ಬೀಫ್ ಸ್ಟಾಲ್ಗಳಿಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿಯ ಬಂಧನ
Team Udayavani, Jan 17, 2021, 2:24 AM IST
ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯಲ್ಲಿ ಜ. 8ರ ರಾತ್ರಿ ಬೀಫ್ ಸ್ಟಾಲ್ಗಳಿಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿ ಒಳಪೇಟೆಯ ಬಾಡಿಗೆ ಮನೆ ನಿವಾಸಿ ನಾಗರಾಜ್ (39) ನನ್ನು ಪೊಲೀಸರು ಬಂಧಿಸಿದ್ದಾರೆ.
ಕಬ್ಬಿಣದ ಕೆಲಸ, ಕೂಲಿ ಕೆಲಸ ಮಾಡುತ್ತಿರುವ ನಾಗರಾಜ್ ಒಂದು ವಾರದಿಂದ ಬೀಫ್ ಸ್ಟಾಲ್ಗಳಿಂದ ಮಾಂಸ ಖರೀದಿಸಿ ಸ್ನೇಹಿತ ಲತೀಫ್ ಮನೆಗೆ ತೆಗೆದುಕೊಂಡು ಹೋಗುತ್ತಿದ್ದ. ಒಮ್ಮೆ ಸ್ಟಾಲ್ನಲ್ಲಿ 300 ರೂ. ಮಾಂಸ ಖರೀದಿಸಿ ಹೆಚ್ಚುವರಿ ಮಾಂಸ ಕೊಡುವಂತೆ ಅಂಗಡಿಯವನಲ್ಲಿ ಕೇಳಿದ. ಅಂಗಡಿಯವನು ಬೈದು ಕಳುಹಿಸಿದ್ದ. ಇದರಿಂದ ತನಗೆ ಅವಮಾನವಾಯಿತು ಎಂದು ಭಾವಿಸಿ ರಾತ್ರಿ ಸೀಮೆಎಣ್ಣೆ ಹಾಕಿ ಸ್ಟಾಲ್ಗೆ ಬೆಂಕಿ ಹಚ್ಚಿದ. ಬಳಿಕ ಮನೆಗೆ ಹೋಗಿ ತಾಯಿಗೆ ವಿಷಯ ತಿಳಿಸಿದ. “ಕುಡಿದು ಬಂದು ಏನೋ ಮಾತನಾಡುತ್ತೀಯ’ ಎಂದು ತಾಯಿ ಬೈದು ಸುಮ್ಮನಾಗಿದ್ದರು. ಮರುದಿನ ಘಟನೆ ಬೆಳಕಿಗೆ ಬಂದಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ