ರೈತರ  ಬೆಳೆ ಸಾಲಮನ್ನಾ: ಸರ್ವರ್‌ ಸಮಸ್ಯೆಯೇ ಸದ್ಯ ತಲೆನೋವು!


Team Udayavani, Dec 1, 2018, 10:43 AM IST

server.jpg

ಕಡಬ: ರಾಜ್ಯ ಸರಕಾರ ರೈತರ ಬೆಳೆ ಸಾಲ ಮನ್ನಾ ಘೋಷಿಸಿ ತಿಂಗಳುಗಳು ಕಳೆದಿವೆ. ನ. 25ರೊಳಗೆ ರೈತರಿಂದ ಅಗತ್ಯ ದಾಖಲೆಗಳನ್ನು ಪ್ರಾಥಮಿಕ ಸಹಕಾರಿ ಸಂಘಗಳು ಸಂಗ್ರಹಿಸಿ ಸರ್ವರ್‌ಗೆ ಅಪ್ಲೋಡ್‌ ಮಾಡಬೇಕಾಗಿತ್ತು. ಆದರೆ ಸರ್ವರ್‌ ಸಮಸ್ಯೆಯಿಂದಾಗಿ ನಿಗದಿತ ಸಮಯದಲ್ಲಿ ಅಪ್ಲೋಡ್‌ ಮಾಡಲಾಗದೆ ಸಹಕಾರಿ ಸಂಘಗಳು ಪರದಾಡುತ್ತಿವೆ.

ಸಾಲಮನ್ನಾಕ್ಕಾಗಿ ಸಂಘಗಳು
ಸಾಲಗಾರ ಕುಟುಂಬದ ಯಜಮಾನ ಒದಗಿಸಿದ ರೇಷನ್‌ ಕಾರ್ಡ್‌ನಲ್ಲಿ ನಮೂದಿಸಲಾದ ಕುಟುಂಬ ಸದಸ್ಯರೆಲ್ಲರ ಪಾನ್‌ ಕಾರ್ಡ್‌ (ಇದ್ದರೆ), ಆಧಾರ್‌ ಹಾಗೂ ಜಿಲ್ಲಾ ಮಧ್ಯವರ್ತಿ ಬ್ಯಾಂಕಲ್ಲಿ ತೆರೆಯಲಾದ ಖಾತೆ ಸಂಖ್ಯೆ ಪಡೆದು ಅಪ್ಲೋಡ್‌ ಮಾಡಬೇಕು. ಕುಟುಂಬ ಸದಸ್ಯರು ಬೇರೆ ಊರಿನಲ್ಲಿದ್ದರೆ ಅವರ ವಿವರಗಳನ್ನೂ ಸಂಗ್ರಹಿಸಬೇಕು. ಸರ್ವರ್‌ ಸಮಸ್ಯೆಯ ಜತೆಗೆ ಸರಕಾರ ಪದೇ ಪದೇ ವೆಬ್‌ಸೈಟ್‌ ವಿಳಾಸ ಬದಲಾಯಿಸಿದ್ದೂ ತಲೆನೋವಾಗಿದೆ.
ರೈತರಿಂದ ಸಂಗ್ರಹಿಸಿದ ಅಂಕಿ ಅಂಶಗಳನ್ನು ಮೊದಲು ನಿಗದಿತ ಅರ್ಜಿ ನಮೂನೆಯಲ್ಲಿ ತುಂಬಿ ಅನಂತರ ಯಜಮಾನನ ಸಹಿ ಪಡೆಯಬೇಕು. ಈ ರೀತಿ ಪ್ರತಿ ಸಾಲಗಾರ ರೈತನ ಅರ್ಜಿ ಭರ್ತಿ ಮಾಡಲು ಅರ್ಧದಿಂದ ಮುಕ್ಕಾಲು ತಾಸು ಬೇಕು. ಅನಂತರ ವೆಬ್‌ಸೈಟ್‌ನಲ್ಲಿ ಫಾರ್ಮ್ ಭರ್ತಿ ಮಾಡಬೇಕು. ಕೊನೆಯಲ್ಲಿ ರೈತನ ಫೋಟೊ ಹಾಗೂ ಹಸ್ತಾಕ್ಷರ ಇರುವ ಅರ್ಜಿ ನಮೂನೆಯನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡಬೇಕು. ಆಗ ಸರ್ವರ್‌ ಕೈಕೊಟ್ಟರೆ ಮತ್ತೆ ಖಾಲಿ ಫಾರಂ ಎದುರಾಗುತ್ತದೆ!

ಹೈರಾಣಾಗಿರುವ ಸಿಬಂದಿ
ಅರ್ಜಿ ಅಪ್ಲೋಡ್‌ಗಾಗಿ ಸಹಕಾರಿ ಸಂಘಗಳ ಸಿಬಂದಿ ರಾತ್ರಿ ಹಗಲೆನ್ನದೆ ಕೆಲಸ ಮಾಡುತ್ತಿದ್ದಾರೆ. ಅರ್ಜಿ ಸಲ್ಲಿಸಲು ಪ್ರತಿ ಪ್ರಾಥಮಿಕ ಸಂಘಕ್ಕೂ ಒಂದು ಕೋಡ್‌ ಕೊಡಲಾಗಿದೆ. ಈ ಕೋಡ್‌ ಹಾಕಿ ವೆಬ್‌ಸೈಟ್‌ ತೆರೆದರೆ ಮೂಲಮಾಹಿತಿ ತುಂಬುವ ಪೇಜ್‌ ತೆರೆದುಕೊಳ್ಳುತ್ತದೆ. ಇದಕ್ಕೆ ಕೆಲವೊಮ್ಮೆ ಗಂಟೆಗಟ್ಟಲೆ ಕಾಯಬೇಕಾಗುತ್ತದೆ ಅಥವಾ ಯಾವುದೇ ಕ್ಷಣ ಡಿಸ್ಕನೆಕ್ಟ್ ಆಗಬಹುದು. ಇನ್ನೇನು ಎಲ್ಲವನ್ನೂ ಭರ್ತಿ ಮಾಡಿ ಓಕೆ ಕೊಡುವ ಸಂದರ್ಭದಲ್ಲಿ ಸರ್ವರ್‌ ಕೈಕೊಡುವುದೂ ಇದೆ. ಗ್ರಾಮೀಣ ಪ್ರಾ.ಸ. ಸಂಘಗಳಲ್ಲಿ ಸಾಲ ಮನ್ನಾ ಅರ್ಹ ರೈತರು ದೊಡ್ಡ ಸಂಖ್ಯೆಯಲ್ಲಿರುತ್ತಾರೆ. 2ರಿಂದ 3 ಸಾವಿರ ರೈತರು ಇರುವ ಸಂಘಗಳೂ ಇವೆ.

ಅರ್ಜಿ ತುಂಬಿದ ಮೇಲೆ ಆಧಾರ್‌ ಲಿಂಕ್‌ ಪುಟ ತೆರೆದುಕೊಳ್ಳುತ್ತದೆ. ಮೇಲಿನ ಎರಡು ಹಂತಗಳಾದ ಅನಂತರ ಮೂರನೇ ಹಂತದಲ್ಲಿ ವಿಳಾಸ, ನಾಲ್ಕನೇ ಹಂತದಲ್ಲಿ ರೇಶನ್‌ ಕಾರ್ಡ್‌, ಐದನೇ ಹಂತದಲ್ಲಿ ಪಹಣಿ ಪತ್ರದ ಮಾಹಿತಿ ಭರ್ತಿ ಮಾಡಬೇಕಿದೆ. ಆರನೇ ಹಂತದಲ್ಲಿ ರೈತರ ಸ್ವಘೋಷಿತ ನಮೂನೆ ಯನ್ನು ಅಪ್ಲೋಡ್‌ ಮಾಡಬೇಕು. ಬೆಳೆ ವಿಮೆ ಕಂತು ಬಾಕಿಯಿದ್ದಲ್ಲಿ ಅದನ್ನು ಭರ್ತಿ ಮಾಡಿ ಮುಂದುವರಿಯಬೇಕು. ಮಾಹಿತಿ ಒದಗಿ ಸಿದ ಅನಂತರ ವೆರಿಫಿಕೇಶನ್‌ಗೆ ಸಮಯ ತೆಗೆದು ಕೊಳ್ಳುತ್ತದೆ. ತುಂಬಿದ ಅರ್ಜಿಗಳನ್ನು ವೆರಿಫಿಕೇಶನ್‌ ಮಾಡುವುದು ಸಿಬಂದಿಗೆ ಸವಾಲೇ ಸರಿ.

ಬ್ರಾಡ್‌ಬ್ಯಾಂಡ್‌ ಸೇವೆ ಒದಗಿಸದ ಬಿಎಸ್ಸೆನ್ನೆಲ್‌
ಕೇಂದ್ರ ಸರಕಾರವು ರಾಜ್ಯದ ಎಲ್ಲ ಗ್ರಾ.ಪಂ.ಗಳಿಗೆ ರಾಷ್ಟ್ರೀಯ ಆಪ್ಟಿಕಲ್‌ ಫೈಬರ್‌ ನೆಟ್‌ವರ್ಕ್‌ (NOಊN) ಯೋಜನೆಯಡಿ ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್‌ ಸಂಪರ್ಕ ಕಲ್ಪಿಸಿದ್ದು, ಪಂ. ವ್ಯಾಪ್ತಿಯ ಇತರ ಸರಕಾರಿ ಕಚೇರಿಗಳು ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೂ ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್‌ ಸೇವೆ ನೀಡುವಂತೆ ಬಿಎಸ್ಸೆನ್ನೆಲ್‌ಗೆ ಆದೇಶಿಸಿದೆ. ಅರ್ಜಿ ಸಲ್ಲಿಸಿ 2 ವರ್ಷ ಕಳೆದರೂ ಪ್ರಯೋಜನವಾಗಿಲ್ಲ. 

ಪೂರ್ವ ಸಿದ್ಧತೆ ಅಗತ್ಯ
ಸರಕಾರ ಇಂತಹ ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗ ಪೂರ್ವಸಿದ್ಧತೆ ಮಾಡಿಕೊಳ್ಳಬೇಕಿತ್ತು. ದುರ್ಬಲ ಇಂಟರ್ನೆಟ್‌, ಸರ್ವರ್‌ ಸಮಸ್ಯೆಗಳ ನಡುವೆ ಎಲ್ಲ ಕೆಲಸಗಳನ್ನು ಸಂಘಗಳ ಮೇಲೆಯೇ ಹೊರಿಸುವುದು ಸರಿಯಲ್ಲ. ನಮ್ಮಲ್ಲಿ 2,426 ಮಂದಿ ಸಾಲಮನ್ನಾ ಅರ್ಹ ರೈತರಿದ್ದಾರೆ. ನಮ್ಮ ಸಿಬಂದಿ ರಜೆ ಕೂಡ ಪಡೆಯದೆ ಇದೇ ಕೆಲಸದಲ್ಲಿದ್ದಾರೆ. ಸಂಘದ ದೈನಂದಿನ ಕೆಲಸಗಳಿಗೂ ತಡೆಯುಂಟಾಗಿದೆ.
-ರಮೇಶ್‌ ಕಲ್ಪುರೆ, ಅಧ್ಯಕ್ಷರು, ಕಡಬ ಸಿ.ಎ. ಬ್ಯಾಂಕ್‌

ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ
“ಸರ್ವರ್‌ ಸಮಸ್ಯೆ ಬಗ್ಗೆ ಸಾಕಷ್ಟು ಸುಧಾರಣೆ ಮಾಡಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳು ಈ ಸಮಸ್ಯೆ ಯನ್ನು ಪರಿಹರಿಸಲು ಅಗತ್ಯವಿರುವ ಕ್ರಮ ತೆಗೆದು ಕೊಳ್ಳುತ್ತಿದ್ದಾರೆ.’
– ಕೃಷ್ಣಮೂರ್ತಿ ಕೆ.ಎಚ್‌. ಸಹಾಯಕ ಆಯುಕ್ತರು, ಪುತ್ತೂರು

– ನಾಗರಾಜ್‌ ಎನ್‌.ಕೆ.

ಟಾಪ್ ನ್ಯೂಸ್

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Venur: ನಾಯಿಯನ್ನು ಹೊತ್ತೊಯ್ದ ಚಿರತೆ! ವೈರಲ್ ಆಯ್ತು ಸಿಸಿಟಿವಿ ದೃಶ್ಯ

Venur: ನಾಯಿಯನ್ನು ಹೊತ್ತೊಯ್ದ ಚಿರತೆ! ವೈರಲ್ ಆಯ್ತು ಸಿಸಿಟಿವಿ ದೃಶ್ಯ

Uppinangady ಬೆಲೆಬಾಳುವ ಮರ ಕಡಿದು ಸಾಗಾಟ

Uppinangady ಬೆಲೆಬಾಳುವ ಮರ ಕಡಿದು ಸಾಗಾಟ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.