ಡಿಸಿಎಂ ಪರಮೇಶ್ವರ್ ಅವರಿಗೆ ಸಮ್ಮಾನ
Team Udayavani, May 25, 2018, 10:53 AM IST
ಮಹಾನಗರ: ರಾಜ್ಯದ 9ನೇ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್ ಅವರನ್ನು ಮಂಗಳೂರಿನ ಕಾಂಗ್ರೆಸ್ ನಾಯಕರ ನಿಯೋಗವು ಭೇಟಿಯಾಗಿ ಪುಷ್ಪಗುಚ್ಛವನ್ನು ನೀಡಿ ಶುಭಹಾರೈಸಿದರು. ಈಗ ಪಕ್ಷ ಸಂಘಟನೆಯ ಬಗ್ಗೆ ವಿಚಾರ ವಿನಿಮಯ ನಡೆಸಿ, ನಗರದ ಎಲ್ಲ ಅಭಿವೃದ್ಧಿ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ಕೋರಲಾಯಿತು.
ಮಂಗಳೂರು ಸೌತ್ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜೆ. ನಾಗೇಂದ್ರ ಕುಮಾರ್, ದಕ್ಷಿಣ ಕ್ಷೇತ್ರದ ಯುವ ಇಂಟಕ್ ಅಧ್ಯಕ್ಷರಾದ ಪುನೀತ್ ಶೆಟ್ಟಿ, ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಜೆ. ಶಶಿಕಾಂತ್ ಶೆಟ್ಟಿ, ಯುವ ಇಂಟಕ್ನ ಕಾರ್ಯದರ್ಶಿ ಮುದಾಸಿರ್ ಕುದ್ರೋಳಿ, ಜಿಲ್ಲಾ ಅಲ್ಪಸಂಖ್ಯಾಕರ ಕಾಂಗ್ರೆಸ್ ಉಪಾಧ್ಯಕ್ಷ ಅನಿಲ್ ತೋರಸ್ ಜೆಪ್ಪು ಉಪಸ್ಥಿತರಿದ್ದರು.