ಸ್ಥಳೀಯರ ಮಾತನ್ನು ಧಿಕ್ಕರಿಸಿ ಕಡಲಿಗಿಳಿದ ಯುವಕನನ್ನು ರಕ್ಷಿಸಿದ ಮೀನುಗಾರರು!
Team Udayavani, Jun 28, 2020, 9:22 PM IST
ಪ್ರಕ್ಷುಬ್ಧ ಕಡಲನ್ನೂ ಲೆಕ್ಕಿಸದೇ ಈಜಲು ತೆರಳಿ ಕೆಟ್ಟು ನಿಂತ ಹಡಗನ್ನು ಏರಿ ರಕ್ಷಣೆಗೆ ಮೊರೆ ಇಡುತ್ತಿರುವ ಯುವಕ.
ಸುರತ್ಕಲ್: ಇದು ಮಳೆಗಾಲದ ಸಮಯ, ಪಶ್ಚಿಮ ಸಮುದ್ರ ಪ್ರಕುಬ್ಧವಾಗಿರುವ ಕಾಲ.
ಸಾಮಾನ್ಯವಾಗಿ ಮಳೆಗಾಲವನ್ನು ಹೊರತುಪಡಿಸಿದ ದಿನಗಳಲ್ಲೂ ಕಡಲುಬ್ಬರ ಇದ್ದ ಸಂದರ್ಭಗಳಲ್ಲಿ ಸಮುದ್ರಕ್ಕೆ ಇಳಿಯುವುದು ಅಪಾಯಕಾರಿ.
ಆದರೆ ಮಳೆಗಾಲದಲ್ಲಿ ಮೀನುಗಾರರೂ ಸಮುದ್ರಕ್ಕೆ ಇಳಿಯುವುದಿಲ್ಲ ಮತ್ತು ಇದು ತಲೆ ತಲಾಂತರಗಳಿಂದ ನಮ್ಮ ಕಡಲ ಮಕ್ಕಳು ಪಾಲಿಸಿಕೊಂಡು ಬಂದಿರುವ ಸಂಪ್ರದಾಯ.
ಆದರೆ ಪ್ರವಾಸಿಗರಿಗೆ ಇದೆಲ್ಲಾ ಅರ್ಥವಾಗುವುದೇ ಇಲ್ಲ ಮತ್ತು ಈ ಮಾತಿಗೆ ಪೂರಕ ಎಂಬಂತ ಘಟನೆಯೊಂದು ಇಂದು ಸುರತ್ಕಲ್ ಸಮೀಪದ ಗುಡ್ಡೆಕೊಪ್ಪ ಎಂಬಲ್ಲಿ ನಡೆದಿದೆ.
ಸುರತ್ಕಲ್ ಸಮೀಪದ ಗುಡ್ಡೆಕೊಪ್ಪ ಎಂಬಲ್ಲಿ ಸಮುದ್ರದಲ್ಲಿ ಲಂಗರು ಹಾಕಿ ನಿಂತಿರುವ ಭಗವತೀ ಪ್ರೇಂ ಎಂಬ ಬೃಹತ್ ನೌಕೆಯನ್ನು ನೋಡಲು ಜನ ಬರುತ್ತಿದ್ದಾರೆ. ಅದರಲ್ಲೂ ರಜಾ ದಿನವಾಗಿದ್ದ ನಿನ್ನೆ ಜನ ಸ್ವಲ್ಪ ಹೆಚ್ಚೇ ಇದ್ದರು.
ಈ ನಡುವೆ ಪುತ್ತೂರಿನಿಂದ ಬಂದವರೆನ್ನಲಾಗಿದ್ದ ಯುವಕ ಯುವತಿಯರ ಗುಂಪಿನಲ್ಲಿದ್ದ ಕೆಲವರು ಸ್ಥಳೀಯ ಮೀನುಗಾರರ ಎಚ್ಚರಿಕೆಯನ್ನೂ ನಿರ್ಲಕ್ಷಿಸಿ ಸಮುದ್ರಕ್ಕೆ ಇಳಿದಿದ್ದಾರೆ. ಇವರಲ್ಲಿ ಯುವಕನೊಬ್ಬ ಈಜಾಡುತ್ತಾ ಈ ನೌಕೆಯ ಹತ್ತಿರ ಹೋದವ ಅಲೆಗಳ ರೌದ್ರತೆಗೆ ಭಯಗೊಂಡು ನೌಕೆಯ ಲ್ಯಾಡರ್ ಏರಿನಿಂತು ಸಹಾಯಕ್ಕಾಗಿ ಅಂಗಲಾಚಿದ್ದಾನೆ.
ಈ ಸಂದರ್ಭದಲ್ಲಿ ಗುಡ್ಡೆಕೊಪ್ಪ ನಿವಾಸಿಗಳಾದ ಯಾದವ ಶ್ರೀಯಾನ್ ಹಾಗೂ ಸುಮನ್ ಕೋಟ್ಯಾನ್ ಅವರ ತಂಡ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಭೋರ್ಗರೆಯಿತ್ತಿದ್ದ ಅಲೆಗಳ ನಡುವೆ ಈಜಾಡಿ ಆ ಯುವಕನನ್ನು ಸುರಕ್ಷಿತವಾಗಿ ದಡಕ್ಕೆ ಕರೆದುಕೊಂಡುಬಂದಿದ್ದಾರೆ.
ಇದೀಗ ಶ್ರೀಯಾನ್ ಹಾಗೂ ಸುಮನ್ ಅವರ ಸಾಹಸ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ ಮತ್ತು ಇಲ್ಲಿಗೆ ಬರುವ ಪ್ರವಾಸಿಗರು ಸ್ಥಳೀಯರ ಸಲಹೆಗೆ ಕಿವಿಕೊಡಬೇಕೆಂಬ ಆಗ್ರಹವೂ ಕೇಳಿಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್ ಸಾವು
Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!
Mangaluru: ಕುಡಿಯುವ ನೀರಿನ ಕೊರತೆ, ಬೋಟ್, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ
MUST WATCH
ಹೊಸ ಸೇರ್ಪಡೆ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!