪರಿಣಾಮ ಹೂವುಗಳು ತುಟ್ಟಿಯಾಗುತ್ತವೆ. ಕಚ್ಚಾತೈಲ ಬೆಲೆ ಏರಿಕೆಯಾದ ಕಾರಣ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಬಹುದು. ಸದ್ಯ ಮಂಗಳೂರಿಗೆ ಬೆಂಗಳೂರು, ಮೈಸೂರು, ಶಿವಮೊಗ್ಗ, ಹಾಸನ, ಬಳ್ಳಾರಿ, ಕುಣಿಗಲ್‌, ಹೊಸೂರು ಸಹಿತ ಹಲವೆಡೆಗಳಿಂದ ಬಸ್‌ ಮೂಲಕ ಹೂವುಗಳು ಬರುತ್ತಿವೆ. ವ್ಯಾಪಾರಿಗಳು 10-15 ಕೆ.ಜಿ. (ಒಂದು ಬಾಕ್ಸ್‌) ಹೂವು ಸಾಗಾಟಕ್ಕೆ ಸದ್ಯ 200ರಿಂದ 300 ರೂ. ನೀಡುತ್ತಿದ್ದಾರೆ. ಒಬ್ಬ ವ್ಯಾಪಾರಿ ಸಾಮಾನ್ಯವಾಗಿ ದಿನದಲ್ಲಿ 12ಕ್ಕೂ ಹೆಚ್ಚು ಬಾಕ್ಸ್‌ ಹೂವು ತರಿಸುತ್ತಾರೆ.

ಶೇ. 75ರಷ್ಟು ಹಣ ಡೀಸೆಲ್‌ಗೆ ಖರ್ಚು
ಡೀಸೆಲ್‌ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸಿಟಿ ಬಸ್‌ ಮಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ದಿನದಲ್ಲಿ ಸಂಗ್ರಹವಾದ ಹಣದ ಶೇ.75ರಷ್ಟು ಡೀಸೆಲ್‌ಗೆ ಖರ್ಚಾಗುತ್ತದೆ. ಉಳಿದಂತೆ ತೆರಿಗೆ, ವಾಹನ ನಿರ್ವಹಣೆ ಸೇರಿ ಉಳಿತಾಯವಾಗುವುದಿಲ್ಲ ಎನ್ನುತ್ತಾರೆ ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ.

ಮಂಗಳೂರು ನಗರ: ಪೆಟ್ರೋಲ್‌ ಬೆಲೆ- 80.07 ರೂ., ಡೀಸೆಲ್‌ ಬೆಲೆ- 71.36 ರೂ.

ಮೂರೂವರೆ ತಿಂಗಳಲ್ಲಿ 3.81 ರೂ. ಹೆಚ್ಚಳ:  ಮೂರೂವರೆ ತಿಂಗಳಿನಲ್ಲಿ ನಗರದಲ್ಲಿ ಪೆಟ್ರೋಲ್‌ ಬೆಲೆ 3.81 ರೂ. ಹೆಚ್ಚಳವಾಗಿದೆ. ಅದೇ ರೀತಿ ಡೀಸೆಲ್‌ ಬೆಲೆಯು 3.72 ರೂ. ಹೆಚ್ಚಳವಾಗಿದೆ.

ಮತ್ತಷ್ಟು ಹೆಚ್ಚಳ  ಸಾಧ್ಯತೆ: ಪೆಟ್ರೋಲ್‌, ಡೀಸೆಲ್‌ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಬುಧವಾರ ಪೆಟ್ರೋಲ್‌ ಬೆಲೆ 80 ರೂ. ತಲುಪಿದೆ. ಸದ್ಯದ ಪರಿಸ್ಥಿತಿಯ ಪ್ರಕಾರ ಮುಂದಿನ ಕೆಲವು ದಿನಗಳು ಪೆಟ್ರೋಲ್‌, ಡೀಸೆಲ್‌ ಬೆಲೆ ಮತ್ತಷ್ಟು ಏರಿಕೆಯಾಗುವ ಸಂಭವವಿದೆ.
– ಸತೀಶ್‌ ಎನ್‌. ಕಾಮತ್‌,
ಅಧ್ಯಕ್ಷ, ದ.ಕ. ಉಡುಪಿ ಪೆಟ್ರೋಲ್‌
ಡೀಸೆಲ್‌ ಅಸೋಸಿಯೇಶನ್‌ 

ವಿಶೇಷ ವರದಿ

ಟಾಪ್ ನ್ಯೂಸ್

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.