ಬೆಳ್ತಂಗಡಿ: ನಗರದ ಹೆಸರಾಂತ ಉದ್ಯಮಿ ಬಾವಿಗೆ ಹಾರಿ ಆತ್ಮಹತ್ಯೆ
Team Udayavani, Aug 12, 2020, 8:54 PM IST
ಬೆಳ್ತಂಗಡಿ: ನಗರದ ಖ್ಯಾತ ಉದ್ಯಮಿ, MRF ಟಯರ್ಸ್ ಮಳಿಗೆ ಮಾಲಕ ಪ್ರಕಾಶ್ ತುಳುಪುಲೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತುಳುಪುಳೆ ಅವರು ಇಂದು ಸಾಯಂಕಾಲದ ಸಮಯ ತಮ್ಮ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತಾಗಿ ಇದೀಗ ಮಾಹಿತಿ ಲಭ್ಯವಾಗಿದೆ.
ಈ ಪರಿಸರದಲ್ಲಿ ಹೆಸರಾಂತ ಉದ್ಯಮಿಯಾಗಿ ಪ್ರಕಾಶ್ ಅವರು ಆತ್ಮಹತ್ಯೆಯ ನಿರ್ಧಾರಕ್ಕೆ ಬರಲು ನಿರ್ಧಿಷ್ಟ ಕಾರಣ ಯಾವುದೆಂದು ತಿಳಿದುಬಂದಿಲ್ಲ.
ಇಂದು ಸಂಜೆ 5.30ರ ಸುಮಾರಿಗೆ ತಮ್ಮ ಮನೆ ಮುಂಭಾಗದಲ್ಲೇ ಇರುವ ಮಳಿಗೆ ಬಂದ್ ಮಾಡಿ ಮನೆಗೆ ತೆರಳಿದ್ದರು. ಆ ಬಳಿಕ, ಮನೆ ಹಿಂಭಾಗದ ಶೆಡ್ ಬಳಿಗೆ ಹೋಗಿ ಬರುವುದಾಗಿ ತಮ್ಮ ಮಗಳ ಬಳಿ ತಿಳಿಸಿದ್ದರು.
ಬಹಳ ಹೊತ್ತಾದರೂ ಅಪ್ಪ ಮರಳದಿರುವುದನ್ನು ಕಂಡು ಅವರ ಮಗಳು ಹೊರಬಂದು ನೋಡಿದಾಗ ಪ್ರಕಾಶ್ ಅವರ ಚಪ್ಪಲಿ ಬಾವಿಯ ಸಮೀಪ ಕಂಡಿದೆ. ಇದರಿಂದ ಅನುಮಾನಗೊಂಡ ಮಗಳು ಆತಂಕದಲ್ಲಿ ಕೂಗಿಕೊಂಡಾಗ ಅಕ್ಕಪಕ್ಕದವರು ಗಾಬರಿಗೊಂಡು ಬಂದು ಬಾವಿಯಲ್ಲಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಳಿಕ ಇಸ್ಮಾಯಿಲ್ ಎಂಬುವವರು ಬಾವಿಗೆ ಇಳಿದು ತಳಕ್ಕೆ ಹೋಗಿದ್ದ ಪ್ರಕಾಶ್ ಅವರ ದೇಹವನ್ನು ಮೆಲಕ್ಕೆತ್ತಿ ತಕ್ಷಣವೇ ಆಸ್ಪತ್ರೆಗೆ ರವಾನಿಸುವಲ್ಲಿ ಸಹಕರಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಪ್ರಕಾಶ್ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಂಡ್ಯದಲ್ಲಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ
Panaji: ಸರಕಾರದ ಆ್ಯಪ್ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ
Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ