ಫೆ. 12: ಮಂಗಳೂರು ರಥೋತ್ಸವ; ಶ್ರೀ ಕಾಶೀ ಮಠಾಧೀಶರಿಗೆ ಸ್ವಾಗತ
Team Udayavani, Feb 8, 2019, 1:15 AM IST
ಮಂಗಳೂರು: ಶ್ರೀ ಕಾಶೀ ಮಠ ಸಂಸ್ಥಾನದ ಶ್ರೀ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಮಂಗಳೂರು ರಥೋತ್ಸವ ಫೆ. 12ರಂದು ರಥಬೀದಿಯಲ್ಲಿ ನಡೆಯಲಿದ್ದು, ಸ್ವಾಮೀಜಿ ಅವರು ಗುರುವಾರ ನಗರಕ್ಕೆ ಆಗಮಿಸಿದರು.
ಮಂಗಳೂರಿನ ರಥಬೀದಿಯಲ್ಲಿರುವ ಸ್ವದೇಶೀ ಸ್ಟೋರ್ ಬಳಿ ಶ್ರೀ ಕಾಶೀ ಮಠ ಸಂಸ್ಥಾನದ ಶ್ರೀ ಸಂಯಮೀಂದ್ರತೀರ್ಥ ಸ್ವಾಮೀಜಿ ಶ್ರೀಗಳಿಗೆ ಪೂರ್ಣ ಕುಂಭ ಸ್ವಾಗತ ಕೋರಲಾಯಿತು. ಬಳಿಕ ಸಂಸ್ಥಾನದ ಆರಾಧ್ಯ ದೇವರಾದ ಶ್ರೀ ವ್ಯಾಸ ರಘುಪತಿ ನರಸಿಂಹ ದೇವರ ಸಹಿತ ಶ್ರೀಗಳನ್ನು ಅಲಂಕೃತ ಅಡ್ಡ ಪಲ್ಲಕಿಯಲ್ಲಿ ಮೆರವಣಿಗೆ ಮೂಲಕ ಕ್ಷೇತ್ರಕ್ಕೆ ಕರೆದೊಯ್ಯಲಾಯಿತು. ಫೆ. 15ರ ವರೆಗೆ ಶ್ರೀಗಳು ದೇವಸ್ಥಾನದಲ್ಲಿ ಮೊಕ್ಕಾಂ ಹೂಡಲಿದ್ದಾರೆ.